
ಕೊಹ್ಲಿ ಮಧ್ಯ ಪ್ರವೇಶ
"ನಾನು ಬೆನ್ ಸ್ಟೋಕ್ಸ್ಗೆ ಬೌನ್ಸರ್ ಎಸೆದಾಗ ಆತ ನನ್ನನ್ನು ನಿಂದನಾತ್ಮಕ ಭಾಷೆಯನ್ನು ಪ್ರಯೋಗಿಸಿದರು. ಆಗ ನಾನು ನಾಯಕ ವಿರಾಟ್ ಕೊಹ್ಲಿ ಬಳಿ ಆತನನ್ನು ಸಂಭಾಳಿಸುವಂತೆ ಕೇಳಿಕೊಂಡಿದ್ದೆ. ವಿರಾಟ್ ಕೊಹ್ಲಿ ಮಧ್ಯ ಪ್ರವೇಶದಿಂದಾಗಿ ಆ ವಿಚಾರ ಅಂತ್ಯಕಂಡಿತು" ಎಂದು ಸಿರಾಜ್ ಹೇಳಿದ್ದಾರೆ.

ಮುಂದುವರಿದ ತಿಕ್ಕಾಟ
ಮೊಹಮ್ಮದ್ ಸಿರಾಜ್ ಹಾಗೂ ಇಂಗ್ಲೆಂಡ್ ವೇಗಿ ಬೆನ್ ಸ್ಟೋಕ್ಸ್ ನಡುವಿನ ತಿಕ್ಕಾಟ ಮುಂದಿನ ಓವರ್ನಲ್ಲೂ ಮುಂದುವರಿದಿತ್ತು. ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಮುಂದಿನ ಓವರ್ ಎಸೆಯಲು ಬಂದಾಗ ಆ ಓವರ್ನಲ್ಲಿ ಬೆನ್ ಸ್ಟೋಕ್ಸ್ ಮೂರು ಬೌಂಡರಿಯನ್ನು ಸಿಡಿಸಿದರು.

ಸಿರಾಜ್ ಗಮನಾರ್ಹ ಪ್ರದರ್ಶನ
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಂಡಿತ್ತು. ವೈಯಕ್ತಿಕ ಕಾರಣಗಳಿಂದ ಅಂತಿಮ ಟೆಸ್ಟ್ನಿಂದ ಹೊರಗುಳಿದ ಜಸ್ಪ್ರೀತ್ ಬೂಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರು. ನಾಯಕ ಜೋ ರೂಟ್ ಹಾಗೂ ಬೈರ್ಸ್ಟೋವ್ ವಿಕೆಟ್ ಪಡೆದು ಸಿರಾಜ್ ಮಿಂಚಿದರು.


Click it and Unblock the Notifications
