ಅಲ್ಫಾರೋ ವಿಫಲ
ನಂಬುಗೆ ಆಟಗಾರ ಎಮಿಲಿಯಾನೋ ಅಲ್ಫಾರೋ ಈ ಬಾರಿ ತಮ್ಮ ನೈಜ ಆಟ ತೋರುವಲ್ಲಿ ವಿಲರಾಗಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಸಿಕ್ಕ ಎರಡು ಪೆನಾಲ್ಟಿ ಅವಕಾಶಗಳನ್ನು ಗೋಲಾಗಿಸುವಲ್ಲಿ ಅವರು ವಿಫಲರಾದರು. ಮಾರ್ಸೆಲಿನೋ ಕೂಡ ಇನ್ನೂ ತಮ್ಮ ನೈಜ ಆಟ ತೋರಲಿಲ್ಲ.
10ನೇ ಸ್ಥಾನದಲ್ಲಿ ಚೆನ್ನೈಯಿನ್
ಅಟ್ಯಾಕ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ನೀರಸ ಪ್ರದರ್ಶನ ತೋರಿರುವ ಜಾನ್ ಗ್ರೆಗೋರಿ ಅವರ ಚೆನ್ನೈಯಿನ್ ತಂಡ 10ನೇ ಸ್ಥಾನದಲ್ಲಿದೆ. ಪುಣೆಯ ಜತೆಯಲ್ಲೇ ಎದುರಾಳಿ ತಂಡಕ್ಕೆ 11 ಗೋಲುಗಳು ನೀಡಿರುವ ಚೆನ್ನೈಯಿನ್ ಡಿಫೆನ್ಸ್ ವಿಭಾಗದ ಕತೆ ಹೇಳುತ್ತಿದೆ.
ಮುಜುಗರದ ಪರಿಸ್ಥಿತಿ
‘ಇದುವರೆಗೂ ನಾವು ಋತುವಿಲನಲ್ಲಿ ಅತ್ಯಂತ ಮುಜುಗರದ ಪರಿಸ್ಥಿತಿಯನ್ನು ಕಂಡಿದ್ದೇವೆ, ಆರು ಪಂದ್ಯಗಳಿಂದ ಗಳಿಸಿರುವುದು ಕೇವಲ ಒಂದು ಅಂಕ. ಇಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಅಂಗಣದಲ್ಲಿ ಮಾತಾಡಬೇಕಾಗಿದೆ. ಗೋಲು ಗಳಿಸಲು ಯಾವ ಆಟಗಾರರು ಉತ್ಸುಕರಾಗಿದ್ದಾರೋ ಅವರಿಗೆ ಅವಕಾಶ ನೀಡಬೇಕು. ಯಾವ ಆಟಗಾರರಿಗೆ ಮೂರು ಅಂಕಗಳ ಅಗತ್ಯವಿದೆಯೋ ಅವರಿ ಅವಕಾಶ ನೀಡಲಾಗುವುದು,‘ ಎಂದರು.
ಕದನ ಕುತೂಹಲ
ಇದುವರೆಗೂ ಆಡದ ಆಟಗಾರರಿಗೆ ಅವಕಾಶ ಸಿಗಲಿದೆ ಎಂಬ ಅಂಶ ಗ್ರೆಗೋರಿ ಅವರ ಮಾತಿನಿಂದ ಸ್ಪಷ್ಟವಾಗಿದೆ. ಕರಣ್ಜಿತ್ ಸಿಂಗ್ ಅವರ ಸ್ಥಾನವನ್ನು ಸಂಜೀವನ್ ಘೋಷ್ ಅವರು ಪಡೆದುಕೊಳ್ಳುವ ಸಾಧ್ಯತೆ ಇದೆ. ಜಯಕ್ಕಾಗಿ ಹಾತೋರೆಯುತ್ತಿರುವ ಎರಡೂ ತಂಡಗಳಲ್ಲಿ ಯಾರ ಯೋಜನೆ ಕಾರ್ಯರೂಪಕ್ಕೆ ಬರುವುದು ಎಂಬ ಕುತೂಹಲ ಸಹಜವಾಗಿದೆ.