
ಕೊಹ್ಲಿ ತೆಗೆದುಕೊಂಡ ಈ ನಿರ್ಧಾರವೇ ಸೋಲಿಗೆ ಪ್ರಮುಖ ಕಾರಣ
'ಹರ್ಷಲ್ ಪಟೇಲ್ ವಿಕೆಟ್ ಪಡೆದ ಓವರ್ನ ಮುಂದಿನ ಓವರ್ನ್ನು ವಿರಾಟ್ ಕೊಹ್ಲಿ ತಂಡದ ಪ್ರಮುಖ ಬೌಲರ್ಗಳಾದ ಯುಜ್ವೇಂದ್ರ ಚಹಲ್ ಅಥವಾ ಮೊಹಮ್ಮದ್ ಸಿರಾಜ್ ಅವರಿಗೆ ನೀಡದೇ ಡೇನಿಯಲ್ ಕ್ರಿಸ್ಟಿಯನ್ ಅವರಿಗೆ ನೀಡಿದರು. ಆದರೆ ಆ ಓವರ್ನಲ್ಲಿ ಡೇನಿಯಲ್ ಕ್ರಿಸ್ಟಿಯನ್ 22 ರನ್ ನೀಡುವುದರ ಮೂಲಕ ಪಂದ್ಯ ಸಂಪೂರ್ಣವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ತಿರುಗಿತು. ಹೀಗೆ ವಿರಾಟ್ ಕೊಹ್ಲಿ ಯುಜ್ವೇಂದ್ರ ಚಹಲ್ ಅಥವಾ ಮೊಹಮ್ಮದ್ ಸಿರಾಜ್ ಅವರಿಗೆ ಬೌಲಿಂಗ್ ನೀಡುವ ಬದಲು ಡೇನಿಯಲ್ ಕ್ರಿಸ್ಟಿಯನ್ ಆಯ್ಕೆಮಾಡಿಕೊಂಡಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು' ಎಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಡೇನಿಯಲ್ ಕ್ರಿಸ್ಟಿಯನ್ ಅನುಭವದೊಂದಿಗೆ ಬೌಲಿಂಗ್ ಮಾಡಬೇಕಿತ್ತು
'ಇದರಲ್ಲಿ ಡೇನಿಯಲ್ ಕ್ರಿಸ್ಟಿಯನ್ ಅವರದ್ದು ಕೂಡ ತಪ್ಪಿದೆ. ಅಪಾರವಾದ ಅನುಭವವನ್ನು ಹೊಂದಿರುವ ಡೇನಿಯಲ್ ಕ್ರಿಸ್ಟಿಯನ್ ಸುನೀಲ್ ನರೈನ್ ರೀತಿಯ ಆಟಗಾರನಿಗೆ ಯಾವ ರೀತಿಯ ಬೌಲಿಂಗ್ ಮಾಡಬೇಕು ಎಂಬುದನ್ನು ಅರಿತು ಬೌಲಿಂಗ್ ಮಾಡಬೇಕಿತ್ತು. ಆದರೆ ಡೇನಿಯಲ್ ಕ್ರಿಸ್ಟಿಯನ್ ತಮ್ಮ ಅನುಭವವನ್ನು ಇಲ್ಲಿ ಬಳಸದೇ ಇರುವುದೇ ಇಷ್ಟು ದೊಡ್ಡ ರನ್ ನೀಡಲು ಕಾರಣವಾಯಿತು' ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಒಂದೇ ಓವರ್ನಲ್ಲಿ 22 ರನ್ ನೀಡಿದ್ದರು ಡೇನಿಯಲ್ ಕ್ರಿಸ್ಟಿಯನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಡೇನಿಯಲ್ ಕ್ರಿಸ್ಟಿಯನ್ 12ನೇ ಓವರ್ ಬೌಲಿಂಗ್ ಮಾಡಿದರು. ಈ ಒಂದೇ ಒಂದು ಓವರ್ನಲ್ಲಿ 22 ರನ್ ನೀಡಿದ ಡೇನಿಯಲ್ ಕ್ರಿಸ್ಟಿಯನ್ ದುಬಾರಿಯಾದರು. ಈ ಓವರ್ನಲ್ಲಿ ಸುನಿಲ್ ನರೈನ್ 3 ಸಿಕ್ಸರ್ ಸಿಡಿಸಿದರು ಹಾಗೂ 1 ರನ್ ಕಲೆಹಾಕಿದರು ಮತ್ತು ಡೇನಿಯಲ್ ಕ್ರಿಸ್ಟಿಯನ್ 3 ವೈಡ್ ಎಸೆತಗಳನ್ನು ಹಾಕಿದರು.


Click it and Unblock the Notifications
