ತೀರಾ ಕಳಪೆ ಆಟವದು: ಗವಾಸ್ಕರ್
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದು ತೀರಾ ಕಳಪೆ ಆಟದ ಪರಿಣಾಮವಾಗಿತ್ತು. ಒಬ್ಬ ವಿಶ್ವದರ್ಜೆಯ ಬ್ಯಾಟ್ಸ್ ಮನ್ ಆಡುವ ಆಟ ಅದಲ್ಲ. ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲಿ. ಆಗ ಅವರಿಗೆ ಅವರೆಂಥ ತಪ್ಪು ಮಾಡಿದ್ದಾರೆಂದು ಅವರಿಗೆ ತಿಳಿಯುತ್ತದೆ'' ಎಂದರು.
ಪ್ರತಿ ದಿನ ಸಕ್ಸಸ್ ಸಿಗಲ್ಲ!
''ಇದೇ ಐಪಿಎಲ್ ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಆಡಿದ ಪಂದ್ಯವೊಂದರಲ್ಲಿ ಅಂಥದ್ದೇ ಹೊಡೆತವೊಂದನ್ನು ಬಾರಿಸಿ ಅವರು ಯಶಸ್ಸು ಕಂಡಿದ್ದರು. ಆದರೆ, ಅದೇ ಯಶಸ್ಸು ಪುನರಾವರ್ತನೆಯಾಗಲಾರದು'' ಎಂದರು.
ಜಾಣ್ಮೆಯ ಆಟ ರೂಢಿಸಿಕೊಳ್ಳಬೇಕು
ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ''ಚುಟುಕು ಮಾದರಿಯ ಪಂದ್ಯಗಳಲ್ಲಿ ಇನಿಂಗ್ಸ್ ಶುರುವಾದಾಗಿನಿಂದಲೇ ಬಿರುಸಾಗಿ ಬ್ಯಾಟ್ ಬೀಸಬೇಕಿರುತ್ತದೆ. ಆದರೆ, ಅದನ್ನು ಬ್ಯಾಟ್ಸ್ ಮನ್ ಗಳು ತಮ್ಮ ಸಹಜ ಆಟದಲ್ಲೇ ರೂಢಿಸಿಕೊಳ್ಳಬೇಕು'' ಎಂದು ಕಿವಿಮಾತು ಹೇಳಿದರು.
ಸಾಧ್ಯವಿಲ್ಲವಾದರೆ ವೈಫಲ್ಯ ಗ್ಯಾರಂಟಿ
''ಆಕ್ರಮಣಕಾರಿ ಆಟವು ಬ್ಯಾಟ್ಸ್ ಮನ್ ಗಳಿಂದ ಸಾಧ್ಯವಾಗದಿದ್ದರೆ ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ, ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಇಲ್ಲೇ ಎಡವುದತ್ತಿದ್ದಾರೆ'' ಎಂದರು.
ಎಲ್ಲರೂ ಉತ್ತಮರೇ, ಆದರೆ ಆಡುತ್ತಿಲ್ಲ ಅಷ್ಟೇ!
''ಹಾಗೆಂದ ಮಾತ್ರಕ್ಕೇ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಕ್ರಿಕೆಟ್ ಮರೆತಿದ್ದಾರೆಂದು ಅರ್ಥವಲ್ಲ. ಸರಿಯಾಗಿ, ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಆಟ ಆಡುತ್ತಿಲ್ಲ ಅಷ್ಟೇ'' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.