ನೀವು ಕೈ ಬಿಟ್ಟರೂ, ಆತ ಬಿಡಲಾರ
ಶನಿವಾರ (ಅ.27) ವಿಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಬೂಮ್ರಾ ಓವರ್ ನಲ್ಲಿ ಚಂದ್ರಪೌಲ್ ಹೇಮರಾಜ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಧೋನಿ ಪೆವಿಲಿಯನ್ ಗೆ ಅಟ್ಟಿದ್ದರು. ಇದನ್ನು ಕೊಂಡಾಡಿರುವ ಕ್ರಿಕೆಟ್ ಅಭಿಮಾನಿಗಳು, ನೀವು (ಬಿಸಿಸಿಐ) ತಂಡದಿಂದ ಕೈ ಬಿಟ್ಟರೂ ಧೋನಿ ಕೈ (ಕ್ಯಾಚ್) ಬಿಡಲಾರ ಎಂದು ಬಹಳಷ್ಟು ಟ್ವೀಟ್ ಗಳನ್ನು ಮಾಡಿದ್ದಾರೆ.
ಟಿ20 ಪಂದ್ಯಗಳನ್ನಾಡುತ್ತಿಲ್ಲ
ಧೋನಿಗೀಗ 37ರ ಹರೆಯ. ಒಂದರ್ಥದಲ್ಲಿ ಧೋನಿ ತಮ್ಮ ವೃತ್ತಿ ಜೀವನದ ಕೊನೆ ಕ್ಷಣಗಳಲ್ಲಿರುವುದೂ ಹೌದು. ಈ ಸಂದರ್ಭದಲ್ಲೇ ಅವರನ್ನು ಆರು (ವಿಂಡೀಸ್ ವಿರುದ್ಧ 3+ ಆಸೀಸ್ ವಿರುದ್ಧ 3) ಟಿ20 ಪಂದ್ಯಗಳಿಂದ ಹೊರಗಿಟ್ಟಿರುವುದಕ್ಕೆ ಇಲ್ಲೊಬ್ಬರು ನೊಂದು ಟ್ವೀಟ್ ಮಾಡಿದ್ದಾರೆ.
ಧೋನಿ ಮೇಲೆ ನಂಬಿಕೆ ಇಡಿ
ಧೋನಿ ಉತ್ತಮ ಪ್ರದರ್ಶನ ನೀಡದೆ ಸ್ವಲ್ಪ ಮಂಕಾಗಿದ್ದಾರೆ. ಆದರೆ ನಮಗಂತೂ ನಂಬಿಕೆಯಿದೆ. ನೀವೂ ಶಾಂತವಾಗಿ. ಧೋನಿ ಮೇಲೆ ನಂಬಿಕೆಯಿಡಿ. ಆತ ಮತ್ತೆ ಫಾರ್ಮ್ ಗೆ ಬಂದೇ ಬರುತ್ತಾರೆ ಎಂಬರ್ಥದಲ್ಲಿ ಇಲ್ಲೊಂದು ಟ್ವೀಟ್.
ನಮ್ಮ ಮನಸ್ಸಿನಿಂದ ಹೊರಗಿಟ್ಟಿಲ್ಲ
'ನನ್ನ ನಾಯಕ ಘರ್ಜನೆಯೊಂದಿಗೆ ಮತ್ತೆ ಫಾರ್ಮ್ ಗೆ ಮರಳುತ್ತಾರೆ. ಧೋನಿಯನ್ನು ನೀವು ಟಿ20 ತಂಡದಿಂದ ಹೊರಗಿಟ್ಟಿರಬಹುದು, ಆದರೆ ನಮ್ಮ ಮನಸ್ಸಿನಿಂದಲ್ಲ' ಎಂದು ಹೇಮನ್ ಟ್ವೀಟ್ ಮಾಡಿದ್ದಾರೆ.
ಟಿ20 ನೋಡೋದನ್ನು ನಿಲ್ಲಿಸುತ್ತಿದ್ದೇನೆ
ಸಚಿನ್ ನಿವೃತ್ತಿಯ ಬಳಿಕ ನನ್ನ ತಂದೆ ಕ್ರಿಕೆಟ್ ನೋಡೋದನ್ನೇ ಬಹುತೇಕ ನಿಲ್ಲಿಸಿದ್ರು. ಧೋನಿಯನ್ನು ಟೆಸ್ಟ್ ತಂಡದಿಂದ ಹೊರಗಿಟ್ಟಾಗ ನಾನೂ ಟೆಸ್ಟ್ ನೋಡೋದನ್ನು ನಿಲ್ಲಿಸಿದ್ದೆ. ಮತ್ತೀಗ ಟಿ20ಯನ್ನು ನೋಡದಿರಲು ನಿರ್ಧರಿಸಿದ್ದೇನೆ.
ಪ್ರದರ್ಶನದೊಂದಿಗೆ ಉತ್ತರಿಸುತ್ತಾರೆ
ದಿಗ್ಗಜರು ಯಾವತ್ತಿಗೂ ತಮ್ಮ ಸಾಧನೆಯ ಯಾ ಪ್ರದರ್ಶನದ ಮೂಲಕ ಉತ್ತರಿಸುತ್ತಾರೆ. ಟಿ20 ತಂಡದಿಂದ ಧೋನಿಯನ್ನು ಹೊರಗಿಟ್ಟಿದ್ದಕ್ಕೆ ಮನೀಷ್ ಅವರ ಟ್ವೀಟ್ ತಿರುಗೇಟು.


Click it and Unblock the Notifications
