ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ!

Vijay Hazare Trophy: Dube ton in vain as Karnataka beats Mumbai in thriller

ಬೆಂಗಳೂರು, ಅಕ್ಟೋಬರ್ 10: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 10) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್‌ 10, ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡ 9 ರನ್ ರೋಚಕ ಜಯ ಗಳಿಸಿದೆ. ಕೆಎಲ್ ರಾಹುಲ್, ದೇವದತ್ ಪಡಿಕ್ಕಳ್, ನಾಯಕ ಮನೀಷ್ ಪಾಂಡೆ ಸೊಗಸಾದ ಬ್ಯಾಟಿಂಗ್‌ನಿಂದ ರಾಜ್ಯ ತಂಡಕ್ಕೆ ಗೆಲುವು ಒಲಿದಿದೆ.

ಭಾರತ vs ದ.ಆಫ್ರಿಕಾ: ಚೇತೇಶ್ವರ್ ಪೂಜಾರ ಕೆಣಕಿದ ಕಾಗಿಸೊ ರಬಾಡಭಾರತ vs ದ.ಆಫ್ರಿಕಾ: ಚೇತೇಶ್ವರ್ ಪೂಜಾರ ಕೆಣಕಿದ ಕಾಗಿಸೊ ರಬಾಡ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕದಿಂದ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ 58, ಪಡಿಕ್ಕಳ್ 79, ಪಾಂಡೆ 62, ರೋಹನ್ ಕದಮ್ 32, ಶರತ್ ಬಿಆರ್ 28, ಕೃಷ್ಣಪ್ಪ ಗೌತಮ್ 22, ಅಭಿಮನ್ಯು ಮಿಥುನ್ 14 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 7 ವಿಕೆಟ್ ಕಳೆದು 312 ರನ್ ಬಾರಿಸಿತ್ತು.

ಕ್ರಿಕೆಟರ್ ಮನೀಶ್ ಪಾಂಡೆ ಜೊತೆಗೆ ನಟಿ ಆಶ್ರಿತಾ ಶೆಟ್ಟಿ ಮದುವೆಕ್ರಿಕೆಟರ್ ಮನೀಶ್ ಪಾಂಡೆ ಜೊತೆಗೆ ನಟಿ ಆಶ್ರಿತಾ ಶೆಟ್ಟಿ ಮದುವೆ

ಗುರಿ ಬೆನ್ನತ್ತಿದ ಮುಂಬೈ ಪರ ಶಿವಂ ದೂಬೆಯ ಶತಕದಾಟ ವ್ಯರ್ಥಗೊಂಡಿತು. ಯಶಸ್ವಿ ಜೈಸ್ವಾಲ್ 22, ಆದಿತ್ಯ ತಾರೆ 32, ಸಿದ್ದೇಶ್ ಲಾಡ್ 34, ಸೂರ್ಯ ಕುಮಾರ್ ಯಾದವ್ 26, ಶಿವಂ ದೂಬೆ 118, ಶಾರ್ದೂಲ್ ಠಾಕೂರ್ 26 ರನ್‌ನೊಂದಿಗೆ ಮುಂಬೈ 48.1 ಓವರ್‌ಗೆ ಸರ್ವ ಪತನ ಕಂಡು 303 ರನ್ ಪೇರಿಸಲಷ್ಟೇ ಶಕ್ತವಾಯ್ತು.

ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಜೊತೆ ದಾಖಲೆ ಪಟ್ಟಿ ಸೇರಿದ ಮಯಾಂಕ್ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಜೊತೆ ದಾಖಲೆ ಪಟ್ಟಿ ಸೇರಿದ ಮಯಾಂಕ್

ಕರ್ನಾಟಕ ಇನ್ನಿಂಗ್ಸ್‌ನಲ್ಲಿ ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ಧೃಮಿಲ್ ಮಟ್ಕರ್, ಸಿದ್ಧೇಶ್ ಲಾಡ್ ತಲಾ 1 ವಿಕೆಟ್ ಪಡೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮುಥುನ್ 3, ಪ್ರಸಿದ್ಧ್ ಕೃಷ್ಣ 2, ಕೃಷ್ಣಪ್ಪ ಗೌತಮ್ 3, ರೋನಿತ್ ಮೋರೆ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.

Story first published: Thursday, October 10, 2019, 23:03 [IST]
Other articles published on Oct 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X