ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆ
ಭಾರತ ತಂಡ ಮಾತ್ರವಲ್ಲದೆ ಇಂಗ್ಲೆಂಡ್ ತಂಡವು ತನ್ನದೇ ಆದ ಬದಲಾವಣೆಗಳ ಮೂಲಕ ಸಾಗಿದೆ ಮತ್ತು 2021ರ ಸರಣಿಯ ನಂತರ ಪ್ರಾಯಶಃ ಹೆಚ್ಚು ಆಕ್ರಮಣಕಾರಿಯಾಗಿದೆ. ಬ್ಯಾಕ್ ಟು ಬ್ಯಾಕ್ ಸರಣಿಗಳಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸೋಲು ಇಂಗ್ಲಿಷ್ ತಂಡದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಹೊಸ ನಾಯಕನಾಗಿ ಬೆನ್ ಸ್ಟೋಕ್ಸ್ ಮತ್ತು ಕೋಚ್ ಆಗಿ ಬ್ರೆಂಡನ್ ಮೆಕಲಮ್ರನ್ನು ನೇಮಿಸಲಾಯಿತು. ಹೊಸ ನಾಯಕ ಮತ್ತು ತರಬೇತುದಾರರಿಗೆ ಕೆಲಸ ಮಾಡುವಂತೆ ತೋರುವ ಕರ್ತವ್ಯಗಳನ್ನು ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ಆತಿಥೇಯರಿಗೆ ಬಲವನ್ನು ತಂದುಕೊಟ್ಟಿದೆ.
ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳು ಮುಖಾಮುಖಿಯಾದಾಗ ಕ್ರಿಕೆಟ್ ಇತಿಹಾಸದಲ್ಲಿ ಭಾರತವು ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಪರಿಗಣಿಸಿದರೆ, ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಆದಾಗ್ಯೂ, ಈ ಪಂದ್ಯದಲ್ಲಿ ಭಾರತ ತಂಡ ಗೆದ್ದು ದಾಖಲೆ ಬರೆಯಲು ಎದುರು ನೋಡುತ್ತಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
2007ರ ನಂತರ ಇಂಗ್ಲೆಂಡ್ನಲ್ಲಿ ಮೊದಲ ಸರಣಿ ಜಯ
ಒಂದು ವೇಳೆ ಭಾರತವು ಜುಲೈ 1ರಂದು ಪ್ರಾರಂಭವಾಗುವ ಟೆಸ್ಟ್ ಪಂದ್ಯವನ್ನು ಗೆಲ್ಲಲು ಅಥವಾ ಡ್ರಾ ಮಾಡಲು ಯಶಸ್ವಿಯಾದರೆ, ಇದು 2007ರ ನಂತರ ಇಂಗ್ಲೆಂಡ್ನಲ್ಲಿ ಮೊದಲ ಸರಣಿ ಜಯವಾಗಲಿದೆ. ಕಳೆದ ಬಾರಿ ಭಾರತವು ತವರಿನಿಂದ ಹೊರಗೆ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಗೆದ್ದುಕೊಂಡಿತು, ವಾಸಿಂ ಜಾಫರ್ ಮತ್ತು ದಿನೇಶ್ ಕಾರ್ತಿಕ್ ಅವರಂತಹವರು ಉತ್ತಮ ಪ್ರದರ್ಶನವನ್ನು ನೀಡಿದರು. ಮೈಕಲ್ ವಾನ್ ನೇತೃತ್ವದ ತಂಡದ ವಿರುದ್ಧ ಭಾರತ 1-0 ಅಂತರದಲ್ಲಿ ಗೆಲುವಿನ ಕೇಕೆ ಹಾಕಿತ್ತು. ವಿಶೇಷವೆಂದರೆ ಈಗ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅಂದು ನಾಯಕರಾಗಿದ್ದರು.
ಸ್ಟುವರ್ಟ್ ಬ್ರಾಡ್ 550 ಟೆಸ್ಟ್ ವಿಕೆಟ್ ಪಡೆಯಲು ಕೇವಲ ಒಂದು ವಿಕೆಟ್
ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 550 ಟೆಸ್ಟ್ ವಿಕೆಟ್ಗಳನ್ನು ಪಡೆಯಲು ಕೇವಲ ಒಂದು ವಿಕೆಟ್ ದೂರದಲ್ಲಿದ್ದಾರೆ. ಈಗಾಗಲೇ 536 ವಿಕೆಟ್ಗಳನ್ನು ಹೊಂದಿರುವ ಆಸ್ಟ್ರೇಲಿಯನ್ ಲೆಜೆಂಡರಿ ಗ್ಲೆನ್ ಮೆಕ್ಗ್ರಾತ್ರನ್ನು ಹಿಂದಿಕ್ಕಿದ್ದಾರೆ. ಒಂದು ವೇಳೆ ಜೇಮ್ಸ್ ಆಂಡರ್ಸನ್ ಅವರು ಗಾಯದಿಂದ ಹಿಂತಿರುಗಿದರೆ ಸ್ಟುವರ್ಟ್ ಬ್ರಾಡ್ ಆಡಲು ಅವಕಾಶ ಸಿಗದಿರುವ ಸಾಧ್ಯತೆಯಿದೆ. ಅಂತಿಮ ಟೆಸ್ಟ್ ಪಂದ್ಯವು ಜುಲೈ 1 ರಿಂದ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಸಂಭಾವ್ಯ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹದ್ ಸಿರಾಜ್ , ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್