
ವಿವಾದದ ಹಿನ್ನೆಲೆ
ಸೋಮವಾರ ಭಾರತ ತಂಡ ಇನ್ನಿಂಗ್ಸ್ ಆಡುತ್ತಿದ್ದಾಗ ಮೊದಲ ಸೆಶನ್ ಬಳಿಕ ಡ್ರಿಂಕ್ಸ್ ಬ್ರೇಕ್ ವೇಳೆ ಆಟ ಕ್ಷಣ ಕಾಲ ನಿಲುಗಡೆಯಾಗಿತ್ತು. ಆಗ ಒಬ್ಬ ಆಟಗಾರ ಸ್ಪಂಪ್ ಬಳಿ ಬಂದು ಹೊಂಚು ಹಾಕಿ ಬ್ಯಾಟ್ಸ್ಮನ್ ಹಾಕಿದ್ದ ಮಾರ್ಕ್ ಅಳಿಸಿ ಅಲ್ಲಿಂದ ತೆರಳುತ್ತಾನೆ. ಆ ಬಳಿಕ ಬ್ಯಾಟಿಂಗ್ಗೆ ಬರುವ ಪಂತ್ ಮತ್ತೆ ಗೆರೆ ಎಳೆದು ಬ್ಯಾಟಿಂಗ್ ಮಾಡುತ್ತಾರೆ. ಈ ದೃಶ್ಯವೆಲ್ಲ ಸ್ಟಂಪ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಕ್ ಅಳಿಸುವ ಆಟಗಾರನ ಮುಖ ಕಾಣಿಸುತ್ತಿಲ್ಲ. ಆದರೆ ಅಳಿಸಿದ್ದು ಸ್ಮಿತ್ ಎನ್ನಲಾಗುತ್ತಿದೆ. ಸ್ಮಿತ್ ಅವರ ಈ ವರ್ತನೆ ವಿವಾದ ಸೃಷ್ಟಿಸಿದೆ.
ಸ್ಮಿತ್ಗೆ ಕಂಟಕ
ಸ್ಟೀವ್ ಸ್ಮಿತ್ ಅವರು ಪಿಚ್ ಸ್ಕಫಿಂಗ್ನಲ್ಲಿ ಪಾಲ್ಗೊಂಡ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸ್ಮಿತ್ ಆಡುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 2021ರ ಐಪಿಎಲ್ ಸೀಸನ್ನಿಂದ ಸ್ಮಿತ್ ಅವರನ್ನು ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ. ಆರ್ಆರ್ಗೆ ಸ್ಮಿತ್ ನಾಯಕರಾಗಿದ್ದಾರೆ. ಹೀಗಾಗಿ ಫ್ರಾಂಚೈಸಿ ಸ್ಮಿತ್ ಅವರನ್ನು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಸ್ಮಿತ್ ದುರ್ವರ್ತನೆ ಬಳಿಕ ಅವರನ್ನು ತಂಡದಿಂದ ಕೈಬಿಡಲು ರಾಜಸ್ಥಾನ್ ನಿರ್ಧರಿಸಿದೆ ಎಂದು ಸ್ಪೋರ್ಟ್ಸ್ ಟುಡೇ ವರದಿ ಮಾಡಿದೆ.

ನಿಷೇಧಕ್ಕೀಡಾಗಿದ್ದ ಆರ್ಆರ್
2014 ಮತ್ತು 2015ರಲ್ಲಿ ಅಂದರೆ ರಾಸ್ಥಾನ್ ತಂಡ ಐಪಿಎಲ್ನಿಂದ ಎರಡು ವರ್ಷಗಳ ಬ್ಯಾನ್ಗೆ ಈಡಾಗುವ ಮುನ್ನ ಸ್ಟೀವ್ ಸ್ಮಿತ್ ಅವರು ತಂಡದ ಭಾಗವಾಗಿದ್ದರು. 2008ರ ಚಾಂಪಿಯನ್ಸ್ ಆಗಿರುವ ರಾಜಸ್ಥಾನ್ನಿಂದ ಸ್ಮಿತ್ ಅವರು 2018ರ ಸೀಸನ್ಗಾಗಿ ಉಳಿಸಿಕೊಂಡಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಚೆಂಡು ವಿರೂಪ ಪ್ರಕರಣಕ್ಕಾಗಿ 1 ವರ್ಷ ನಿಷೇಧಕ್ಕೀಡಾಗಿದ್ದರಿಂದ 2018ರ ಸೀಸನ್ನಲ್ಲಿ ಆರ್ಆರ್ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಿಕೊಂಡಿದ್ದರು.


Click it and Unblock the Notifications
