ಎಲ್ಲರೂ ಸುರಕ್ಷಿತವಾಗಿದ್ದಾರೆ
ಟ್ವಿಟ್ಟರ್ನಲ್ಲಿ ಹೇಳಿಕೆ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ತನ್ನ ಆಟಗಾರರೆಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿಸಿದೆ.
'ಕ್ರೈಸ್ಟ್ಚರ್ಚ್ನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಎಲ್ಲ ಸದಸ್ಯರೂ ನಗರದಲ್ಲಿ ಶೂಟಿಂಗ್ ಘಟನೆ ನಡೆದ ಬಳಿಕ ಹೋಟೆಲ್ಗೆ ಸುರಕ್ಷಿತವಾಗಿ ಮರಳಿದ್ದಾರೆ. ತಂಡದ ಆಟಗಾರರು ಮತ್ತು ಮ್ಯಾನೇಜ್ಮೆಂಟ್ನೊಂದಿಗೆ ಕ್ರಿಕೆಟ್ ಮಂಡಳಿ ನಿರಂತರ ಸಂಪರ್ಕದಲ್ಲಿದೆ' ಎಂದು ಕ್ರಿಕೆಟ್ ಮಂಡಳಿ ಹೇಳಿದೆ.
ನಡುಕ ಹುಟ್ಟಿಸುವ ಅನುಭವ
'ಸಕ್ರಿಯ ಶೂಟರ್ಗಳಿಂದ ಇಡೀ ತಂಡ ಬಚಾವಾಗಿದೆ. ನಡುಕ ಹುಟ್ಟಿಸುವ ಅನುಭವ. ನಿಮ್ಮ ಪ್ರಾರ್ಥನೆ ವೇಳೆ ನಮಗಾಗಿಯೂ ಪ್ರಾರ್ಥಿಸಿ' ಎಂದು ಬಾಂಗ್ಲಾದೇಶದ ಆರಂಭಿಕ ಆಟಗಾರ ತಮಿಮ್ ಇಕ್ಬಾಲ್ ಟ್ವೀಟ್ ಮಾಡಿದ್ದಾರೆ.
ಕೊಹ್ಲಿ ಭಯಂಕರ ನಾಯಕ, ಆದರೆ ಧೋನಿ ಅದಕ್ಕೂ ಮೇಲೆ: ಶೇನ್ ವಾರ್ನ್
ನಾವು ಅದೃಷ್ಟವಂತರು
'ಕ್ರೈಸ್ಟ್ಚರ್ಚ್ನ ಮಸೀದಿಯಲ್ಲಿ ನಡೆದ ಶೂಟಿಂಗ್ನಿಂದ ಅಲ್ಲಾ ನಮ್ಮನ್ನು ರಕ್ಷಿಸಿದ್ದಾನೆ. ನಾವು ಬಹಳ ಅದೃಷ್ಟವಂತರು. ಈ ರೀತಿಯ ಘಟನೆ ಮತ್ತೆ ಸಂಭವಿಸುವುದನ್ನು ನೋಡಲು ಬಯಸುವುದಿಲ್ಲ' ಎಂದು ವಿಕೆಟ್ ಕೀಪರ್ ಮುಷ್ಫೀಕರ್ ರಹೀಂ ಟ್ವೀಟ್ ಮಾಡಿದ್ದಾರೆ.
ಮೂರನೇ ಟೆಸ್ಟ್ ಪಂದ್ಯ ರದ್ದು
ಈ ಘಟನೆಯಿಂದ ಪ್ರವಾಸಿ ಬಾಂಗ್ಲಾದೇಶದ ಕ್ರಿಕೆಟಿಗರು ಆತಂಕಕ್ಕೆ ಒಳಗಾಗಿದ್ದಾರೆ. ಕ್ರಿಕೆಟ್ ಮೈದಾನದ ಸಮೀಪವೇ ಈ ದಾಳಿ ನಡೆದಿರುವುದರಿಂದ ಭದ್ರತೆಯ ಹಿತದೃಷ್ಟಿಯಿಂದ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ಘಟನೆಯ ಕುರಿತಂತೆ ಚರ್ಚಿಸಿದ್ದು, ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಆಡುವುದು ಸೂಕ್ತವಲ್ಲ ಎಂಬ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.


Click it and Unblock the Notifications
