ಅಂತಿಮ ಘೋಷಣೆ ಮಾತ್ರ ಬಾಕಿ?
"ನಾವು ಈಗಾಗಲೇ ಸಿದ್ಧಪಡಿಸಿದ ಸ್ಕ್ವಾಡ್ ಹೊಂದಿದ್ದೇವೆ. ಇನ್ನು ಕೆಲವೇ ಆಟಗಾರರ ಸ್ಥಾನಗಳ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಆ ಬಗ್ಗೆಯೂ ತಂಡದ ಮ್ಯಾನೇಜ್ಮೆಂಟ್ ಈಗಾಗಲೇ ಆಯ್ಕೆಗಾರರ ಜೊತೆಗೆ ಚರ್ಚಿಸಿದೆ. ಅಂತಿಮ ಘೋಷಣೆಯನ್ನು ಮಾತ್ರವೇ ನಾವು ಮಾಡಬೇಕಿದೆ" ಎಂದು ಮೂಲಗಳು ಮಾಹಿತಿ ನೀಡಿದೆ. ಇನ್ನು ಟೀಮ್ ಇಂಡಿಯಾ ಈ ಟಿ20 ವಿಶ್ವಕಪ್ಗಾಗಿ ಕೆಲ ಹೆಚ್ಚುವರಿ ಆಟಗಾರರನ್ನು ಕೂಡ ತಂಡದೊಂದಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಗಾಯ ಹಾಗೂ ಕೊರೊನಾವೈರಸ್ನ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕೆಲ ಪ್ರಮುಖ ಚರ್ಚೆಗಳು ಸಾಧ್ಯತೆ
ಇನ್ನು ಈ ಟಿ20 ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ಕೆಲ ಮಹತ್ವದ ಚರ್ಚೆಗಳನ್ನು ಆಯ್ಕೆಗಾರರು ನಡೆಸಲಿದ್ದಾರೆ. ಕೆಲ ಆಟಗಾರ ಸೇರ್ಪಡೆಯ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಮುಖವಾಗಿ ಹಿರಿಯ ಆಟಗಾರ ಶಿಖರ್ ಧವನ್ಗೆ ಈ ತಂಡದಲ್ಲಿ ಸ್ಥಾನ ನೀಡಬೇಕಾ ಎಂಬುದು ಈ ಮಹತ್ವದ ಚರ್ಚೆಗಳಲ್ಲಿ ಒಂದಾಗಿರಲಿದೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ಕೂಡ ಈ ಚರ್ಚೆಯ ವಿಷಯವಾಗಿರಲಿದೆ.
ಮೀಸಲು ಆಟಗಾರರ ಬಗ್ಗೆ ನಿರ್ಧಾರ
ಇನ್ನು ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಕೈಬೆರಳಿಗೆ ಗಾಯಮಾಡಿಕೊಂಡು ಸರಣಿಯಿಂದ ಹೊರಗುಳಿದಿದ್ದ ವಾಶಿಂಗ್ಟನ್ ಸುಂದರ್ ವಿಚಾರವಾಗಿಯೂ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಸುಂದರ್ ಐಪಿಎಲ್ನಿಂದ ಹೊರಗುಳಿದಿದ್ದು ವಿಶ್ವಕಪ್ಗೆ ಲಭ್ಯವಾಗುವ ಬಗ್ಗೆ ಸ್ಪಷ್ಟತೆಯಿಲ್ಲ. ಇನ್ನು ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಾಹರ್ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕೂಡ ಆಯ್ಕೆಗಾರರಿಗೆ ಸವಾಲಾಗಲಿದೆ. ಇಬ್ಬರು ಕೂಡ ಅದ್ಭುತವಾದ ಫಾರ್ಮ್ನಲ್ಲಿದ್ದು ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿಯೂ ನಿರ್ಣಾಯಕ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇವುಗಳ ಜೊತೆಗೆ ಎಷ್ಟು ಮೀಸಲು ಆಟಗಾರರನ್ನು ತಂಡದೊಂದೊಗೆ ಕರೆದೊಯ್ಯಬೇಕಾಗಬಹುದು ಎಂಬುದು ಕೂಡ ಈ ಚರ್ಚೆಯ ಮುಖ್ಯ ವಿಷಯವಾಗಲಿದೆ.
ಟೀಮ್ ಇಂಡಿಯಾ ಸಂಭಾವ್ಯ ತಂಡ
ಕೆಎಲ್ ರಾಹುಲ್, ರೋಹಿತ್ ಶರ್ಮಾ (ಉಪ ನಾಯಕ), ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಶಿಖರ್ ಧವನ್
ಸಂಭಾವ್ಯ ಮೀಸಲು ಆಟಗಾರರು: ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಪೃಥ್ವಿ ಶಾ, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ