ಕ್ರಿಕೆಟ್ನಿಂದ ದೂರ ಉಳಿದಿರುವ ಧೋನಿ
ಐಸಿಸಿ ವಿಶ್ವಕಪ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಧೋನಿ ತಾನೇ ಸರಣಿಯಿಂದ ಹೊರಗಿದ್ದು ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದರು. ಅನಂತರ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿಯಲ್ಲೂ ಧೋನಿ ಆಡುತ್ತಿಲ್ಲ. ಅಷ್ಟೇ ಯಾಕೆ, ಮುಂಬರಲಿರುವ ಬಾಂಗ್ಲಾ ಸರಣಿಯಿಂದಲೂ ಧೋನಿ ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.
ಧೋನಿಯನ್ನು ಬಿಟ್ಟು ಮುನ್ನಡೆಯಬೇಕು
ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, 'ಧೋನಿಯ ಮನಸ್ಸಿನಲ್ಲಿ ಏನಿದೆ ಅನ್ನೋದು ಯಾರಿಗೆ ಗೊತ್ತು. ಭಾರತೀಯ ಕ್ರಿಕೆಟ್ನ ಭವಿಷ್ಯದ ಬಗ್ಗೆ ತನ್ನ ಮನಸ್ಸಿನಲ್ಲೇನಿದೆ ಅನ್ನೋದನ್ನು ಅವರೇ ಹೇಳಬೇಕು. ಆದರೆ ನನಗನ್ನಿಸುವಂತೆ 38ರಲ್ಲಿರುವ ಧೋನಿಯನ್ನು ಬಿಟ್ಟು ತಂಡ ಮುನ್ನಡೆಯಬೇಕಿದೆ,' ಎಂದು ಹೇಳಿದ್ದರು.
ಕೂಲ್ ಕ್ಯಾಪ್ಟನ್ಗೆ ಗಾಯದ ಬರೆ
2020ರ ಅಕ್ಟೋಬರ್ 8ರಿಂದ ನವೆಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಟಿ20 ಟೂರ್ನಿಯಲ್ಲಿ ಧೋನಿ ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಆದರೆ ಕ್ರಿಕೆಟ್ನಿಂದ ಧೋನಿ ಹೀಗೆ ದೂರ ಉಳಿದುಬಿಟ್ಟರೆ ಏಕಾಏಕಿ ಮೈದಾನಕ್ಕಿಳಿದು ಆಡಲಾಗದು. ಅಲ್ಲದೆ ಧೋನಿಗೀಗ 38ರ ಹರೆಯ. ವಯಸ್ಸು ಸಹಜವಾಗೇ ಆಟಕ್ಕೆ ಅಡ್ಡಿಯಾಗೋದಿದೆ. ಸಾಲ್ಲದ್ದಕ್ಕೆ ಧೋನಿಗೆ ಗಾಯದ ಸಮಸ್ಯೆಯೂ ಇದೆ. ಇದಕ್ಕಾಗಿಯೇ ಧೋನಿ ಇತ್ತೀಚೆಗೆ ಸರಣಿಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ವಿಚಾರವೂ ಕೇಳಿ ಬಂದಿದೆ.
ಬದಲಿ ಕೀಪರ್ ಹುಡುಕಾಟದಲ್ಲಿ ಬಿಸಿಸಿಐ
ಭಾರತ ತಂಡದಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ಗಾಗಿ ಎಂಎಸ್ ಧೋನಿಗೆ ಬದಲಿ ಆಟಗಾರನ್ನು ಬಿಸಿಸಿಐ ಹುಡುಕುತ್ತಿರುವಂತೆಯೂ ಕಾಣಿಸುತ್ತಿದೆ. ಬಿಸಿಸಿಐ ಈಚೀಚೆಗೆ ರಿಷಬ್ ಪಂತ್ಗೆ ಹೆಚ್ಚು ಆಡುವ ಅವಕಾಶ ನೀಡಿತ್ತು. ಅಲ್ಲದೆ 'ಭಾರತ 'ಎ' ತಂಡದಲ್ಲಿರುವ ಕೆಎಲ್ ಭರತ್ ದೀರ್ಘ ಕ್ರಿಕೆಟ್ ಮಾದರಿಯಲ್ಲಿ ಕೀಪಿಂಗ್ಗೆ ಸೂಕ್ತರಿದ್ದಾರೆ. ನಿಗದಿತ ಓವರ್ಗಳ ಮಾದರಿಗೆ ನಮ್ಮಲ್ಲಿ ಭಾರತ 'ಎ' ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಸೂಕ್ತರಿದ್ದಾರೆ,' ಎಂದು ಇತ್ತೀಚೆಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಹೇಳಿದ್ದರು.