ಎರಡನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಪೃಥ್ವಿ ಶಾ
ಕೇವಲ 383 ಎಸೆತಗಳಲ್ಲಿ ಎರಡನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಪೃಥ್ವಿ ಶಾ, ಅಸ್ಸಾಂ ವಿರುದ್ಧ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಅವರ ಇನ್ನಿಂಗ್ಸ್ನಲ್ಲಿ 49 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಒಳಗೊಂಡಿದ್ದವು.
23 ವರ್ಷದ ಆಟಗಾರ ಪೃಥ್ವಿ ಶಾ ಅವರ ಸಾಧನೆಯನ್ನು ಹಲವರು ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಇದೇ ವೇಳೆ ಜಯ್ ಶಾ ಅವರು ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಮುಂಬೈ ತಂಡದ ಆಟಗಾರನನ್ನು ಹೊಗಳಿದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪೃಥ್ವಿ ಶಾರನ್ನು ಹೊಗಳಿ ಟ್ವಿಟ್ಟರ್ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಹಾಕಿದ್ದು, ಇದೊಂದು ಅಸಾಧಾರಣ ಇನ್ನಿಂಗ್ಸ್ ಎಂದು ಜಯ್ ಶಾ ಕರೆದಿದ್ದಾರೆ. ಮುಂಬೈ ಯುವ ಬ್ಯಾಟರ್ನನ್ನು ಅಭಿನಂದಿಸಿದ ಅವರು, ಪೃಥ್ವಿ ಶಾ ಅಗಾಧ ಸಾಮರ್ಥ್ಯದ ಆಟಗಾರ, ಅವರ ಪ್ರಯತ್ನದ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.
|
ಪೃಥ್ವಿ ಶಾ ಅಪಾರ ಸಾಮರ್ಥ್ಯ ಹೊಂದಿರುವ ಪ್ರತಿಭೆ
"ದಾಖಲೆ ಪುಸ್ತಕಕ್ಕೆ ಮತ್ತೊಂದು ಪ್ರವೇಶ! ಪೃಥ್ವಿ ಶಾ ಎಂತಹ ಅಸಾಧಾರಣ ಇನ್ನಿಂಗ್ಸ್ ಆಡಿದು. ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರಣಜಿ ಕ್ರಿಕೆಟ್ ಸ್ಕೋರ್ ಮಾಡಿದ್ದಕ್ಕಾಗಿ ಅಭಿನಂದನೆಗಳು. ಅಪಾರ ಸಾಮರ್ಥ್ಯ ಹೊಂದಿರುವ ಪ್ರತಿಭೆ. ಅವರ ಪ್ರಯತ್ನದ ಬಗ್ಗೆ ನಾವು ಹೆಮ್ಮೆಪಡುತ್ತೇವೆ," ಎಂದು ಜಯ್ ಶಾ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಸಂದೇಶಕ್ಕೆ ಧನ್ಯವಾದ ಅರ್ಪಿಸಿದ ಪೃಥ್ವಿ ಶಾ, ಪ್ರೋತ್ಸಾಹದ ಮಾತುಗಳು ಬಹಳಷ್ಟು ಅರ್ಥವಾಗಿವೆ ಎಂದು ಹೇಳಿದರು. ತಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
|
ಜಯ್ ಶಾ ಅವರ ಸಂದೇಶಕ್ಕೆ ಧನ್ಯವಾದ ಅರ್ಪಿಸಿದ ಪೃಥ್ವಿ ಶಾ
"ತುಂಬಾ ಧನ್ಯವಾದಗಳು ಜಯ್ ಶಾ ಸರ್. ನಿಮ್ಮ ಪ್ರೋತ್ಸಾಹದ ಮಾತುಗಳು ಬಹಳಷ್ಟು ಅರ್ಥವನ್ನು ನೀಡುತ್ತವೆ. ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರುತ್ತೇನೆ," ಎಂದು ಪೃಥ್ವಿ ಶಾ ಟ್ವಿಟ್ಟರ್ನಲ್ಲಿ ಉತ್ತರಿಸಿದ್ದಾರೆ.
ಬುಧವಾರದಂದು ತಾನು 400 ರನ್ ಮಾಡಬಹುದಿತ್ತು ಮತ್ತು ಆ ದಿನದಂದು ಅವರು ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ ಎಂದು ಪೃಥ್ವಿ ಶಾ ತಿಳಿಸಿದರು.
"ನನ್ನ ಬ್ಯಾಟಿಂಗ್ ಪ್ರದರ್ಶನ ನೋಡಿ ನಿಜವಾಗಿಯೂ ಸಂತೋಷವಾಗಿದೆ. ನಾನು 400 ರನ್ಗಳಿಗೆ ಪರಿವರ್ತಿಸಬಹುದಿತ್ತು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೆ ಎಂದು ಭಾವಿಸುತ್ತೇನೆ. ಆದರೆ ದೊಡ್ಡ ರನ್ಗಳು ಬರುತ್ತಿಲ್ಲವಾದ್ದರಿಂದ ಅದು ಕೆಟ್ಟ ಸಮಯದಲ್ಲಿ ಔಟಾದೆ. ನಾನು ಮಧ್ಯದಲ್ಲಿ ನನಗೆ ಹೆಚ್ಚಿನ ಸಮಯವನ್ನು ನೀಡಬೇಕೆಂದು ನಾನು ಯೋಚಿಸಿದೆ, ತಾಳ್ಮೆಯನ್ನು ಪ್ರದರ್ಶಿಸಿದೆ," ಎಂದು ಪೃಥ್ವಿ ಶಾ ತಮ್ಮ ಬ್ಯಾಟಿಂಗ್ ಇನ್ನಿಂಗ್ಸ್ ಬಗ್ಗೆ ವಿವರಿಸಿದರು.