ಸಚಿನ್ ಮತ್ತು ದ್ರಾವಿಡ್ ಜಾಗ ತುಂಬುವುದು ಸುಲಭದ ಮಾತಲ್ಲ
ಸಚಿನ್ ಮತ್ತು ದ್ರಾವಿಡ್ ಜಾಗವನ್ನು ತುಂಬುವುದು ಸುಲಭವಲ್ಲ ಎಂದು ಟ್ವೀಟ್ ಮಾಡುವುದರ ಮೂಲಕ ನೆಟ್ಟಿಗರೊಬ್ಬರು ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂಜಾರರನ್ನು ತಂಡದಿಂದ ಕೈಬಿಡಿ
ಚೇತೇಶ್ವರ್ ಪೂಜಾರ ಯಾವುದೇ ಕಾರಣಕ್ಕೂ ರಾಹುಲ್ ದ್ರಾವಿಡ್ ಆಗಲು ಸಾಧ್ಯವೇ ಇಲ್ಲ, ದಯವಿಟ್ಟು ಬಿಸಿಸಿಐ ಚೇತೇಶ್ವರ್ ಪೂಜಾರರನ್ನು ಮುಂದಿನ ಪಂದ್ಯದಿಂದ ಕೈಬಿಡಬೇಕು ಇಲ್ಲದಿದ್ದರೆ ಪೂಜಾರ 100 ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ಸಮಯ ಹಾಳು ಮಾಡುತ್ತಾರೆ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
ಪೂಜಾರ ಜಾಗಕ್ಕೆ ಸೂರ್ಯಕುಮಾರ್ ಯಾದವ್ ಸೂಕ್ತ
ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಾ ಬರುತ್ತಿರುವ ಚೇತೇಶ್ವರ್ ಪೂಜಾರರನ್ನು ತಂಡದಿಂದ ಕೈಬಿಡಬೇಕು ಮತ್ತು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅಥವಾ ಕೆಎಲ್ ರಾಹುಲ್ಗೆ ಆಡುವ ಅವಕಾಶವನ್ನು ನೀಡಬೇಕೆಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.