ಇಂಡಿಯನ್ ಸೂಪರ್ ಸ್ಟಾರ್
ಐಎಎನ್ಎಸ್ ಜೊತೆ ಮಾತನಾಡುತ್ತ ಕೀರನ್, 'ಮುಂಬೈ ಇಂಡಿಯನ್ಸ್ನಲ್ಲಿ ಆಡಲಾರಂಭಿಸಿದಾಗಿನಿಂದಲೂ ನಾನು ಹಾರ್ದಿಕ್ ನನ್ನು ನೋಡುತ್ತಿದ್ದೇನೆ ಹೀಗಾಗಿ ನನಗೆ ಆತನ ಅತಿ ವಿಶ್ವಾಸದ ಮನೋಭಾವ ಅಚ್ಚರಿಯುಂಟು ಮಾಡಿಲ್ಲ. ಇದೇ ಆತ್ಮ ವಿಶ್ವಾದ ಮನೋಭಾವವನ್ನು ಆತ 'ಇಂಡಿಯನ್ ಸೂಪರ್ ಸ್ಟಾರ್' ಅನ್ನಾಗಿ ಬದಲಿಸಿಕೊಂಡಿದ್ದಾರೆ,' ಎಂದು ಹೇಳಿದರು.
ಆಟಕ್ಕೆ ಆತ್ಮವಿಶ್ವಾಸ ಬೇಕು
'ಮೈದಾನದ ಹೊರಗೆ ನೀವು ಹೆಚ್ಚು ವಿಶ್ವಾಸ ಹೊಂದಿರುವ ವ್ಯಕ್ತಿಯಾಗಿರುತ್ತೀರಿ, ಅದೇ ವಿಶ್ವಾಸವನ್ನು ನೀವು ಮೈದಾನದ ಆಟದ ವೇಳೆಯೂ ಕೊಂಡೊಯ್ಯಬೇಕು, ಬಳಸಿಕೊಳ್ಳಬೇಕು. ಅದು ನಿಮ್ಮಲ್ಲಿರುವ ದೊಡ್ಡ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಹಾರ್ದಿಕ್ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯಗೆ ಕ್ಲೋಸ್ ಆಗಿರುವ ಪೊಲಾರ್ಡ್ ನುಡಿದಿದ್ದಾರೆ.
ವಿವಾದದ ಬಿಸಿ
ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಪಂದ್ಯಕ್ಕೂ ಮುನ್ನವೇ ವಾಪಸ್ ಕರೆಸಿಕೊಳ್ಳಾಗಿತ್ತು. ಕಾಫೀ ವಿತ್ ಕರಣ್ ಟಿವಿ ಶೋನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಇಬ್ಬರ ವೃತ್ತಿ ಬದುಕಿಗೂ ಹೊಡೆತ ಕೊಟ್ಟಿತ್ತು.
ಸ್ಫೋಟಕ ಬ್ಯಾಟಿಂಗ್
ವಿವಾದ ತಣ್ಣಗಾದ ಬಳಿಕ ಮುಂಬೈ ಇಂಡಿಯನ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಹಾರ್ದಿಕ್, ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದರು. ಸೆಪ್ಟೆಂಬರ್ನಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ vs ಭಾರತ ಟಿ20 ಸರಣಿಗಾಗಿ ಬಿಸಿಸಿಐಯು 15 ಜನರ ತಂಡ ಪ್ರಕಟಿಸಿದ್ದು, ಇದರಲ್ಲಿ ಪಾಂಡ್ಯ ಸಹೋದರರ ಹೆಸರಿದೆ.