ಗುಂಡಪ್ಪ ವಿಶ್ವನಾಥ್
ಕರ್ನಾಟಕದ ವಿಶ್ವನಾಥ್ ಅವರು ಸುನಿಲ್ ಗವಾಸ್ಕರ್ ಅವರ ಬಾವನಾಗಬೇಕು. ಗವಾಸ್ಕರ್ ಅವರಷ್ಟೇ ಅಲ್ಲ ಇತರೆ ಮಾಜಿ ಆಟಗಾರರು ಕೊಹ್ಲಿ ಆಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿಗೆ ಒತ್ತಡ
ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೇರಬೇಡಿ. ಈ ರೀತಿ ಕಳಪೆ ಅವಧಿಯನ್ನು ಸವೆಸದೆ ಇರುವ ಯಾವುದಾದರೂ ಬ್ಯಾಟ್ಸ್ ಮನ್ ಇದ್ದಾರೆಯೇ? ಹೇಳಿ, ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್, ಒಂದೆರಡು ಪಂದ್ಯಗಳ ನಂತರ ಮತ್ತೆ ಲಯಕ್ಕೆ ಮರಳುತ್ತಾರೆ ಎಂದ ಗುಂಡಪ್ಪ ವಿಶ್ವನಾಥ್
ಗವಾಸ್ಕರ್ ಟೀಕಿಸಿದ್ದರು.
ಇದೇ ಐಪಿಎಲ್ ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಆಡಿದ ಪಂದ್ಯವೊಂದರಲ್ಲಿ ಅಂಥದ್ದೇ ಹೊಡೆತವೊಂದನ್ನು ಬಾರಿಸಿ ಅವರು ಯಶಸ್ಸು ಕಂಡಿದ್ದರು. ಆದರೆ, ಅದೇ ಯಶಸ್ಸು ಪುನರಾವರ್ತನೆಯಾಗಲಾರದು. ತಮ್ಮ ಆಟದ ಬಗ್ಗೆ ಅವರು ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ ಎಂದು ಸುನಿಲ್ ಗವಾಸ್ಕರ್ ಟೀಕಿಸಿದ್ದರು.
ಆರ್ ಸಿಬಿ ಬ್ಯಾಟಿಂಗ್ ಮರೆತಿಲ್ಲ
ಚುಟುಕು ಮಾದರಿಯ ಪಂದ್ಯಗಳಲ್ಲಿ ಇನಿಂಗ್ಸ್ ಶುರುವಾದಾಗಿನಿಂದಲೇ ಬಿರುಸಾಗಿ ಬ್ಯಾಟ್ ಬೀಸಬೇಕಿರುತ್ತದೆ. ಆದರೆ, ಅದನ್ನು ಬ್ಯಾಟ್ಸ್ ಮನ್ ಗಳು ತಮ್ಮ ಸಹಜ ಆಟದಲ್ಲೇ ರೂಢಿಸಿಕೊಳ್ಳಬೇಕು.
***
ಹಾಗೆಂದ ಮಾತ್ರಕ್ಕೇ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಕ್ರಿಕೆಟ್ ಮರೆತಿದ್ದಾರೆಂದು ಅರ್ಥವಲ್ಲ. ಸರಿಯಾಗಿ, ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಆಟ ಆಡುತ್ತಿಲ್ಲ ಅಷ್ಟೇ'' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.