ಆರಂಭದಲ್ಲೇ ಮುಗ್ಗರಿಸಿದ ಶಿವಮೊಗ್ಗ ಸ್ಟ್ರೈಕರ್ಸ್
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಆಟಗಾರರು ಹಾಗೂ ತಂಡದ ಮೇಲಿನ ಕ್ರಮಾಂಕ ಅಕ್ಷರಶಃ ಮುಗ್ಗರಿಸಿತು. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ರೋಹನ್ ಕದಮ್ 1 ರನ್ ಕಲೆಹಾಕಿದರೆ, ಶರತ್ ಬಿ ಆರ್ 3 ರನ್ ಬಾರಿಸಿದರು. ಹೀಗೆ ತಂಡದ ಇಬ್ಬರು ಆರಂಭಿಕರು ಕಳಪೆ ರನ್ ಗಳಿಸಿ ಔಟ್ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೃಷ್ಣಪ್ಪ ಗೌತಮ್ 4 ರನ್ ಕಲೆಹಾಕಿ ನಿರಾಸೆ ಮೂಡಿಸಿದರು. ಇನ್ನುಳಿದಂತೆ ಡೆಸ್ಮಾಂಟ್ ಆಂಟನಿ 1 ರನ್, ವಿನಯ್ ಸಾಗರ್ 13 ರನ್, ಅವಿನಾಶ್ ಡಿ 41 ರನ್ ಕಲೆಹಾಕಿದರು. ತಂಡದ ಪರ ಅಂತಿಮ ಹಂತದವರೆಗೂ ಹೋರಾಟ ನಡೆಸಿದ ಹೋರಾಟ ನಡೆಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ 53 ಎಸೆತಗಳಲ್ಲಿ 62 ರನ್ ಕಲೆಹಾಕಿ ಅಜೇಯನಾಗಿ ಉಳಿದು ತಂಡಕ್ಕೆ ಆಪತ್ಬಾಂಧವನಾದರು ಹಾಗೂ ಸ್ಟಾಲಿನ್ ಹೂವರ್ ಅಜೇಯ 7 ರನ್ ಕಲೆಹಾಕಿದರು.
ಹುಬ್ಬಳ್ಳಿ ಟೈಗರ್ಸ್ ಪರ ವೈಶಾಖ್ ಕೌಶಿಕ್ 3 ವಿಕೆಟ್, ನಾಯಕ ಅಭಿಮನ್ಯು ಮಿಥುನ್ 2 ವಿಕೆಟ್ ಹಾಗೂ ನವೀನ್ ಎಂಜಿ ಒಂದು ವಿಕೆಟ್ ಪಡೆದರು.
ಗೆದ್ದ ಹುಬ್ಬಳ್ಳಿ
ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಲವ್ನಿತ್ ಸಿಸೋಡಿಯಾ ಶೂನ್ಯಕ್ಕೆ ಔಟ್ ಆದರೆ, ಮತ್ತೋರ್ವ ಆರಂಭಿಕ ಆಟಗಾರ ಮೊಹಮ್ಮದ್ ತಹಾ 49 ಎಸೆತಗಳಲ್ಲಿ ಅಜೇಯ 78 ರನ್ ಕಲೆಹಾಕಿ ತಂಡಕ್ಕೆ ಆಸರೆಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನುಳಿದಂತೆ ಸ್ವಪ್ನಿಲ್ ಯೆಳಲೆ 6 ರನ್, ಶ್ರೀನಿವಾಸ್ ಶರತ್ 41, ನಾಯಕ ಅಭಿಮನ್ಯು ಮಿಥುನ್ ಶೂನ್ಯ, ತುಷಾರ್ ಸಿಂಗ್ ಅಜೇಯ 4 ರನ್ ಕಲೆಹಾಕಿದರು.
ಶಿವಮೊಗ್ಗ ಸ್ಟ್ರೈಕರ್ಸ್ ಪರ ಕೃಷ್ಣಪ್ಪ ಗೌತಮ್, ಉತ್ತಮ್ ಅಯ್ಯಪ್ಪ, ಅವಿನಾಶ್ ಡಿ ಹಾಗೂ ಸ್ಟಾಲಿನ್ ಹೂವರ್ ತಲಾ ಒಂದೊಂದು ವಿಕೆಟ್ ಪಡೆದರು.
ಆಡುವ ಬಳಗ
ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಮೊಹಮ್ಮದ್ ತಾಹಾ, ಸ್ವಪ್ನಿಲ್ ಯೆಲವೆ, ತುಷಾರ್ ಸಿಂಗ್, ನವೀನ್ ಎಂಜಿ, ಅಭಿಮನ್ಯು ಮಿಥುನ್ (ನಾಯಕ), ಶ್ರೀನಿವಾಸ್ ಶರತ್, ವಾಸುಕಿ ಕೌಶಿಕ್, ಆನಂದ್ ದೊಡ್ಡಮನಿ, ಶರಣ್ ಗೌಡ, ಸೌರಭ್ ಶ್ರೀವಾಸ್ತವ್
ಶಿವಮೊಗ್ಗ ಸ್ಟ್ರೈಕರ್ಸ್: ರೋಹನ್ ಕದಮ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್ (ನಾಯಕ), ಅವಿನಾಶ್ ಡಿ, ವಿನಯ್ ಸಾಗರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಸ್ಟಾಲಿನ್ ಹೂವರ್, ಕೆಸಿ ಕಾರಿಯಪ್ಪ, ಡೆಸ್ಮಂಡ್ ಆಂಟೋನಿ, ಎಂ ಬಿ ದರ್ಶನ್, ಉತ್ತಮ್ ಅಯ್ಯಪ್ಪ