ಮೆಲ್ಬರ್ನ್ ಶತಕದ ಬಳಿಕ ರಹಾನೆ ಮಂಕು
ಕಳೆದ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಮೆಲ್ಬರ್ನ್ನಲ್ಲಿ ಗಳಿಸಿದ ಶತಕದ ಬಳಿಕ ಅಜಿಂಕ್ಯ ರಹಾನೆ ಸರರವಾಗಿ ವೈಫಲ್ಯವನ್ನು ಅನುಭವಿಸುತ್ತಾ ಬಂದಿದ್ದಾರೆ. ಆ ಬಳಿಕ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ ರಹಾನೆ ಗಳಿಸಿದ್ದು ಕೇವಲ 268 ರನ್ ಮಾತ್ರ. ಅದು ಕೇವಲ 20ರ ಆಸಿಪಾಸಿನ ಸರಾಸರಿಯಲ್ಲಿ. ಮತ್ತೊಂದೆಡೆ ಇಂಗ್ಲೆಂಡ್ನಲ್ಲಿ ಪೂಜಾರ ಅವರ ಸರಾಸರಿ ಕೂಡ ಕಳವಳ ಪಡುವಂತಿದೆ.
ಆದರೆ ಈ ವಿಚಾರವಾಗಿ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ "ನನ್ನ ಪ್ರಕಾರ ಇದು ಕಳವಳ ಪಡಬೇಕಾದ ವಿಭಾಗ ಎನಿಸುತ್ತಿಲ್ಲ. ಈಗಿನ ಸಂದರ್ಭದಲ್ಲಿ ನಮ್ಮ ಮೂಲಬೂತ ಗಿಮ ಆಟಗಾರರು ವೈಯಕ್ತಿಕ ಪ್ರದರ್ಶನದಲ್ಲಿ ಯಾವ ಮಟ್ಟದಲ್ಲಿದ್ದಾರೆ ಎಂಬುದನ್ನು ನೋಡುವುದಾಗಿಲ್ಲ. ಒಟ್ಟಾರೆಯಾಗಿ ತಂಡಕ್ಕೆ ಅವರು ಎಷ್ಟು ಶಕ್ತಿಯನ್ನು ತುಂಬುತ್ತಾರೆ ಎಂಬುದರತ್ತ ನಾವು ಗಮನಗರಿಸುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ
ಸಂಘಟಿತ ಪ್ರದರ್ಶನದತ್ತ ಚಿತ್ತ
"ಬ್ಯಾಟಿಂಗ್ ವಿಭಾಗವಾಗಿ ನಾವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪ್ರದರ್ಶನ ನೀಡುತ್ತಿದ್ದೇವೆ. ಹಾಗಾಗಿ ನಾವು ಗೆಲುವಿನ ಸನಿಹಕ್ಕೆ ತಲುಪಲು ಸಾಧ್ಯವಾಗುತ್ತಿದೆ. ಪ್ರತಿ ಪಂದ್ಯದಲ್ಲಿಯೂ ಯಾರಾದರೂ ಒಬ್ಬ ಆಟಗಾರ ಮುಂದೆ ಬಂದು ತಂಡವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
ಪಂತ್ ಬೆಂಬಲಕ್ಕೆ ವಿರಾಟ್
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಿಷಭ್ ಪಂತ್ ಪ್ರದರ್ಶನದ ಬಗ್ಗೆಯೂ ಪ್ರತಿಕ್ರಿಯಿಸಿದ್ದು ಪಂತ್ ಬೆಂಬಲಕ್ಕೆ ನಿಂತಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಂತ್ ಅವರಿಂದ ನಾವು ಯಾವುದೇ ರೀತಿಯಲ್ಲಿಯೂ ಇಂಗ್ಲೆಂಡ್ ಪರಿಸ್ಥಿತಿಯನ್ನು ನೋಡಿಕೊಂಡು ಆಟದ ಶೈಲಿಯನ್ನು ಬದಲಾಯಿಸುವ ನಿರೀಕ್ಷೆಯನ್ನು ಹೊಂದಿಲ್ಲ ಎಂಬುದನ್ನು ಕೊಹ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದ ಪಂದ್ಯದಲ್ಲಿ ರಿಷಭ್ ಪಂತ್ 20 ಎಸೆತದಲ್ಲಿ ನೀಡಿದ 25 ರನ್ಗಳ ಆಟ ತಂಡಕ್ಕೆ ನಿರ್ಣಾಯಕವಾಗಿತ್ತು ಎಂದಿದ್ದಾರೆ.
ಆಸಿಸ್, ಇಂಗ್ಲೆಂಡ್ ಸರಣಿಯಲ್ಲಿ ಪಂತ್ ಮಿಂಚು
ಕಳೆದ ಆಸ್ಟ್ರೇಲಿಯಾದ ನೆಲದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಾಗೂ ಇಂಗ್ಲೆಂಡ್ ತಂಡದ ವಿರುದ್ಧ ಭಾರತದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಭಾರತ ಗೆಲುವು ಸಾಧಿಸಲುರಿಷಭ್ ಪಂತ್ ನೀಡಿದ ಪ್ರದರ್ಶನ ಅತ್ಯಂತ ಪ್ರಮುಖವಾಗಿತ್ತು. ಆದರೆ ರಿಷಬ್ ಪಂತ್ ಇಂಗ್ಲೆಂಡ್ ನೆಲದಲ್ಲಿ ಈವರೆಗೆ ಉತ್ತಮ ಅರ್ಧಶತಕವನ್ನು ಗಳಿಸಲು ವಿಫಲವಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿಯಿಂದ ಉತ್ತಮ ಬೆಂಬಲವನ್ನು ಪಡೆದಿರುವ ರಿಷಭ್ ಪಂತ್ ಲಾರ್ಡ್ಸ್ ಅಂಗಳದಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.