2007ರಿಂದ 2016 ರವರೆಗಿನ ಟಿ20 ವಿಶ್ವಕಪ್ಗಳಲ್ಲಿ ಅಜೇಯವಾಗಿತ್ತು
ಭಾರತ ತಂಡವು 2007ರಿಂದ 2016 ರವರೆಗಿನ ಟಿ20 ವಿಶ್ವಕಪ್ಗಳಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯವಾಗಿತ್ತು. ಆದರೆ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ, ಕಳೆದ ವರ್ಷ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿ ತಮ್ಮ ಗೆಲುವಿನ ಖಾತೆಯನ್ನು ತೆರೆದರು.
ಆದಾಗ್ಯೂ, 1983ರ ವಿಶ್ವಕಪ್ ವಿಜೇತ ಭಾರತದ ತಂಡದ ಭಾಗವಾಗಿದ್ದ ರೋಜರ್ ಬಿನ್ನಿ, ಮುಂಬರುವ ಪಂದ್ಯದಲ್ಲಿ ಭಾರತವೇ ಮೆಚ್ಚಿನ ತಂಡವಾಗಿರುತ್ತದೆ ಎಂದು ಎಣಿಸಿದ್ದಾರೆ.
ಪ್ರತಿಯೊಂದು ಪಂದ್ಯದಲ್ಲೂ ಭಾರತ ಮೆಚ್ಚಿನ ತಂಡವಾಗಿರುತ್ತದೆ
"ಭಾರತವು ಇನ್ನು ಮುಂದೆ ಅಂಡರ್ಡಾಗ್ ಟ್ಯಾಗ್ ಅನ್ನು ಹೊಂದಿಲ್ಲ. ಈಗ ಅವರು ಆಡುವ ಪ್ರತಿಯೊಂದು ಪಂದ್ಯದಲ್ಲೂ ಭಾರತ ಮೆಚ್ಚಿನ ತಂಡವಾಗಿರುತ್ತದೆ ಮತ್ತು ಟಿ20 ಪಂದ್ಯದ ಆ ಕ್ಷಣದಲ್ಲಿ ನೀವು ಹೇಗೆ ಆಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ದುಬೈನಲ್ಲಿ ಮತ್ತು ಹಿಂದಿನಂತೆ ಟಾಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಪಿಚ್ಗಳು ಉತ್ತಮವಾಗಿರಲಿವೆ ಮತ್ತು ಅದನ್ನು ವೀಕ್ಷಿಸಲು ಉತ್ತಮ ಆಟವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾನು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಎದುರು ನೋಡುತ್ತಿದ್ದೇನೆ," ಎಂದು ರೋಜರ್ ಬಿನ್ನಿ ಹೇಳಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯೆಷ್ಟೇ ಸೌರವ್ ಗಂಗೂಲಿ ಅವರ ಬದಲಾಗಿ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಅಯ್ಕೆಯಾಗಿದ್ದು, ಆಟಗಾರರು ಒತ್ತಡ ಮತ್ತು ಸಾರ್ವಜನಿಕರಿಂದ ಉಂಟಾಗುವ ಪ್ರಚೋದನೆಯಿಂದ ಗೊಂದಲಕ್ಕೊಳಗಾಗುವುದಿಲ್ಲ ಎಂದು ಹೇಳಿದರು.
ಇನ್ನೊಂದು ಪಂದ್ಯದಂತೆ ಆಡುತ್ತೇವೆ
"ಒಮ್ಮೆ ಆಟಗಾರರು ಮೈದಾನಕ್ಕೆ ಬಂದರೆ, ಯಾವುದೇ ಒತ್ತಡವಿರಲ್ಲ. ನಾವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಇನ್ನೊಂದು ಪಂದ್ಯದಂತೆ ಆಡುತ್ತೇವೆ. ಆಟಗಾರರು ಮೂಲಭೂತವಾಗಿ ಆದೇಶಗಳನ್ನು ಅನುಸರಿಸುತ್ತಾರೆ," ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.
"ಒತ್ತಡವು ಮೈದಾನದ ಹೊರಗೆ ನಿರ್ಮಿಸಲ್ಪಟ್ಟಿದೆ ಮತ್ತು ತಂಡವು ನಿಜವಾಗಿಯೂ ಅದರಿಂದ ಬಳಲುತ್ತಿಲ್ಲ. ಸಾರ್ವಜನಿಕರು ಆಟಗಾರರಿಗಿಂತ ಹೆಚ್ಚು ಉದ್ವಿಗ್ನರಾಗಿರುವುದರಿಂದ ಒತ್ತಡವನ್ನು ನಿರ್ಮಿಸುತ್ತಾರೆ," ಎಂದು ಬಿನ್ನಿ ಅಭಿಪ್ರಾಯಪಟ್ಟರು.
ಭಾರತ ಮತ್ತು ಪಾಕಿಸ್ತಾನ ಇತ್ತೀಚೆಗೆ ಏಷ್ಯಾ ಕಪ್ 2022ರಲ್ಲಿ ಮುಖಾಮುಖಿಯಾಗಿದ್ದವು. ಭಾರತವು ಮೊದಲ ಪಂದ್ಯವನ್ನು ಗೆದ್ದರೆ, ಪಾಕಿಸ್ತಾನವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು ಮತ್ತು ಇದರಿಂದ ಭಾರತ ತಂಡವು ಫೈನಲ್ ತಲುಪಲು ಸಾಧ್ಯವಾಗಲಿಲ್ಲ.