
ಟೀಂ ಇಂಡಿಯಾ ಮೇಲೆ ಒತ್ತಡವಿದೆ
ಸೂಪರ್ 4 ಹಂತದಲ್ಲಿ ನಾಲ್ಕು ತಂಡಗಳು ತಲಾ ಮೂರು ಪಂದ್ಯಗಳನ್ನಾಡಲಿದ್ದು, ಪ್ರತಿ ಪಂದ್ಯ ಕೂಡ ಮುಖ್ಯವಾಗಲಿದೆ. ಭಾರತ ಈಗಾಗಲೇ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿರುವುದು ತಂಡದ ಮೇಲೆ ಹೆಚ್ಚಿನ ಒತ್ತಡ ಹಾಕಿದೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಟೀಂ ಇಂಡಿಯಾ ಮೇಲಿನ ಹೆಚ್ಚಿನ ಒತ್ತಡ ಮುಂದಿನ ಪಂದ್ಯಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಭಾರತ ಇನ್ನೊಂದು ಪಂದ್ಯವನ್ನು ಸೋತರು ಟೂರ್ನಿಯಿಂದ ಹೊರಬೀಳಲಿದೆ.
Asia Cup 2022: ಅರ್ಷದೀಪ್ ಸಿಂಗ್ ಭವಿಷ್ಯದ ಕ್ರಿಕೆಟ್ ತಾರೆ: ಪಾಕಿಸ್ತಾನ ಮಾಜಿ ಕ್ರಿಕೆಟರ್

ಈ ಬಾರಿ ಪಾಕಿಸ್ತಾನ ಏಷ್ಯಾಕಪ್ ಗೆಲ್ಲಬಹುದು
ಭಾರತದ ವಿರುದ್ಧ ಗೆಲವು ಸಾಧಿಸಿದ ನಂತರ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಉತ್ತಮ ಆತ್ಮವಿಶ್ವಾಸದಲ್ಲಿದೆ, ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
"ಪಾಕಿಸ್ತಾನ ಬಹಳ ಸಮಯದ ನಂತರ ಫೈನಲ್ನಲ್ಲಿ ಆಡಲಿದೆ ಮತ್ತು ಏಷ್ಯಾಕಪ್ನಲ್ಲಿ ಬಹಳ ಸಮಯದ ನಂತರ ಭಾರತವನ್ನು ಸೋಲಿಸಿದೆ. ಇದು ಪಾಕಿಸ್ತಾನದ ವರ್ಷವೂ ಆಗಿರಬಹುದು" ಎಂದು ಸೆಹ್ವಾಗ್ ಹೇಳಿದ್ದಾರೆ.

2012ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ಗೆದ್ದಿದ್ದ ಪಾಕಿಸ್ತಾನ
ಪಾಕಿಸ್ತಾನ ಕೊನೆಯ ಬಾರಿಗೆ 2012ರಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಿತ್ತು. ಅದಾದ ನಂತರ 2014ರಲ್ಲಿ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ಶ್ರೀಲಂಕಾ ಎದುರು ಮುಗ್ಗರಿಸಿದ್ದುಮ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಭಾರತ ಇದುವರೆಗೂ 7 ಬಾರಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಿದೆ, ಶ್ರೀಲಂಕಾ 5 ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಇದುವರೆಗೂ ಎರಡು ಬಾರಿಯಷ್ಟೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತದ ಬಗ್ಗೆ ಇಂಜಮಾಮ್-ಉಲ್-ಹಕ್ ಭವಿಷ್ಯ
ಮಂಗಳವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಏಷ್ಯಾಕಪ್ 2022 ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟರ್ ಇಂಜಮಾಮ್-ಉಲ್-ಹಕ್ ಭವಿಷ್ಯ ನುಡಿದಿದ್ದಾರೆ.
ಜಿಯೋ ನ್ಯೂಸ್ ಕಾರ್ಯಕ್ರಮ 'ಜಶನ್-ಎ-ಕ್ರಿಕೆಟ್' ನಲ್ಲಿ ಮಾತನಾಡಿದ ಇಂಜಮಾಮ್, "ಟೀಂ ಇಂಡಿಯಾ ನಾಯಕ ಭಾರಿ ಒತ್ತಡದಲ್ಲಿದ್ದಾರೆ. ಭಾರತವು ಮಂಗಳವಾರ ಶ್ರೀಲಂಕಾ ವಿರುದ್ಧ ಸೋಲುತ್ತದೆ, ಏಷ್ಯಾಕಪ್ ಟೂರ್ನಿಯಿಂದಲೇ ಹೊರಬೀಳುತ್ತದೆ ಎಂದು ನನಗೆ ಅನಿಸುತ್ತಿದೆ" ಎಂದು ಹೇಳಿದ್ದಾರೆ.


Click it and Unblock the Notifications