ಆಯ್ಕೆಯಾದರೂ ಉನಾದ್ಕತ್ ಕಣಕ್ಕಿಳಿಯಲ್ಲ
2010 ರಲ್ಲಿ ಭಾರತ ತಂಡಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಜಯದೇವ್ ಉನಾದ್ಕತ್ 12 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಣಿಜಿ ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ಅವರು ನೀಡಿದ ಉತ್ತಮ ಪ್ರದರ್ಶನವನ್ನು ಪರಿಗಣಿಸಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಎಡಗೈ ವೇಗದ ಬೌಲರ್ ದೇಶೀಯ ಕ್ರಿಕೆಟ್ನಲ್ಲಿ ಎಲ್ಲಾ ಮಾದರಿಯನ್ನು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ವಿಶೇಷವಾಗಿ ರಣಜಿ ಟ್ರೋಫಿಯಲ್ಲಿ, ಕಳೆದ ಕೆಲವು ಋತುಗಳಲ್ಲಿ ಅವರು ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಭಾರತದ ಹಿರಿಯ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡು ಹೊರಬಿದ್ದ ನಂತರ ಅವರ ಸ್ಥಾನಕ್ಕೆ ಜಯದೇವ್ ಉನಾದ್ಕತ್ ಅವರಿಗೆ ಅವಕಾಶ ನೀಡಲಾಗಿದೆ.
ಆದರೆ, ತಂಡಕ್ಕೆ ಆಯ್ಕೆಯಾದರೂ ಕೂಡ ಜಯದೇವ್ ಉನಾದ್ಕತ್ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಕಷ್ಟವಾಗಲಿದೆ. ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಆಯ್ಕೆಯಾಗಿದ್ದು, ಶಾರ್ದೂಲ್ ಠಾಕೂರ್ ಆಲ್ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಮೂವರು ವೇಗಿಗಳು ಇಬ್ಬರು ಸ್ಪಿನ್ನರ್ ತಂಡದಲ್ಲಿ ಸ್ಥಾನ ಪಡೆಯಲಿದ್ದು, ಉನಾದ್ಕತ್ಗೆ ಅವಕಾಶಕ್ಕಾಗಿ ಕಾಯಬೇಕಾಗಿದೆ.
ENG vs PAK 2nd Test: ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಜೋ ರೂಟ್
ಪದಾರ್ಪಣೆ ಮಾಡಲು ಕಾಯಬೇಕಿದೆ ಭರತ್
ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯಲ್ಲಿ ಕೆಎಸ್ ಭರತ್ ಪದಾರ್ಪಣೆ ಮಾಡಬಹುದೆಂದು ಕೆಲವು ಚರ್ಚೆಗಳು ನಡೆದರೂ ಅವರು ಅದು ಈ ಸರಣಿಯಲ್ಲಿ ನನಸಾಗುವುದು ಕಷ್ಟ.
ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿರುವುದರಿಂದ ಕೆಎಸ್ ಭರತ್ ತಂಡಕ್ಕೆ ಆಯ್ಕೆಯಾಗುವುದು ಕಷ್ಟವಾಗಲಿದೆ. ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಪ್ರಮುಖ ಆಟಗಾರರಾಗಿದ್ದು, ಕೆಎಸ್ ಭರತ್ಗೆ ಅವಕಾಶ ಸಿಗುವುದಿಲ್ಲ ಎನ್ನಲಾಗಿದೆ.
ಸೈನಿಗೆ ಅವಕಾಶ ಸಿಗೋದೆ ಕಷ್ಟ
ಭಾರತ ಟೆಸ್ಟ್ ತಂಡಕ್ಕೆ ತಡವಾಗಿ ಸೇರ್ಪಡೆಯಾಗಿರುವ ನವದೀಪ್ ಸೈನಿ, ಬಾಂಗ್ಲಾದೇಶ ಎ ತಂಡದ ವಿರುದ್ಧ ನಡೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ನಾಲ್ಕು ಇನ್ನಿಂಗ್ಸ್ಗಳಲ್ಲಿ ಆರು ವಿಕೆಟ್ಗಳನ್ನು ಪಡೆದರು ಮತ್ತು ಎರಡನೇ ಪಂದ್ಯದಲ್ಲಿ ಅಜೇಯ ಅರ್ಧಶತಕವನ್ನು ಸಹ ಗಳಿಸಿ ಗಮನ ಸೆಳೆದರು.
ಆದರೂ, ಸೈನಿ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಆಡುವ ಬಳಗ ಸೇರುವುದು ಕಷ್ಟ. ಅವರ ಪ್ರಥಮ ದರ್ಜೆಯ ಅಂಕಿ ಅಂಶಗಳು ಕೂಡ ಉತ್ತಮವಾಗಿಲ್ಲದ ಕಾರಣ, ಉನಾದ್ಕತ್ ಅವರನ್ನು ಮೀರಿ ಸೈನಿಗೆ ಅವಕಾಶ ನೀಡುವ ಬಗ್ಗೆ ತಂಡದ ಆಡಳಿತ ಮಂಡಳಿ ಚಿಂತೆ ಮಾಡುವುದಿಲ್ಲ.