ಮೊದಲು ಅವನ ವಿರುದ್ಧ ಟೀಕೆ ಮಾಡುವುದು ನಿಲ್ಲಿಸಿ
ಭಾರತದ ಕ್ರಿಕೆಟ್ ಅಭಿಮಾನಿಗಳು ಅರ್ಷದೀಪ್ ವಿರುದ್ಧ ಮಾಡುತ್ತಿರುವ ಟೀಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಮೊದಲು ಆತನ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಭಾರತೀಯ ಯುವ ಆಟಗಾರನನ್ನು ಹೊಗಳಿದ ಕನೇರಿಯಾ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿ, "ಕೊನೆಯ ಓವರ್ ಅನ್ನು ಅರ್ಷದೀಪ್ ಉತ್ತಮವಾಗಿ ಮಾಡಿದರು, ಅಸಿಫ್ ಅಲಿ ವಿಕೆಟ್ ಪಡೆದರು, ಪಂದ್ಯವನ್ನು ಗೆಲ್ಲಿಸಲು ಸಾಕಷ್ಟು ಶ್ರಮಿಸಿದರು. ಪಾಕಿಸ್ತಾನ ತಂಡವನ್ನು ಕರಾರುವಕ್ಕಾದ ದಾಳಿಯಿಂದ ಕಾಡಿದರು. ಆತ ಭವಿಷ್ಯದ ತಾರೆ" ಎಂದು ಹೇಳಿದ್ದಾರೆ.
Ind vs SL Asia Cup 2022 : ಶ್ರೀಲಂಕಾ ವಿರುದ್ಧ ಭಾರತದ ಆಡುವ 11ರ ಬಳಗ; ಏನೆಲ್ಲಾ ಬದಲಾವಣೆ?
ಅರ್ಷದೀಪ್ರನ್ನು ಟ್ರೋಲ್ ಮಾಡಿದ ಅಭಿಮಾನಿಗಳು
ಕ್ಯಾಚ್ ಬಿಟ್ಟ ಅರ್ಷದೀಪ್ ವಿರುದ್ಧ ಭಾರತದ ಕ್ರಿಕೆಟ್ ಅಭಿಮಾನಿಗಳು ಭಾರಿ ಟೀಕೆ ವ್ಯಕ್ತಪಡಿಸಿದ್ದರು. ಆತ ಭಾರತೀಯನೇ ಅಲ್ಲ ಎನ್ನುವಂತಹ ಟೀಕೆಗಳನ್ನು ಕೂಡ ಯುವ ವೇಗದ ಬೌಲರ್ ಕೇಳಬೇಕಾಯಿತು. ಆತನೊಬ್ಬನಿಂದಲೇ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋತಿದೆ ಎನ್ನುವಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಮಾಜಿ ಕ್ರಿಕೆಟರ್, ಭಾರತದ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟಿಗರು ಎಡಗೈ ವೇಗಿ ಅರ್ಷದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಆಟದಲ್ಲಿ ಇದೆಲ್ಲಾ ಸಹಜ ಮುಂದಿನ ಪಂದ್ಯದ ಬಗ್ಗೆ ಗಮನ ನೀಡು ಎಂದು ಸಲಹೆ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧ ಆರ್. ಅಶ್ವಿನ್ ಆಡಬೇಕು
ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರವಿಚಂದ್ರನ್ ಅಶ್ವಿನ್ರನ್ನು ಕಣಕ್ಕಿಳಿಸಬೇಕು ಎಂದು ದ್ಯಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ಗೆ ಹೆಚ್ಚಿನ ಬೆಂಬಲ ಇಲ್ಲದ ಕಾರಣ ಭಾರತ ತಂಡ ಸಂಕಷ್ಟದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್ ಶಮಿಯಂತಹ ಅನುಭವಿ ಬೌಲರ್ ಕೊರತೆ ಭಾರತ ತಂಡವನ್ನು ಕಾಡುತ್ತಿದೆ. ಭುವನೇಶ್ವರ್ ಕುಮಾರ್ಗೆ ಬೇರೆ ಬೌಲರ್ ಕಡೆಯಿಂದ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ. ಶ್ರೀಲಂಕಾ ವಿರುದ್ಧ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಕಣಕ್ಕಿಳಿದರೆ ಬೌಲಿಂಗ್ ವಿಭಾಗ ಉತ್ತಮವಾಗಲಿದೆ ಎಂದು ಹೇಳಿದ್ದಾರೆ.
ಮೊಹಮ್ಮದ್ ಶಮಿ ಆಯ್ಕೆ ಮಾಡಬೇಕಿತ್ತು
ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗಿಂತ ಮೊದಲು ಅವೇಶ್ ಖಾನ್ ಆಯ್ಕೆ ಮಾಡಿರುವ ಕ್ರಮಕ್ಕೆ ದ್ಯಾನಿಶ್ ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ಆಯ್ಕೆ ವೇಳೆ ಬಿಸಿಸಿಐ ಅನುಭವಿ ಆಟಗಾರರಿಗೆ ಆದ್ಯತೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವೇಶ್ ಖಾನ್ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ, ದೀಪಕ್ ಚಹಾರ್ ಕೂಡ ಉತ್ತಮ ಆಯ್ಕೆಯಾಗಿದ್ದರು. ಭಾರತ ತಂಡ ಅವರನ್ನಾದರೂ ಆಯ್ಕೆ ಮಾಡಬೇಕಿತ್ತು, ಏಷ್ಯಾಕಪ್ ನಂತರ ಅವೇಶ್ ಖಾನ್ ಹೆಚ್ಚಿನ ಪಂದ್ಯಗಳನ್ನು ಆಡುವುದು ಅನುಮಾನ ಎಂದು ಹೇಳಿದ್ದಾರೆ.