ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB ಗೆಲ್ಲಬೇಕಾದ್ರೆ ಡೆತ್‌ ಓವರ್‌ನಲ್ಲಿ ಈತನಿಗೆ ಬೌಲಿಂಗ್ ಕೊಡ್ಬೇಡಿ: ಇರ್ಫಾನ್ ಪಠಾಣ್

Irfan Pathan Doesnt Want Shivam Dube To Bowl Death Overs For RCB

ಐಪಿಎಲ್ 13ನೇ ಆವೃತ್ತಿಯಲ್ಲಾದ್ರೂ ಕಪ್ ಗೆಲ್ಲಬೇಕು ಎಂದು ದುಬೈನಲ್ಲಿ ತೊಡೆತಟ್ಟಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಮತ್ತದೆ ಹಳೆಯ ಡೆತ್‌ ಓವರ್ ಬೌಲಿಂಗ್ ಸಮಸ್ಯೆ ಕಾಡ್ತಿದೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಬೌಲರ್‌ ಇರ್ಫಾನ್ ಪಠಾಣ್ ಆರ್‌ಸಿಬಿ ಡೆತ್‌ ಓವರ್ಸ್‌ಗೆ ಸಲಹೆಯೊಂದನ್ನು ನೀಡಿದ್ದಾರೆ.

ಆರ್‌ಸಿಬಿ ತಂಡದಲ್ಲಿರುವ ಆಲ್‌ರೌಂಡರ್ ಶಿವಂ ದುಬೆಗೆ ಯಾವುದೇ ಕಾರಣಕ್ಕೂ ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ಮಾಡಿಸಬಾರದುರು ಎಂದು ಪಠಾಣ್‌ ಅಭಿಪ್ರಾಯ ಪಟ್ಟಿದ್ದಾರೆ.

ಸೂಪರ್‌ ಓವರ್‌ನಲ್ಲಿ ABD ಜೊತೆಗೆ ಕೊಹ್ಲಿ ಬ್ಯಾಟಿಂಗ್‌ಗೆ ಬಂದಿದ್ದೇಕೆ?ಸೂಪರ್‌ ಓವರ್‌ನಲ್ಲಿ ABD ಜೊತೆಗೆ ಕೊಹ್ಲಿ ಬ್ಯಾಟಿಂಗ್‌ಗೆ ಬಂದಿದ್ದೇಕೆ?

ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 10 ರನ್‌ ಜಯ ದಾಖಲಿಸಿದರೂ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 97 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಶಿವಂ ದುಬೇ 20ನೇ ಓವರ್‌ ಬೌಲಿಂಗ್‌ ಮಾಡಿ ಮೂರು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಹೀಗಾಗಿ ಆರ್‌ಸಿಬಿ ಪರ ಡೆತ್‌ ಓವರ್‌ನಲ್ಲಿ ಸ್ಟ್ರೈಕ್‌ ಬೌಲರ್‌ ನವದೀಪ್‌ ಸೈನಿ ಕನಿಷ್ಠ 2 ಓವರ್‌ಗಳನ್ನು ಬೌಲ್‌ ಮಾಡಬೇಕು ಎಂದಿದ್ದಾರೆ. "ಡೆತ್‌ ಓವರ್‌ ಬೌಲಿಂಗ್‌ನಲ್ಲಿ ಯಾರ್ಕರ್‌ ಎಸೆತಗಳನ್ನು ಯಶಸ್ವಿಯಾಗಿ ತರಲು ನವದೀಪ್‌ ಸೈನಿಯೇ ಉತ್ತಮ ಆಯ್ಕೆ. ಬ್ಯಾಟ್ಸ್‌ಮನ್‌ಗಳಿಗೆ ಅಚ್ಚರಿ ನೀಡಬಲ್ಲ ಬೌಲರ್‌ ಅವರು ಅದ್ಭುತ ಬೌನ್ಸರ್‌ ಕೂಡ ಹೊಂದಿದ್ದಾರೆ. ಹೀಗಾಗಿ ಇನಿಂಗ್ಸ್‌ ಅಂತ್ಯದಲ್ಲಿ ಕನಿಷ್ಠ 2 ಓವರ್‌ಗಳನ್ನಾದರೂ ಅವರು ಬೌಲ್‌ ಮಾಡಬೇಕು," ಎಂದಿದ್ದಾರೆ.

"ಈ ಬಾರಿ ಚಾಲೆಂಜರ್ಸ್‌ ಉತ್ತಮ ತಂಡವನ್ನು ಹೊಂದಿದೆ. ಉಳಿದೆಲ್ಲಾ ತಂಡಗಳಿಗಿಂತಲೂ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ರನ್‌ ಗಳಿಸಲು ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ'ವಿಲಿಯರ್ಸ್‌ ಮೇಲೆ ಅವಲಂಬಿತವಾಗಿಲ್ಲ. ಆರೊನ್‌ ಫಿಂಚ್‌ ಇದ್ದಾರೆ, ದೇವದತ್‌ ಪಡಿಕ್ಕಲ್‌ ಅವರ ಉದಯವಾಗಿದೆ," ಎಂದು ಇರ್ಫಾನ್‌ ವಿವರಿಸಿದ್ದಾರೆ.

Story first published: Tuesday, September 29, 2020, 17:03 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X