ಮೈಸೂರು, ಜನವರಿ 2: ಅಂಡರ್ 17 ಬಾಲಕರ ಕ್ರಿಕೆಟ್ ಪಂದ್ಯಾವಳಿ ಜನವರಿ 3ರಿಂದ ಜನವರಿ 8ರವರೆಗೆ ದಮನ್ ಮತ್ತು ದಿಯುನಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವೂ ಪಾಲ್ಗೊಳ್ಳುತ್ತಿದ್ದು, ಒಟ್ಟು 16 ಮಂದಿ ಪ್ರತಿಭಾನ್ವಿತ ಆಟಗಾರರನ್ನು ಟೂರ್ನಿಗಾಗಿ ಹೆಸರಿಸಲಾಗಿದೆ.
ಎಂಗೇಜ್ ಆದ ಬ್ಯಾಡ್ಬಾಯ್ಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶುಭಾಶಯ
ಟೂರ್ನಿ ಸಲುವಾಗಿ ಈಗಾಗಲೇ 16 ಆಟಗಾರರೂ ದಮನ್ ಮತ್ತು ದಿಯುಗೆ ತೆರಳಿದ್ದು, ತಂಡದಲ್ಲಿರುವ ಆಟಗಾರರಲ್ಲಿ ನಾಲ್ವರು ಮೈಸೂರಿನವರು. ಮತ್ತೋರ್ವ ಆಟಗಾರ ಮೂಲತಃ ಮಂಡ್ಯದವರು. ಅಂದ್ಹಾಗೆ, ದಮನ್ ಅನ್ನೋದು ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುನಲ್ಲಿರುವ ಭಾರತದ ಕೇಂದ್ರಾಡಳಿತ ಪ್ರದೇಶ.
2020ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಎಲ್ಲಾ ಸರಣಿಗಳ ವೇಳಾಪಟ್ಟಿ
ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯ ಎಚ್ಎನ್ ಪವನ್, ಮರಿಮಲ್ಲಪ್ಪ ಪ್ರೌಢಶಾಲೆಯ ಲಿಖಿತ್ ಎಸ್ ಗೌಡ, ಸಿದ್ದಾರ್ಥ ನಗರದ ಜಿಎಸ್ಎಸ್ಎಸ್ ಬಂಟ್ವಾಳ್ ಮಾಧವ ಶೆಣೈ ಪ್ರೌಢಶಾಲೆಯ ಎಸ್ನ ಯದುನಂದನ್, ವಿಜಯ ವಿಠಲ ಪ್ರೌಢಶಾಲೆಯ ಎಂಎಸ್ ಯಶವಂತ್, ಮಂಡ್ಯದ ಅಭಿನವ್ ಭಾರತಿ ವಿದ್ಯಾಕೇಂದ್ರ ಪ್ರೌಢಶಾಲೆಯ ಎಂಕೆ ಯಶವಂತ್ ಟೂರ್ನಿಗಾಗಿ ಆಯ್ಕೆಗೊಂಡವರು.
ರಾಜಸ್ಥಾನ್ ರಾಯಲ್ಸ್ಗೆ ಮರಳಿದ ನ್ಯೂಜಿಲೆಂಡ್ ಸ್ಪಿನ್ ಮಾಂತ್ರಿಕ ಇಶ್ ಸೋಧಿ!
ದೈಹಿಕ ಶಿಕ್ಷಣ ಇಲಾಖೆ ತಂಡದ ಮ್ಯಾನೇಜರ್ ಆಗಿ ಕಲಬುರಗಿಯ ಎನ್ವಿಎಸ್ ಬಾಲಕರ ಪ್ರೌಢ ಶಾಲೆಯ ಸಂತೋಷ್ ಕುಮಾರ್ ಕೋಬಲ್, ತರಬೇತುದಾರರಾಗಿ ರಾಯಚೂರು ಜಿಲ್ಲೆಯ ಲಿಂಗಸಗೂರು ಇಂಡಿಯನ್ ಪಬ್ಲಿಕ್ ಸ್ಕೂಲ್ನ ಅಹ್ಮದ್ ಅವರನ್ನು ನೇಮಿಸಲ್ಪಟ್ಟಿದ್ದಾರೆ.