ಅಭಿಮಾನಿಗಳು ನಿರಾಸೆಗೊಳಗಾಗಿದ್ದರು
'ನಮಗೆ ನಾಳೆಯ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸಬೇಕಾಗಿದೆ. ನಮ್ಮ ಫುಟ್ಬಾಲ್ ಅಭಿಮಾನಿಗಳಿಗೆ ನಾಳೆಯ ಪಂದ್ಯ ಎಷ್ಟು ಪ್ರಮುಖವಾದುದು ಎಂಬುದನ್ನು ಆಟಗಾರರು ಅರಿತು ಆಡಬೇಕು. ಬೆಂಗಳೂರು ತಂಡದ ವಿರುದ್ಧ ಸೋಲನುಭವಿಸಿದಾಗಾಲೇ ನಮ್ಮ ಅಭಿಮಾನಿಗಳು ನಿರಾಸೆಗೊಳಗಾಗಿದ್ದರು. ನಾವು ಕೇರಳ ವಿರುದ್ಧ ಜಯ ಗಳಿಸಿ ಮತ್ತೆ ಜಯದ ಹಾದಿ ಹಿಡಿಯಬೇಕು' ಎಂದು ಗ್ರೆಗೋರಿ ಹೇಳಿದರು.
ತಂಡದ ಚಾಂಪಿಯನ್ ಪಟ್ಟ ಗೆದ್ದಾಗ ಇದ್ದ ಆಟಗಾರರೇ ಈಗ ತಂಡದಲ್ಲಿದ್ದಾರೆ. ಆದರೂ ಹೆಚ್ಚಿನ ಪಂದ್ಯಗಳಲ್ಲಿ ಸೋತಿರುವುದಕ್ಕೆ ಆಟಗಾರರು ಪ್ರಮಾದವೇ ಕಾರಣ ಎಂದು ಕೋಚ್ ಆರೋಪಿಸಿದ್ದಾರೆ.
'ಹೆಚ್ಚಿನ ನಮ್ಮ ಆಟಗಾರರು ಕಳೆದವರ್ಷದವರೇ. ಆದರೆ ಈ ಬಾರಿ ನಮ್ಮ ಆಟಗಾರರು ಉತ್ತಮವಾಗಿ ಪ್ರದರ್ಶನ ತೋರಿಲ್ಲ. ಆಟಗಾರರು ಯಾವದೇ ಪ್ರಮಾದವನ್ನು ಮಾಡಬಾರದು ಎಂಬ ನಿರೀಕ್ಷೇ ಇರುತ್ತದೆ' ಎಂದು ಗ್ರೆಗೋರಿ ಹೇಳಿದರು.
ಉತ್ತಮ ಪ್ರದರ್ಶನ ತೋರಿಲ್ಲ
ಕೇರಳ ಬ್ಲಾಸ್ಟರ್ಸ್ ಕೂಡ ಈ ಬಾರಿ ಉತ್ತಮ ಪ್ರದರ್ಶನ ತೋರಿಲ್ಲ. ಎಟಿಕೆ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಕೇರಳ ಇದುವರೆಗೂ ಜಯ ಗಳಿಸಿರಲಿಲ್ಲ. ತಂಡ ಏಳು ಪಂದ್ಯಗಳಿಂದ ಏಳು ಅಂಕ ಗಳಿಸಿದೆ. ಕೇರಳ ತಂಡ ಗೋಲು ಗಳಿಸುವಲ್ಲಿ ವಿಲವಾಗುತ್ತಿರುವುದು ಗಮನಾರ್ಹ. ನಾರ್ತ್ ಈಸ್ಟ್ ತಂಡದ ವಿರುದ್ಧದ ಪಂದ್ಯದಲ್ಲಿ ಅಂತಿಮ ್ಳಕ್ಷಿಣದಲ್ಲಿ ಗೋಲು ನೀಡಿ ಸೋಲಿಗೆ ಶರಣಾಗಬೇಕಾಯಿತು. 90ನೇ ನಿಮಿಷದವರೆಗೂ ಮೇಲುಗೈ ಸಾಧಿಸಿ ಉಳಿದ ಹೆಚ್ಚುವರಿ ಸಮಯದಲ್ಲಿ ಎರಡು ಗೋಲುಗಳನ್ನು ನೀಡಿ ಸೋತಿತ್ತು.
ಕೊನೆಯ ನಿಮಿಷದ ಆಟ ಮುಖ್ಯ
'ತಂಡದಲ್ಲಿರುವ ಸಮಸ್ಯೆಯ ಬಗ್ಗೆ ಪ್ರತಿಯೊಂದು ದೃಷ್ಟಿಕೋನದಿಂದಲೂ ನೋಡಿರುವೆ. ವಿಶೇಷವಾಗಿ ತಂಡ ಕೊನೆಯ ನಿಮಿಷದಲ್ಲಿ ಹೇಗೆ ಆಡುತ್ತದೆ ಎಂಬುದು ಮುಖ್ಯ. ಮುಂಬೈ ವಿರುದ್ಧದ ಪಂದ್ಯದಲ್ಲಿ ಪ್ರಾಂಜಲ್ ಭೂಮಿಜ್ ಹೊಡೆದ ಗೋಲಿನ ಬಗ್ಗೆ ಹೆಚ್ಚು ಹೇಳಬಯಸುವುದಿಲ್ಲ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಂಡ್ರಿಜಾ ಆಫ್ ಸೈಡ್ನಲ್ಲಿದ್ದರು. ಸಂದೇಶ್ ಜಿಂಗಾನ್ ಗಾಯಗೊಂಡಾಗ ಅದು ಆ್ಸೈಡ್ ಆಗಿತ್ತು' ಎಂದು ಕೇರಳದ ಕೋಚ್ ಹೇಳಿದರು.
ತೀರ್ಪು ನಮ್ಮ ಪರವಾಗಿ ಇರಲಿಲ್ಲ
ನಾರ್ತ್ ಈಸ್ಟ್ ವಿರುದ್ದದ ಪಂದ್ಯದಲ್ಲಿ ಸಂದೇಶ್ಗೆ ವಿರುದ್ಧವಾಗಿ ಪೆನಾಲ್ಟಿ ನೀಡಲಾಗಿತ್ತು. ನಾವು 11ರ ವಿರುದ್ಧ 10 ಆಟಗಾರರ ಆಡಬೇಕಾಯಿತು. ರೆರಿಗಳು ನೀಡಿದ ತೀರ್ಪು ನಮ್ಮ ಪರವಾಗಿ ಇದ್ದಿರಲಿಲ್ಲ, ಎಂದು ಇಂಗ್ಲೆಂಡ್ನ ಮಾಜಿ ಗೋಲ್ಕೀಪರ್ ಹೇಳಿದರು.