ವಿರಾಟ್ ಕೊಹ್ಲಿ ಫಾರ್ಮ್ ದುರದೃಷ್ಟಕರ
ಇನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಭಾರತೀಯ ತಂಡಕ್ಕೆ ಮರಳಿದ್ದು, ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಂಡ ನಂತರ ಈಗ ಪ್ರತಿಷ್ಠಿತ ಏಷ್ಯಾಕಪ್ಗೆ ಮರಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಫಾರ್ಮ್ ಇಲ್ಲದ ಕಾರಣ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡದಿಂದ ಕೈಬಿಡಬಹುದು ಎಂಬ ಊಹಾಪೋಹಗಳಿದ್ದವು. ಆದಾಗ್ಯೂ, ಭಾರತ ತಂಡದ ಮ್ಯಾನೇಜ್ಮೆಂಟ್ ಸ್ಟಾರ್ ಆಟಗಾರನಿಗೆ ಬೆಂಬಲ ನೀಡುವುದನ್ನು ಮುಂದುವರೆಸಿದೆ.
"ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಭವಿಸುತ್ತಿರುವ ಕಳಪೆ ಫಾರ್ಮ್ ದುರದೃಷ್ಟಕರ. ಆದರೆ ಅವರು ಗುಣಮಟ್ಟದ ಆಟಗಾರ ಎಂದು ನಾನು ಭಾವಿಸುತ್ತೇನೆ. ಇದು ರಾಹುಲ್ ದ್ರಾವಿಡ್ ಮತ್ತು ಮ್ಯಾನೇಜ್ಮೆಂಟ್ ವಿರಾಟ್ ಕೊಹ್ಲಿ ಜೊತೆ ನಡೆಸಬಹುದಾದ ಸಂಭಾಷಣೆಯಾಗುತ್ತಿತ್ತು. ಕೆಲವು ಸಕಾರಾತ್ಮಕ ಸಂಭಾಷಣೆಗಳು ನಡೆದಿವೆ ಎಂದು ನಾನು ಭಾವಿಸುತ್ತೇನೆ," ಎಂದು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೇಳಿದರು.
ಕಳಪೆ ಫಾರ್ಮ್ನಿಂದ ಹೊರಬರಲು ಕೊಹ್ಲಿ ಬಳಿ ತಂತ್ರಗಳಿವೆ
"ಆಟಗಾರನ ಕ್ಲಾಸ್ ಶಾಶ್ವತವಾದದ್ದು, ಫಾರ್ಮ್ ತಾತ್ಕಾಲಿಕ. ಅದರಿಂದ ಹೊರಬರಲು ವಿರಾಟ್ ಕೊಹ್ಲಿ ಬಳಿ ತಂತ್ರಗಳಿವೆ ಎಂಬುದು ನನ್ನ ನಂಬಿಕೆ. ಈ ಹಿಂದೆಯೂ ಅದನ್ನೇ ಮಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್ನಲ್ಲಿ ಉತ್ತಮ ಫಾರ್ಮ್ಗೆ ಮರಳುತ್ತಾನೆ ಎಂದು ನನಗೆ ಖಾತ್ರಿಯಿದೆ," ಎಂದು 45 ವರ್ಷ ವಯಸ್ಸಿನ ಶ್ರೀಲಂಕಾ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಆಶಯ ವ್ಯಕ್ತಪಡಿಸಿದರು.
2022ರ ಏಷ್ಯಾಕಪ್ ಗೆಲ್ಲಲು ಶ್ರೀಲಂಕಾ, ಪಾಕಿಸ್ತಾನ ಮತ್ತು ಭಾರತ ನಡುವೆ ಪೈಪೋಟಿ ಏರ್ಪಡಲಿದೆ ಎಂದು ಜಯವರ್ಧನೆ ಹೇಳಿದ್ದು, "ಆ ಎರಡರಲ್ಲಿ ಒಬ್ಬರು (ಭಾರತ ಅಥವಾ ಪಾಕಿಸ್ತಾನ) ಫೈನಲ್ಗೆ ಬರುತ್ತಾರೆ. ಅನುಕೂಲವೆಂದರೆ ಬಹುಶಃ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ನನ್ನ ಪ್ರಕಾರ ಈ ಮೂರು ತಂಡಗಳಲ್ಲಿ ಒಂದು ಏಷ್ಯಾ ಕಪ್ ಗೆಲ್ಲುವ ತಂಡವಾಗಲಿದೆ," ಎಂದು ಮಹೇಲಾ ಜಯವರ್ಧನೆ ತಿಳಿಸಿದರು.
ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್.