ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿರುವುದರಿಂದ ಮುಂದಿನ ಆರ್ಸಿಬಿ ನಾಯಕ ಯಾರು? ಎಂಬ ಕುತೂಹಲ ಹೆಚ್ಚಾಗಿದೆ. ಅದ್ರಲ್ಲೂ ಆರ್ಸಿಬಿ ಫ್ರಾಂಚೈಸಿ ಆ ಮಹತ್ತರ ಜವಾಬ್ದಾರಿಯನ್ನ ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದೆ.
ಆರ್ಸಿಬಿ ಮುಂದಿನ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗದೆ ತುಂಬಾ ಸಮಯದಿಂದ ಚರ್ಚೆ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಓಪನರ್ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಅವರನ್ನು ನೇಮಿಸುವಂತೆ ಸಲಹೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಬುಮ್ರಾಗೆ ವಿಶ್ರಾಂತಿ ಸಾಧ್ಯತೆ, ಶಮಿಗೆ ಅವಕಾಶ?
ಈ ಬಾರಿಯ ಐಪಿಎಲ್ ಸೀಸನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಜೇಸನ್ ಹೋಲ್ಡರ್ ಅವರನ್ನು ನೇಮಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಜೇಸನ್ ಹೋಲ್ಡರ್ ಒಬ್ಬ ಉತ್ತಮ ಆಲ್ರೌಂಡರ್ ಎಂದು ಶ್ಲಾಘಿಸಿದ ಚೋಪ್ರಾ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ನಾಯಕನಾಗಿ ಮುನ್ನಡೆಸಿದರು. ಹಿರಿಯ ಆಟಗಾರ ವಿರಾಟ್ ಕೊಹ್ಲಿಯನ್ನು ತಂಡ ಅವಲಂಬಿಸಬಾರದು , ಆದುದರಿಂದಲೇ ಹೋಲ್ಡರ್ ನಾಯಕನಾದ್ರೂ ನ್ಯಾಯ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೋಲ್ಡರ್ ಅವರು ಸದ್ದಿಲ್ಲದೆ ತಮ್ಮ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು. ಅದಕ್ಕಾಗಿಯೇ ನಾಯಕತ್ವಕ್ಕಾಗಿ ಮೆಗಾ ಹರಾಜಿನಲ್ಲಿ ಹೋಲ್ಡರ್ನನ್ನ ಆರ್ಸಿಬಿ ಖರೀದಿಸುವಂತೆ ಚೋಪ್ರಾ ಸಲಹೆ ನೀಡಿದರು.
ಶ್ರೇಯಸ್ ಅಯ್ಯರ್, ಇಶಾಂತ್ ಕಿಶನ್, ಅಶ್ವಿನ್ ಮತ್ತು ಧವನ್ ಹರಾಜಿನಲ್ಲಿದ್ದರೂ ಅವರನ್ನು ಆರ್ಸಿಬಿ ನಾಯಕತ್ವದ ಆಯ್ಕೆಯಲ್ಲಿ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ಜೇಸನ್ ಹೋಲ್ಡರ್ ಕಳೆದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಆದಾಗ್ಯೂ, ಈ ಬಾರಿ, ಸನ್ರೈಸ್ನ ರೀಟೈನ್ ಪಟ್ಟಿಯಲ್ಲಿ ಹೋಲ್ಡರ್ಗೆ ಸ್ಥಾನ ಸಿಗಲಿಲ್ಲ. ಇದರೊಂದಿಗೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಹೋಲ್ಡರ್ ಭಾಗವಹಿಸಲಿದ್ದಾರೆ. ಐಪಿಎಲ್ನಲ್ಲಿ ಇದುವರೆಗೆ 26 ಪಂದ್ಯಗಳನ್ನು ಆಡಿರುವ ಹೋಲ್ಡರ್ 14 ವಿಕೆಟ್ಗಳೊಂದಿಗೆ 189 ರನ್ ಗಳಿಸಿದ್ದಾರೆ. ಅವರು ಒಟ್ಟು 35 ವಿಕೆಟ್ಗಳನ್ನು ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಸೀಸನ್ಗಾಗಿ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಆರ್ಸಿಬಿ ಉಳಿಸಿಕೊಂಡವರಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಸೇರಿದ್ದಾರೆ. ಇದರಲ್ಲಿ ಆರ್ಸಿಬಿ ವಿರಾಟ್ ಕೊಹ್ಲಿಗೆ 15 ಕೋಟಿ, ಮ್ಯಾಕ್ಸ್ವೆಲ್ಗೆ 11 ಕೋಟಿ ಮತ್ತು ಸಿರಾಜ್ಗೆ 7 ಕೋಟಿ ನೀಡಲಿದೆ.
ಆರ್ಸಿಬಿ ಇತ್ತೀಚೆಗೆ ಹೊಸ ಕೋಚ್ ಹೆಸರನ್ನು ಘೋಷಣೆ ಮಾಡಿದ್ದು, ತಂಡದ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕಗೊಂಡಿದ್ದಾರೆ. ಈ ಕುರಿತಾಗಿ ಆರ್ಸಿಬಿ ಫ್ರಾಂಚೈಸಿ ಖಚಿತಪಡಿಸಿದ್ದು, ಹೆಡ್ ಕೋಚ್ ಆಗಿ ಬಂಗಾರ್ ಆಯ್ಕೆಗೊಂಡಿದ್ದಾರೆ. ಇವರು ಮುಂದಿನ ಎರಡು ಐಪಿಎಲ್ ಸೀಸನ್ಗಳಲ್ಲಿ ಆರ್ಸಿಬಿ ತಂಡದ ಮುಖ್ಯ ಭಾಗವಾಗಲಿದ್ದಾರೆ.
ಈ ಮೊದಲು ಆರ್ಸಿಬಿ ತಂಡದಲ್ಲಿ ಸಂಜಯ್ ಬಂಗಾರ್ ಅವರನ್ನು ಬ್ಯಾಟಿಂಗ್ ಸಲಹೆಗಾರರನ್ನಾಗಿ ಆಯ್ಕೆ ಮಾಡಿತ್ತು. ಆದರೆ ಮುಂದಿನ ಐಪಿಎಲ್ ಸೀಸನ್ನಲ್ಲಿ ಸಂಜಯ್ ಬಂಗಾರ್ ಆರ್ಸಿಬಿ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ಈ ಹಿಂದೆ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯಲ್ಲೂ ಕಾರ್ಯ ನಿರ್ವಹಿಸಿದ್ದರು.