ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಹೊಸ ಟಿ20 ತತ್ವ ಅಳವಡಿಸಿಕೊಳ್ಳುತ್ತಿರುವ ಮಾಜಿ ನಾಯಕ; ಸಂಜಯ್ ಮಂಜ್ರೇಕರ್ ಶ್ಲಾಘನೆ

Former Captain Virat Kohli Try To Adopt Indias New T20 Philosophy; Sanjay Manjrekar Praised

ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಅನ್ನು ಮರಳಿ ಪಡೆಯಲು ಬಯಸಿ ವಿಫಲವಾದ ಸಂದರ್ಭದಲ್ಲಿಯೇ, ಟಿ20 ಕ್ರಿಕೆಟ್‌ನಲ್ಲಿ ಭಾರತದ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಬೇಕಾಗಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

Breaking: ಜಿಂಬಾಬ್ವೆ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ನಾಯಕ; ಧವನ್ ಉಪನಾಯಕBreaking: ಜಿಂಬಾಬ್ವೆ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ನಾಯಕ; ಧವನ್ ಉಪನಾಯಕ

"ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧ ಆಡಿದ 2 ಟಿ20 ಪಂದ್ಯಗಳ ಸಮಯದಲ್ಲಿ ಅನುಭವಿಸಿದ ಲೀನ್ ಪ್ಯಾಚ್‌ನ ಒತ್ತಡವನ್ನು ಎದುರಿಸುತ್ತಿದ್ದರೂ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಸಂಜಯ್ ಮಂಜ್ರೇಕರ್ ತಿಳಿಸಿದರು.

ಟಿ20 ಕ್ರಿಕೆಟ್‌ನ ಶೈಲಿಯನ್ನು ಬದಲಾಯಿಸಲು ಬಯಸುತ್ತಾರೆ

ಟಿ20 ಕ್ರಿಕೆಟ್‌ನ ಶೈಲಿಯನ್ನು ಬದಲಾಯಿಸಲು ಬಯಸುತ್ತಾರೆ

ಗಮನಾರ್ಹವಾದ ಅಂಶವೆಂದರೆ, ಬ್ಯಾಟ್‌ನೊಂದಿಗಿನ ಸಂಪ್ರದಾಯವಾದಿ ವಿಧಾನದಿಂದಾಗಿ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆಯಲು ವಿಫಲವಾಗಿತ್ತು ಮತ್ತು ಅವರು ತಮ್ಮ ಟಿ20 ಕ್ರಿಕೆಟ್‌ನ ಶೈಲಿಯನ್ನು ಬದಲಾಯಿಸಲು ಬಯಸುತ್ತಾರೆ ಎಂದು ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆಲುವಿನ ನಂತರ ಮಾತನಾಡಿದ ರೋಹಿತ್ ಶರ್ಮಾ, ತಂಡದ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಆಟಗಾರರಿಗೆ ಪರವಾನಗಿ ನೀಡಲಾಗಿದೆ ಮತ್ತು ಅವರು ಎದುರಿಸಬಹುದಾದ ಸಂಭಾವ್ಯ ವೈಫಲ್ಯಗಳ ಬಗ್ಗೆ ಭರವಸೆ ನೀಡಿದ್ದರು.

1ನೇ ಟಿ20 ಪಂದ್ಯದಲ್ಲಿ 6 ಎಸೆತಗಳಲ್ಲಿ 11 ರನ್

1ನೇ ಟಿ20 ಪಂದ್ಯದಲ್ಲಿ 6 ಎಸೆತಗಳಲ್ಲಿ 11 ರನ್

ಇಂಗ್ಲೆಂಡ್‌ನಲ್ಲಿ ನಡೆದ ಸರಣಿಗಾಗಿ ಭಾರತದ ಟಿ20 ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ, 1ನೇ ಟಿ20 ಪಂದ್ಯದಲ್ಲಿ 6 ಎಸೆತಗಳಲ್ಲಿ 11 ರನ್ ಗಳಿಸಿದರು, ಏಕೆಂದರೆ ಅವರು ಬ್ಯಾಟ್ ಬೀಸಿದ ಬಹುತೇಕ ಎಲ್ಲದರಲ್ಲೂ ಯಶಸ್ಸು ಪಡೆಯಲು ಪ್ರಯತ್ನಿಸಿದರು. ವಿರಾಟ್ ಕೊಹ್ಲಿ ಅವರು ಮತ್ತೊಂದು ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದಾಗ ಶಾರ್ಟ್ ಎಕ್ಸ್‌ಟ್ರಾ-ಕವರ್‌ನಲ್ಲಿ ಕ್ಯಾಚ್ ನೀಡುವ ಮೊದಲು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

ಎರಡನೇ ಟಿ20 ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅಸಾಧಾರಣವಾಗಿ ದೊಡ್ಡ ಹೊಡೆತಗಳೊಂದಿಗೆ ಪ್ರಾರಂಭಿಸಲು ನೋಡಿದರು. ಆದರೆ ಅವರು 3 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ ಕಾರಣ ಅವರ ವಿಧಾನದಲ್ಲಿ ವಿಫಲರಾದರು.

ಕ್ಲಾಸ್ ಆಟಕ್ಕೆ ಹಿಂತಿರುಗಿದ ಕಾರಣ ಅವರು ಸಂಭ್ರಮಿಸಬೇಕು

ಕ್ಲಾಸ್ ಆಟಕ್ಕೆ ಹಿಂತಿರುಗಿದ ಕಾರಣ ಅವರು ಸಂಭ್ರಮಿಸಬೇಕು

"ಕ್ಲಾಸ್ ಆಟಕ್ಕೆ ಹಿಂತಿರುಗಿದ ಕಾರಣ ಅವರು ಸಂಭ್ರಮಿಸಬೇಕು. ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಈ ಹೊಸ ವಿಧಾನದ ಕೆಲವು ಮೊದಲ ಅನುಭವವನ್ನು ಹೊಂದಿದ್ದಾರೆ. ಆದ್ದರಿಂದ ಅವರು ಹೊಸ ವಿಧಾನವನ್ನು ಸ್ವೀಕರಿಸಿದ್ದಾರೆ, ವಿರಾಟ್ ಕೊಹ್ಲಿಗೆ ಮನ್ನಣೆ ನೀಡಬೇಕಾಗಿದೆ," ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಸ್ಪೋರ್ಟ್ಸ್ 18ಗೆ ತಿಳಿಸಿದರು.

"ವಿರಾಟ್ ಕೊಹ್ಲಿ ರನ್‌ಗಳನ್ನು ಪಡೆಯುತ್ತಿದ್ದಾರೆಯೇ ಅಥವಾ ಅವರು ಇಂಗ್ಲೆಂಡ್‌ನಲ್ಲಿ ರನ್‌ಗಳ ಅವಶ್ಯಕತೆಯಿರುವುದರಿಂದ ಅವರು ಔಟಾಗುತ್ತಿದ್ದಾರೆಯೇ ಎಂಬುದರ ಬಗ್ಗೆ ಅವರು ಕಾಳಜಿ ವಹಿಸಲಿಲ್ಲ. ಅವರು ಅಂತಾರಾಷ್ಟ್ರೀಯ ರನ್‌ಗಳನ್ನು ಹುಡುಕುತ್ತಿದ್ದಾರೆ, ಆದರೆ ಅವರು ಭಾರತೀಯ ತಂಡದ ಹೊಸ ತತ್ವವನ್ನು ಬೆಂಬಲಿಸಿದರು. ಬಾಲ್ ಒನ್‌ನಿಂದ ಬೌಂಡರಿಗಳನ್ನು ಬಾರಿಸಲು, ಆಕ್ರಮಣಕಾರಿ ಆಟವಾಡಲು ಪ್ರಯತ್ನಿಸುತ್ತಿದ್ದರು".

2022ರ ಏಷ್ಯಾ ಕಪ್‌ಗಾಗಿ ಭಾರತದ ತಂಡದಲ್ಲಿ ಕೊಹ್ಲಿಗೆ ಸ್ಥಾನ

2022ರ ಏಷ್ಯಾ ಕಪ್‌ಗಾಗಿ ಭಾರತದ ತಂಡದಲ್ಲಿ ಕೊಹ್ಲಿಗೆ ಸ್ಥಾನ

ಇನ್ನು ಟಿ20 ಪಂದ್ಯದ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದರೂ ಸಹ, ಕೊಹ್ಲಿ 2022ರ ಏಷ್ಯಾ ಕಪ್‌ಗಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ನಾಯಕತ್ವದ 15 ಜನರ ತಂಡದಲ್ಲಿ ಭಾಗವಾಗಿದ್ದಾರೆ.

ಸುದೀರ್ಘ ರಜೆಯಿಂದ ಹಿಂದಿರುಗಿದ ನಂತರ, ಗುರುವಾರದಂದು ಏಷ್ಯಾ ಕಪ್ 2022ಗಾಗಿ ತಯಾರಿಯನ್ನು ಪ್ರಾರಂಭಿಸುತ್ತಿರುವಾಗ ವಿರಾಟ್ ಕೊಹ್ಲಿ ತಮ್ಮ ತರಬೇತಿ ಅವಧಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Story first published: Thursday, August 11, 2022, 21:33 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X