ಮಂಕಡ್ ರನ್ ಔಟ್ ಮಾಡಿದ್ದಕ್ಕೆ ಆಕ್ರೋಶ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಎನ್ ಜಗದೀಶನ್ ಚೆನ್ನೈ ಸೂಪರ್ ಗಿಲ್ಲೀಸ್ ಪರ ಆರಂಭಿಕನಾಗಿ ಕಣಕ್ಕಿಳಿದು 15 ಎಸೆತಗಳಲ್ಲಿ 25 ರನ್ ಕಲೆಹಾಕಿ ಬಾಬಾ ಅಪರಾಜಿತ್ ಓವರ್ನಲ್ಲಿ ಮಂಕಡ್ ರನ್ ಔಟ್ಗೆ ಬಲಿಯಾದರು. ಈ ಸಂದರ್ಭದಲ್ಲಿ ತೀವ್ರ ಬೇಸರಕ್ಕೊಳಗಾದ ಎನ್ ಜಗದೀಶನ್ ಮೈದಾನ ತೊರೆಯುವಾಗ ಅನೇಕ ಬಾರಿ ಮಧ್ಯದ ಬೆರಳನ್ನು ತೋರಿಸುತ್ತಾ ಹೊರನಡೆದರು. ಎನ್ ಜಗದೀಶನ್ ಅವರ ಈ ವರ್ತನೆಗೆ ಕ್ರಿಕೆಟ್ ಪ್ರೇಮಿಗಳು ಕಿಡಿಕಾರಿದರು, ಮಂಕಡ್ ರನ್ ಔಟ್ ನ್ಯಾಯಯುತ ಎಂದು ಘೋಷಣೆಯಾದ ನಂತರವೂ ಎನ್ ಜಗದೀಶನ್ ಈ ರೀತಿ ವರ್ತಿಸುವುದು ತಪ್ಪು ಎಂದು ಜಗದೀಶನ್ ನಡೆಯನ್ನು ಖಂಡಿಸಿದರು.
— Jagadeesan (Jagadeesan_200) June 24, 2022 |
ಕ್ಷಮೆಯಾಚಿಸಿದ ಜಗದೀಶನ್
ಪಂದ್ಯದ ವೇಳೆ ಮಧ್ಯದ ಬೆರಳು ತೋರಿಸಿದ್ದು ನನ್ನ ತಪ್ಪಾಗಿದೆ ಎಂದು ಎನ್ ಜಗದೀಶನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ಆಟಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ನಾನು ಕ್ರೀಡಾಪಟುತ್ವವನ್ನು ಹೆಚ್ಚು ಗೌರವಿಸುತ್ತೇನೆ, ಹೀಗಾಗಿ ನನಗೆ ಮಂಕಡ್ ರನ್ ಔಟ್ನ್ನು ಸಹಿಸಿಕೊಳ್ಳಲು ಆಗಲಿಲ್ಲ ಆದ್ದರಿಂದ ಆ ರೀತಿ ಪ್ರತಿಕ್ರಿಯಿಸಿದೆ, ಈಗ ನನ್ನ ತಪ್ಪಿನ ಅರಿವಾಗಿದೆ ಹಾಗೂ ಅದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದು ಎನ್ ಜಗದೀಶನ್ ಬರೆದುಕೊಂಡಿದ್ದಾರೆ.
ರೋಚಕ ಸೂಪರ್ ಓವರ್
ಇನ್ನು ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಗಿಲ್ಲೀಸ್ 9 ರನ್ ಕಲೆಹಾಕಿ ನೆಲ್ಲೈ ರಾಯಲ್ ಕಿಂಗ್ಸ್ಗೆ 10 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು 5 ಎಸೆತಗಳಲ್ಲಿ ಪೂರೈಸಿದ ನೆಲ್ಲೈ ರಾಯಲ್ ಕಿಂಗ್ಸ್ ಪಂದ್ಯವನ್ನು ಗೆದ್ದು ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿತು.