For Quick Alerts
ALLOW NOTIFICATIONS  
For Daily Alerts
 

2024ರ ಟಿ20 ವಿಶ್ವಕಪ್‌ಗೆ ಕೊಹ್ಲಿ, ರೋಹಿತ್ ಕೈಬಿಡುವ ವಿಚಾರ; ಗೌತಮ್ ಗಂಭೀರ್ ಹೇಳಿದ್ದು ಹೀಗೆ

Kohli, Rohit Have To Take Tough Decision To Dropping For T20 World Cup 2024 Says Gautam Gambhir

2024ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಶ್ರೀಲಂಕಾ ವಿರುದ್ಧದ ಸರಣಿಗಾಗಿ ಭಾರತದ ಟಿ20 ತಂಡವು ನ್ಯೂಜಿಲೆಂಡ್ ವಿರುದ್ಧ ಆಡಿದ ಸರಣಿಗೆ ಸಾಮಾನ್ಯವಾದ ಒಂದು ಅಂಶವನ್ನು ಹೊಂದಿದೆ. ಅದು ಏನೆಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದಿರುವುದು.

2024ರ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಟಿ20 ತಂಡದ ಪರಿವರ್ತನೆಯ ಅವಧಿಯು ಪ್ರಾರಂಭವಾದಂತೆ ತೋರುತ್ತಿದೆ. ಟಿ20 ಪರಿಸ್ಥಿತಿಗಳ ಯೋಜನೆಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭವಿಷ್ಯದ ನಿರ್ಧಾರವನ್ನು ಆಯ್ಕೆಗಾರರು ತೆಗೆದುಕೊಳ್ಳಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

"ಹೌದು, ಇದು ದೊಡ್ಡ ನಿರ್ಧಾರವಾಗಲಿದೆ. ಇತರ ಕೆಲವು ದೇಶಗಳು ಅಂತಹ ಕರೆಯನ್ನು ತೆಗೆದುಕೊಂಡಿವೆ. ಇಂಗ್ಲೆಂಡ್ ತಂಡ ನಿಜವಾಗಿಯೂ ಆ ದಾರಿಯಲ್ಲಿ ಹೋಗಿದೆ. ಅದರಿಂದ ಸಾಕಷ್ಟು ಯುವ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗಿದೆ. ತಮ್ಮ ವೈಟ್-ಬಾಲ್ ಕ್ರಿಕೆಟ್ ಅನ್ನು ಮರುನಿರ್ಮಾಣ ಮಾಡುವಾಗ ಆಸ್ಟ್ರೇಲಿಯಾ ಸೇರಿದಂತೆ ಇತರ ಕೆಲವು ತಂಡಗಳು ಕೂಡ ಅದನ್ನೇ ಮಾಡಿವೆ," ಎಂದು ಗೌತಮ್ ಗಂಭೀರ್ ತಿಳಿಸಿದರು.

ಟಿ20 ಪಂದ್ಯಗಳ ಭಾಗವಾಗಿಲ್ಲದಿದ್ದರೆ, ಬೇರೊಬ್ಬರಿಗೆ ಆ ಅವಕಾಶ

ಟಿ20 ಪಂದ್ಯಗಳ ಭಾಗವಾಗಿಲ್ಲದಿದ್ದರೆ, ಬೇರೊಬ್ಬರಿಗೆ ಆ ಅವಕಾಶ

"ಭಾರತ ತಂಡದ ಆಯ್ಕೆಗಾರರು ಮುಂದಿನ ಟಿ20 ವಿಶ್ವಕಪ್‌ಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಮೀರಿ ನೋಡಲು ಪ್ರಯತ್ನಿಸಬೇಕು. ಅವರು ಟಿ20 ಪಂದ್ಯಗಳ ಭಾಗವಾಗಿಲ್ಲದಿದ್ದರೆ ಮತ್ತು ಬೇರೊಬ್ಬರು ಆ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ನಂತರ ಹಿರಿಯ ಆಟಗಾರರು ವಾಪಸ್ಸಾದಾಗ ಆ ಯುವ ಆಟಗಾರನನ್ನು ಕೈಬಿಡಲು ಆಯ್ಕೆದಾರರಿಗೆ ಎಷ್ಟು ಕಷ್ಟವಾಗುತ್ತದೆ?" ಮುಂಬರುವ ಭಾರತ ಮತ್ತು ಶ್ರೀಲಂಕಾ ಸರಣಿಯ ಅಧಿಕೃತ ಪ್ರಸಾರಕವಾದ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸಿದ್ದ ಸಂವಾದದಲ್ಲಿ ಗೌತಮ್ ಗಂಭೀರ್ ಮಾತನಾಡಿದರು.

ಇದೆ ವೇಳೆ ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಆಯ್ಕೆಗಾರರು ಏನು ಮಾಡುತ್ತಾರೆ? ಆ ಸಂದರ್ಭದಲ್ಲಿ ಆಟಗಾರರನ್ನು ಬದಲಾಯಿಸುವುದು ನ್ಯಾಯವೇ? ಎಂದು ಗೌತಮ್ ಗಂಭೀರ್ ಪ್ರಶ್ನಿಸಿದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ತಂಡದಲ್ಲಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ತಂಡದಲ್ಲಿ

2022ರಲ್ಲಿ ಭಾರತೀಯ ತಂಡಕ್ಕೆ ಹೆಚ್ಚು ಕಠಿಣವಾಗಿತ್ತು ಮತ್ತು 2023ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡದೊಂದಿಗೆ ಯಾವುದೇ ರೀತಿಯ ಬದಲಾವಣೆಯನ್ನು ಗೌತಮ್ ಗಂಭೀರ್ ಬಯಸುವುದಿಲ್ಲ. ಏಕೆಂದರೆ ಅದು 50 ಓವರ್ ವಿಶ್ವಕಪ್ ವರ್ಷವಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಗಳಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ತಂಡದಲ್ಲಿದ್ದಾರೆ.

ಬಹುತೇಕ ಏಕದಿನ ಸರಣಿಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ.

ಶಿಖರ್ ಧವನ್ 2022ರಲ್ಲಿ 22 ಇನ್ನಿಂಗ್ಸ್‌ಗಳಲ್ಲಿ 688 ರನ್

ಶಿಖರ್ ಧವನ್ 2022ರಲ್ಲಿ 22 ಇನ್ನಿಂಗ್ಸ್‌ಗಳಲ್ಲಿ 688 ರನ್

ಕಳೆದ ಹತ್ತು ವರ್ಷಗಳಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಶಿಖರ್ ಧವನ್, 2022ರಲ್ಲಿ 22 ಇನ್ನಿಂಗ್ಸ್‌ಗಳಲ್ಲಿ 74.21ರ ಕಡಿಮೆ ಸ್ಟ್ರೈಕ್‌ರೇಟ್‌ನೊಂದಿಗೆ 688 ರನ್ ಗಳಿಸಿದರು. ಬಾಂಗ್ಲಾದೇಶದ ವಿರುದ್ಧ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 18 ರನ್ ಗಳಿಸಿದರು.

ಏಕದಿನ ತಂಡಕ್ಕೆ ಪುನರಾಗಮನ ಮಾಡುವುದು ಶಿಖರ್ ಧವನ್‌ಗೆ ಕಷ್ಟದ ಕೆಲಸ ಎಂದು ಗೌತಮ್ ಗಂಭೀರ್ ಭಾವಿಸಿದ್ದಾರೆ. "ಯಾರು ಬೇಕಾದರೂ ಪುನರಾಗಮನ ಮಾಡಬಹುದು. ಆದರೆ ನನ್ನ ಪ್ರಕಾರ, ಶಿಖರ್ ಧವನ್‌ಗೆ ಪುನರಾಗಮನ ಮಾಡುವುದು ತುಂಬಾ ಕಷ್ಟ, ಏಕೆಂದರೆ ಅಗ್ರಕ್ರಮಾಂಕದಲ್ಲಿ ಇಶಾನ್ ಕಿಶನ್, ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಇದ್ದಾರೆ,'' ಎಂದು ಹೇಳಿದರು.

Story first published: Thursday, December 29, 2022, 19:46 [IST]
Other articles published on Dec 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+