ಟಿ-20 ಸರಣಿಯನ್ನ ಭರ್ಜರಿಯಾಗಿ ಗೆದ್ದಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಗೆ ತಯಾರಿ ನಡೆಸಿದೆ. ಅತ್ತ ನ್ಯೂಜಿಲೆಂಡ್ ಕೂಡ ಟಿ20 ಸರಣಿಯಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಬಲಿಷ್ಠ ಟೀಂ ಇಂಡಿಯಾವನ್ನ ಅವರದ್ದೇ ನೆಲದಲ್ಲಿ ಮಣಿಸುವುದು ಸಾಮಾನ್ಯ ವಿಚಾರವಾಗಿಲ್ಲ, ಬಹಳ ಪ್ರಬಲವಾದ ರಣತಂತ್ರವನ್ನ ರೂಪಿಸಿಯೇ ಕಣಕ್ಕಿಳಿಯಬೇಕಿದೆ.
ನ್ಯೂಜಿಲೆಂಡ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಕಿವೀಸ್ನ ಫುಲ್ ಟೈಮ್ ನಾಯಕ ಕೇನ್ ವಿಲಿಯಮ್ಸನ್ ವಾಪಸ್ಸಾತಿ ತಂಡದ ಬಲ ಹೆಚ್ಚಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಭಿನ್ನ ತಂತ್ರದೊಂದಿಗೆ ತಯಾರಿ ನಡೆಸಿದೆ.
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ: ಕೆ.ಎಲ್ ರಾಹುಲ್ ತಂಡದಿಂದ ಹೊರಕ್ಕೆ
ನವೆಂಬರ್ 25ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡವು ಮೂರು ಸ್ಪೆಷಲಿಸ್ಟ್ ಸ್ಪಿನ್ನರ್ಗಳೊಂದಿಗೆ ಆಡಬಹುದು ಎಂದು ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ. ಆದರೆ ಇದು ಪರಿಸ್ಥಿತಿ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿರುತ್ತದೆ ಎನ್ನಲಾಗಿದೆ.
ಪ್ರವಾಸಿ ತಂಡವು ಸದ್ಯ ಮಿಚೆಲ್ ಸ್ಯಾಂಟ್ನರ್, ಅಜಾಜ್ ಪಟೇಲ್, ವಿಲಿಯಂ ಸೊಮರ್ವಿಲ್ಲೆ, ಗ್ಲೆನ್ ಫಿಲಿಪ್ಸ್ ಮತ್ತು ಚೊಚ್ಚಲ ಪಂದ್ಯವನ್ನಾಡಲು ಎದುರು ನೀಡುತ್ತಿರುವ ರಚಿನ್ ರವೀಂದ್ರ ಸೇರಿದಂತೆ ಐದು ಸ್ಪಿನ್ನರ್ಗಳ ಆಯ್ಕೆಯನ್ನು ಹೊಂದಿದೆ.
''ತಂಡಗಳು ಇಲ್ಲಿಗೆ ಬರುತ್ತವೆ ಮತ್ತು ಗೆಲ್ಲುವುದಿಲ್ಲ ಎಂಬುದನ್ನು ನೀವು ನೋಡಬೇಕು ಮತ್ತು ಅರಿತುಕೊಳ್ಳಬೇಕು. ಇದು ಸ್ಪಷ್ಟ ಸವಾಲಿನ ಅಗಾಧತೆಯಾಗಿದೆ, "ಎಂದು ಸ್ಟೆಡ್ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಮೊದಲು ಮಾಧ್ಯಮ ಸಂವಾದವನ್ನು ಹೇಳಿದರು.
"ನಾಲ್ಕು ಸೀಮರ್ಗಳು ಮತ್ತು ಒಬ್ಬ ಅರೆಕಾಲಿಕ ಸ್ಪಿನ್ನರ್ಗಳನ್ನು ಆಡುವ ಸಾಂಪ್ರದಾಯಿಕ ವಿಧಾನ ಇಲ್ಲಿ ಸಾಧ್ಯವಿಲ್ಲ. ಈ ಆಟದಲ್ಲಿ ಮೂರು ಸ್ಪಿನ್ನರ್ಗಳು ಆಡುವುದನ್ನು ನೀವು ನೋಡಬಹುದು ಮತ್ತು ಪಿಚ್ ಅನ್ನು ನೋಡಿದ ಬಳಿಕ ಅದನ್ನು ನಿರ್ಧರಿಸಲಾಗುತ್ತದೆ'' ಎಂದು ಸ್ಟೆಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾನ್ಪುರದಲ್ಲಿ ಕಪ್ಪು ಜೇಡಿಮಣ್ಣಿನಿಂದ ಕೂಡಿದ ಪಿಚ್ ಹಾಗೂ ವಾಂಖೆಡೆಯಲ್ಲಿ ಕೆಂಪು ಜೇಡಿಮಣ್ಣಿನಂತಹ ವ್ಯತ್ಯಾಸಗಳು ನಮಗೆ ತಿಳಿದಿದೆ. ಇವುಗಳಿಗೆ ತಕ್ಕಂತೆ ಬೇಕಾದ ರೂಪಾಂತರಗಳನ್ನು ನಾವು ಮಾಡುತ್ತೇವೆ ಎಂದು ಸ್ಟೆಡ್ ವಿವರಿಸಿದರು.
ಇನ್ನು ಪರಿಸ್ಥಿತಿಗಳಿಗೆ ಅನುಗುಣವಾಗಿ ವಿಧಾನವನ್ನು ಬದಲಾಯಿಸಬೇಕಾಗುತ್ತದೆ ಎಂದು ಸ್ಟೇಡ್ ಹೇಳಿದರು. "ನಮ್ಮ ದೃಷ್ಟಿಕೋನದಿಂದ, ನಾವು ಆಡುವ ವಿಧಾನವನ್ನು ಬದಲಾಯಿಸಬೇಕು ಆದರೆ ಟೆಸ್ಟ್ ಕ್ರಿಕೆಟ್ನ ಕೆಲವು ಪ್ರಮುಖ ತತ್ವಗಳಿಗೆ ಅಂಟಿಕೊಳ್ಳಬೇಕು. ನಾವು ದೀರ್ಘಾವಧಿಯವರೆಗೆ ಸ್ಪರ್ಧಾತ್ಮಕವಾಗಿರಲು ಪ್ರಯತ್ನಿಸುತ್ತೇವೆ. ಈ ಕೋವಿಡ್ ಯುಗದಲ್ಲಿ ಅಭ್ಯಾಸ ಪಂದ್ಯಗಳನ್ನು ಪಡೆಯುವುದು ಕಷ್ಟ ಸಾಧ್ಯವಾಗಿದೆ. ಎರಡು ತಂಡಗಳು ಸದ್ಯ ಟಿ20 ಆಡಿಯೇ ಬಂದಿದ್ದು, ಒಂದೇ ದೋಣಿಯಲ್ಲಿದ್ದೇವೆ'' ಎಂದು ಅವರು ಹೇಳಿದರು.
ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಹೊಸ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನಲ್ಲಿ ಮೊದಲ ಬಾರಿಗೆ ಆಡಲಿವೆ, ನ್ಯೂಜಿಲೆಂಡ್ ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಹೋರಾಟ ನಡೆಸಲಿದೆ.
ಟೀಂ ಇಂಡಿಯಾ ಸ್ಕ್ವಾಡ್
ಅಜಿಂಕ್ಯ ರಹಾನೆ (ನಾಯಕ) ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ) ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ದಿಮಾನ್ ಸಾಹಾ, ಕೆ.ಎಸ್ ಭರತ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ