ಸ್ಯಾಮ್ಸನ್, ಮಲಿಕ್ ಕಾಯುವಿಕೆಗೆ ಅಂತ್ಯ ಯಾವಾಗ?
ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಮೂರನೇ ಪಂದ್ಯದಲ್ಲಿ ಆಡುವ ಬಳಗವನ್ನು ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್ ಅವರು ಅವಕಾಶ ಪಡೆಯಲು ಮತ್ತೊಂದು ಸರಣಿಗಾಗಿ ಕಾಯಬೇಕಾಗುತ್ತದೆ.
ಅದರಲ್ಲೂ ರಿಷಬ್ ಪಂತ್ ಎರಡನೇ ಟಿ20 ಪಂದ್ಯದಲ್ಲಿ ವಿಫಲರಾಗಿದ್ದರೂ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದ್ದು, ಸಂಜು ಸ್ಯಾಮ್ಸನ್ ಅವಕಾಶ ಪಡೆಯುವುದು ಅನುಮಾನವಾಗಿದೆ. ಈ ಬಗ್ಗೆ ಈಗಾಗಲೇ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijay Hazare Trophy: ರೋಹಿತ್ ಶರ್ಮಾರ 264 ರನ್ ದಾಖಲೆ ಧೂಳಿಪಟ ಮಾಡಿದ ಜಗದೀಸನ್
ರಿಷಬ್ ಪಂತ್ಗೆ ಇದೇ ಕೊನೆ ಚಾನ್ಸ್?
ಭಾರತದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಟಿ20 ಮಾದರಿ ಕ್ರಿಕೆಟ್ನಲ್ಲಿ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಪದೇ ಪದೇ ಅವರ ಬ್ಯಾಟಿಂಗ್ ಕ್ರಮಾಂಕ ಬದಲಿಸುವುದು, ಸತತವಾಗಿ ಅವಕಾಶಗಳನ್ನು ನೀಡದಿರುವುದು ಅಸ್ಥಿರ ಪ್ರದರ್ಶನಕ್ಕೆ ಕಾರಣ ಎಂದರೂ, ಪಂತ್ ತಮಗೆ ಸಿಗುತ್ತಿರುವ ಅವಕಾಶಗಳನ್ನು ಕನಿಷ್ಠ ಕೂಡ ಸದ್ಭಳಕೆ ಮಾಡಿಕೊಂಡಿಲ್ಲ ಎನ್ನುವುದು ಕೂಡ ಸತ್ಯ.
ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ವಿಫಲವಾದ ಪಂತ್, ಇಂಗ್ಲೆಂಡ್ ವಿರುದ್ಧವೂ ಕಳಪೆ ಆಟ ಆಡಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದರೂ ಅವರು ರನ್ ಗಳಿಸಲಿಲ್ಲ. ಸಂಜು ಸ್ಯಾಮ್ಸನ್ಗೆ ಅವಕಾಶ ನೀಡದಿರುವ ಬಗ್ಗೆ ಈಗಾಗಲೇ ಟೀಕೆ ವ್ಯಕ್ತವಾಗುತ್ತಿದ್ದು, ಪಂತ್ಗೆ ಇದು ಕೊನೆಯ ಅವಕಾಶವಾಗುವ ಸಾಧ್ಯತೆ ಇದೆ.
ಇನ್ನೂ ಕಾಯಬೇಕಿದೆ ಉಮ್ರಾನ್ ಮಲಿಕ್
ಭಾರತದ ವೇಗಿ ಉಮ್ರಾನ್ ಮಲಿಕ್ ವರ್ಷದ ನಂತರ ಸರಣಿಯಲ್ಲಿ ಸ್ಥಾನ ಪಡೆದಿದ್ದರೂ, ಅವರು ಪಂದ್ಯವನ್ನಾಡಲೂ ಕಾಯುವಿಕೆಯನ್ನು ಮುಂದುವರೆಸಬೇಕಿದೆ. ಎರಡನೇ ಟಿ20 ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ ಉಮ್ರಾನ್ ಮಲಿಕ್ ಮೂರನೇ ಟಿ20 ಪಂದ್ಯದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನವಾಗಿದೆ.
ಬ್ಯಾಟಿಂಗ್ನಲ್ಲಿ ವಿಫಲರಾದರೂ ದೀಪಕ್ ಹೂಡಾ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಕುಲದೀಪ್ ಯಾದವ್ ಕೂಡ ಅವಕಾಶ ಪಡೆಯಲಾರರು, ಒಂದು ವೇಳೆ ತಂಡ ವಾಷಿಂಗ್ಟನ್ ಸುಂದರ್ ಬದಲಿಗೆ ಉಮ್ರಾನ್ ಮಲಿಕ್ಗೆ ಅವಕಾಶ ನೀಡಿ ಪ್ರಯೋಗ ಮಾಡಬಹುದು.
"ಎಲ್ಲರಿಗೂ ಅವಕಾಶ ಕೊಡಬೇಕು ಎನ್ನುವ ಆಸೆ ನನಗೂ ಇದೆ. ಆದರೆ ಇನ್ನು ಉಳಿದಿರುವುದು ಒಂದೇ ಪಂದ್ಯ, ಇದು ಸರಣಿ ನಿರ್ಣಾಯಕ ಪಂದ್ಯವಾಗಿರುವುದರಿಂದ, ವಿಜೇತ ತಂಡವನ್ನೇ ಉಳಿಸಿಕೊಳ್ಳಬೇಕಾ, ಬದಲಾವಣೆ ಮಾಡಬೇಕಾ ಎಂದು ತೀರ್ಮಾನಿಸುವುದು ತುಂಬಾಕಷ್ಟ, ನೇಪಿಯರ್ ನಲ್ಲಿನ ಸ್ಥಿತಿಗತಿಗಳನ್ನು ನೋಡಿ ತೀರ್ಮಾನ ಮಾಡಲಾಗುವುದು" ಎಂದು ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.