ಟಿ20 ವಿಶ್ವಕಪ್ 2022: ಮುಂದಿನ ಪಂದ್ಯದಲ್ಲಿ ಈವರನ್ನು ಕೈಬಿಡುವುದು ಸರಿಯಲ್ಲ; ಅನಿಲ್ ಕುಂಬ್ಳೆ

2022ರ ಟಿ20 ವಿಶ್ವಕಪ್ನ ಸೂಪರ್ 12ರ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ರೋಚಕ ಹಣಾಹಣಿಯಲ್ಲಿ ಗೆದ್ದು ಬೀಗಿರುವ ಭಾರತ ತಂಡ, ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 27ರ ಗುರುವಾರದಂದು ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಡಲಿದೆ.
ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಡುವಾಗ ಭಾರತ ತಂಡ ತನ್ನ ಬೆಂಚ್ ಸಾಮರ್ಥ್ಯ ಪರೀಕ್ಷೆ ನಡೆಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ಆಡಗಾರರಿಗೆ ಕೋಕ್ ನೀಡಿ, ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಯೋಚನೆ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಇದೇ ವೇಳೆ ನೆದರ್ಲ್ಯಾಂಡ್ಸ್ ವಿರುದ್ಧ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಅಕ್ಟೋಬರ್ 27ರಂದು ನಡೆಯಲಿರುವ ಎರಡನೇ ಸೂಪರ್-12 ಮುಖಾಮುಖಿಯಲ್ಲಿ ಟೀಂ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಹೋರಾಡುತ್ತಿದ್ದು, ಎರಡು ಪ್ರಮುಖ ಅಂಕಗಳ ಜೊತೆಗೆ ರನ್ರೇಟ್ ಉತ್ತಮಗೊಳಿಸಿಕೊಳ್ಳಲು ಎದುರು ನೋಡುತ್ತಿದೆ.

ಅಶ್ವಿನ್ ಅಥವಾ ಅಕ್ಷರ್ ಪಟೇಲ್ ಕೈಬಿಡುವುದು ಅನ್ಯಾಯವಾಗುತ್ತದೆ
ಇಎಸ್ಪಿಎನ್ಕ್ರಿಕ್ಇನ್ಫೋ ಜೊತೆ ಮಾತನಾಡಿದ ಅನಿಲ್ ಕುಂಬ್ಳೆ, ಗಾಯದ ಹೊರತು ರವಿಚಂದ್ರನ್ ಅಶ್ವಿನ್ ಅಥವಾ ಅಕ್ಷರ್ ಪಟೇಲ್ ಅವರನ್ನು ಕೈಬಿಡುವುದು ಅನ್ಯಾಯವಾಗುತ್ತದೆ ಎಂದು ಭಾರತದ ಮಾಜಿ ಲೆಗ್ ಸ್ಪಿನ್ನರ್ ಹೇಳಿದ್ದಾರೆ.
"ಸಿಡ್ನಿಯಲ್ಲಿ ಯಾವುದೇ ಬದಲಾವಣೆ ಆಗುವುದನ್ನು ನಾನು ನೋಡುವುದಿಲ್ಲ. ಇದು ಅಶ್ವಿನ್ ಅಥವಾ ಅಕ್ಷರ್ನಲ್ಲಿ ನ್ಯಾಯಯುತವಾಗಿದೆ ಎಂದು ನಾನು ಭಾವಿಸುವುದಿಲ್ಲ. ಕೈಬಿಡುವುದು ನ್ಯಾಯೋಚಿತ ಎಂದು ನಾನು ಭಾವಿಸುವುದಿಲ್ಲ. ನೀವು ಬದಲಾವಣೆ ಮಾಡಲು ಬಯಸಿದರೆ, ಬಹುಶಃ ಅದು ಚಹಾಲ್ಗೆ ಕರೆತರುತ್ತಿದೆ. ಆದರೆ ನೆದರ್ಲ್ಯಾಂಡ್ಸ್ ವಿರುದ್ಧ ಅದು ನಡೆಯುವುದನ್ನು ನಾನು ನೋಡುತ್ತಿಲ್ಲ," ಎಂದು ಮಾಜಿ ನಾಯಕನೂ ಆಗಿರುವ ಅನಿಲ್ ಕುಂಬ್ಳೆ ತಿಳಿಸಿದರು.

ಕೊನೆಯ ನಾಲ್ಕು ಓವರ್ಗಳಲ್ಲಿ ಕನಿಷ್ಠ ಎರಡು ಓವರ್ ಅರ್ಶ್ದೀಪ್ ಮಾಡಲಿ
ಲೆಜೆಂಡರಿ ಸ್ಪಿನ್ನರ್ ಅವರು ಅರ್ಶ್ದೀಪ್ ಸಿಂಗ್ ಅವರು ಭಾರತಕ್ಕಾಗಿ ಕೊನೆಯ ನಾಲ್ಕರಿಂದ ಕನಿಷ್ಠ ಎರಡು ಓವರ್ಗಳನ್ನು ಬೌಲ್ ಮಾಡುತ್ತಾರೆ ಎಂದು ಹೇಳಿದರು.
"ಡೆತ್ ಬೌಲಿಂಗ್ನ ವಿಷಯದಲ್ಲಿ, ನಾನು ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮೊದಲು ಹೇಳಿದಂತೆ, ನಿಮ್ಮ ಕೊನೆಯ ನಾಲ್ಕು ಓವರ್ಗಳಲ್ಲಿ ಕನಿಷ್ಠ ಎರಡು ಓವರ್ಗಳನ್ನು ಬೌಲ್ ಮಾಡಲು ನಾನು ಅರ್ಶ್ದೀಪ್ನೊಂದಿಗೆ ಹೋಗುತ್ತೇನೆ. ನಂತರ ಮೊಹಮ್ಮದ್ ಶಮಿ ಅಥವಾ ಭುವನೇಶ್ವರ್ ಕುಮಾರ್ಗೆ ತಲಾ ಒಂದೊಂದು ಓವರ್ ನೀಡಬಹುದು," ಎಂದು ಅನಿಲ್ ಕುಂಬ್ಳೆ ಸಲಹೆ ನೀಡಿದರು.
ಹೆಚ್ಚಿನ ಪವರ್ಪ್ಲೇ ಓವರ್ಗಳನ್ನು ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಬೌಲ್ ಮಾಡಬೇಕು ಎಂದು ಅನಿಲ್ ಕುಂಬ್ಳೆ ಇದೇ ವೇಳೆ ತಿಳಿಸಿದರು.

ಪವರ್ಪ್ಲೇನಲ್ಲಿ ಶಮಿ ಮತ್ತು ಭುವನೇಶ್ವರ್ ಬೌಲ್ ಮಾಡಲಿ
"ಪವರ್ಪ್ಲೇನಲ್ಲಿ ಏನಾಗುತ್ತಿದೆ ಎಂಬುದರ ಆಧಾರದ ಮೇಲೆ ಅರ್ಶ್ದೀಪ್ ಒಂದು ಅಥವಾ ಎರಡು ಓವರ್ ಬೌಲ್ ಮಾಡಲಿ. ನಾನು ಶಮಿ ಮತ್ತು ಭುವನೇಶ್ವರ್ ಕುಮಾರ್ ಪವರ್ಪ್ಲೇನಲ್ಲಿ ಹೆಚ್ಚಿನ ಓವರ್ಗಳನ್ನು ಬೌಲ್ ಮಾಡಬೇಕೆಂದು ನಾನು ಬಯಸುತ್ತೇನೆ," ಎಂದು ಕುಂಬ್ಳೆ ಹೇಳಿದರು.
ಪಾಕಿಸ್ತಾನವನ್ನು 4 ವಿಕೆಟ್ಗಳಿಂದ ಸೋಲಿಸಿದ ನಂತರ ಭಾರತ ತಂಡವು ಅಕ್ಟೋಬರ್ 27ರಂದು ನೆದರ್ಲ್ಯಾಂಡ್ಸ್ ಅನ್ನು ಎದುರಿಸಲಿದೆ. ಟೀಮ್ ಇಂಡಿಯಾ ಪ್ರಸ್ತುತ ಸೂಪರ್-12 ಹಂತದ ಗುಂಪು-2 ರಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಉತ್ತಮ ನೆಟ್ ರನ್-ರೇಟ್ ಆಧಾರದ ಮೇಲೆ ಗುಂಪಿನಲ್ಲಿ ಮುನ್ನಡೆ ಸಾಧಿಸಿರುವ ಬಾಂಗ್ಲಾದೇಶಕ್ಕಿಂತ ಮೆನ್ ಇನ್ ಬ್ಲೂ ಹಿಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications