ಸಮಿತ್ ದ್ರಾವಿಡ್ ಕೂಡ ಉತ್ತಮ ಕ್ರಿಕೆಟಿಗ
ಗುಣಮಟ್ಟದ ವಿಕೆಟ್ ಕೀಪರ್ನನ್ನು ಹುಡುಕಲು ಭಾರತ ತಂಡ ಹೆಣಗಾಡುತ್ತಿರುವಾಗ ರಾಹುಲ್ ದ್ರಾವಿಡ್ ಕೀಪಿಂಗ್ ಗ್ಲೌಸ್ ತೊಟ್ಟಿದ್ದರು. ನಂತರ ಎಂಎಸ್ ಧೋನಿ ಭಾರತ ತಂಡಕ್ಕೆ ಆಯ್ಕೆಯಾದ ನಂತರ ರಾಹುಲ್ ದ್ರಾವಿಡ್ ಪ್ರಮುಖ ಬ್ಯಾಟ್ಸ್ಮನ್ ಆಗಿ ಮಾತ್ರ ಆಡುತ್ತಿದ್ದರು.
ಕ್ರಿಕೆಟ್ನಲ್ಲಿ ಅನ್ವಯ್ ಮಾತ್ರ ಹೆಸರು ಮಾಡುತ್ತಿಲ್ಲ. ಹಿರಿಯ ಸಹೋದರ ಸಮಿತ್ ದ್ರಾವಿಡ್ ಕೂಡ ಉತ್ತಮ ಕ್ರಿಕೆಟಿಗನಾಗಿದ್ದಾರೆ. ಇತ್ತೀಚೆಗೆ ಸಮಿತ್ ದ್ರಾವಿಡ್ 2019/20 ಋತುವಿನಲ್ಲಿ ಅಂಡರ್-14 ಮಟ್ಟದಲ್ಲಿ ಎರಡು ದ್ವಿಶತಕ ಬಾರಿಸಿ ಹೆಸರು ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಜಯದ ಉತ್ಸಾಹದಲ್ಲಿ ದ್ರಾವಿಡ್ ಪಡೆ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಸದ್ಯ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿದ್ದು, ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಶುಭ್ಮನ್ ಗಿಲ್ ಅವರ ಅಮೋಘ ದ್ವಿಶತಕ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ 12 ರನ್ಗಳಿಂದ ರೋಚಕವಾಗಿ ಗೆದ್ದಿತು.
ನ್ಯೂಜಿಲೆಂಡ್ ಪರ ಮೈಕೆಲ್ ಬ್ರೇಸ್ವೆಲ್ ಶತಕ
ಭಾರತ ನೀಡಿದ್ದ 350 ರನ್ಗಳ ಚೇಸಿಂಗ್ನಲ್ಲಿ ನ್ಯೂಜಿಲೆಂಡ್ ಪರ ಮೈಕೆಲ್ ಬ್ರೇಸ್ವೆಲ್ ಶತಕ ಬಾರಿಸುವ ಮೂಲಕ ಪಂದ್ಯವನ್ನು ಗೆಲುವಿನ ಗಡಿ ಸಮೀಪ ಕೊಂಡೊಯ್ದಿದ್ದರು. ಆದರೆ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ನ್ಯೂಜಿಲೆಂಡ್ ಪಂದ್ಯವನ್ನು ಸೋತಿತು.
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯವನ್ನು ಶನಿವಾರ, ಜನವರಿ 21ರಂದು ರಾಯ್ಪುರದಲ್ಲಿ ಸೆಣಸಲಿದೆ. ಮೊದಲ ಪಂದ್ಯದಲ್ಲಿ 300ಕ್ಕಿಂತ ಅಧಿಕ ರನ್ ಗಳಿಸಿದ ಹೊರತಾಗಿಯೂ ಭಾರತ ತಂಡ ತಿಣುಕಾಡಿ ಗೆದ್ದಿತು. ಹೀಗಾಗಿ ಎದುರಾಳಿ ಟಾಮ್ ನಾಯಕತ್ವದ ಕಿವೀಸ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಎರಡನೇ ಪಂದ್ಯವನ್ನು ಗೆದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.