Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶೂಟರ್ ಮನು ಭಾಕರ್ ನಗದು ಪುರಸ್ಕಾರ ಟ್ವೀಟ್ ವಿವಾದ ತಾರಕಕ್ಕೆ

Manu Bhaker finds support from IOA chief Narinder Batra as Haryana sports minister slams shooter

ಬೆಂಗಳೂರು, ಜನವರಿ 06: ಹರ್ಯಾಣದ ಸರ್ಕಾರದಿಂದ ಸಿಗಬೇಕಿದ್ದ ನಗದು ಪುರಸ್ಕಾರದ ಬಗ್ಗೆ ಶೂಟರ್ ಮನು ಭಾಕರ್ ಅವರು ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ನಗದು ಪುರಸ್ಕಾರಕ್ಕೆ ಸಂಬಂಧಿಸಿದಂತೆ ಹರ್ಯಾಣದ ಕ್ರೀಡಾ ಸಚಿವ ಅನಿಲ್​ವಿಜ್​ಅವರು ಮನು ಅವರಿಂದ ಕ್ಷಮೆಯಾಚಿಸಿದ್ದಾರೆ.

ಬೊನಸ್ ಐರೀಸ್ ನಲ್ಲಿ ನಡೆದ ಯೂತ್​ ಒಲಂಪಿಕ್​ ಗೇಮ್ಸ್​-2018ನ ಶೂಟಿಂಗ್​ನಲ್ಲಿ ಜಯ ಗಳಿಸಿದ್ದ 16 ವರ್ಷದ ಭಾಕರ್​ಗೆ 2 ಕೋಟಿ ನಗದು ಪುರಸ್ಕಾರ ನೀಡುವುದಾಗಿ ಕ್ರೀಡಾ ಸಚಿವರು ಭರವಸೆ ನೀಡಿದ್ದರು. ಈ ಬಗ್ಗೆ ಟ್ವೀಟ್​ ಮಾಡಿದ್ದ ಭಾಕರ್​, ಈ ಭರವಸೆ ಸತ್ಯವೇ? ಅಥವಾ ಸುಳ್ಳೇ ಎಂದು ದಯಮಾಡಿ ತಿಳಿಸಿ ಎಂದು ಟ್ವೀಟ್ ಮಾಡಿದ್ದರು.

ಈ ಹಿಂದಿನ ಸರ್ಕಾರ ಭಾಕರ್​ಗೆ ನೀಡಿದ್ದ 10 ಲಕ್ಷಕ್ಕೆ ಹೆಚ್ಚುವರಿಯಾಗಿ ನಾವು 2 ಕೋಟಿ ನಗದು ಪುರಸ್ಕಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದರು.

ಈ ಟ್ವೀಟ್ ಬಗ್ಗೆ ಕ್ರೀಡಾ ಸಚಿವ ವಿಜ್​ಪ್ರತಿ ಟ್ವೀಟ್ ಮಾಡಿ, ಸಾರ್ವಜನಿಕವಾಗಿ ಹೀಗೆ ಪೋಸ್ಟ್​ ಮಾಡುವ ಮುನ್ನ ಕ್ರೀಡಾ ಇಲಾಖೆಯಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಿತ್ತು. ದೇಶದಲ್ಲಿಯೇ ಅತಿದೊಡ್ಡ ಪುರಸ್ಕಾರ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೀಗೆ ಛೇಡಿಸುವುದು ಸರಿಯಲ್ಲ. ಆಗಿನ ಅಧಿಸೂಚನೆ ಹಾಗೂ ನಾನೇ ಮಾಡಿದ್ದ ಟ್ವೀಟ್​ನಂತೆ ಭಾಕರ್ 2 ಕೋಟಿ ಪಡೆಯಲಿದ್ದಾರೆ ಎಂದಿದ್ದಾರೆ.

'ಆಟಗಾರರಿಗೆ ಶಿಸ್ತು ಇರಬೇಕು. ಭಾಕರ್​ ಇನ್ನೂ ತುಂಬಾ ಸಾಧನೆ ಮಾಡುವುದಿದೆ. ಆಟದತ್ತ ಹೆಚ್ಚು ಗಮನ ಕೊಡಲಿ. ಈಗ ಉಂಟುಮಾಡಿರುವ ವಿವಾದಕ್ಕೆ ಆಕೆ ಕ್ಷಮೆಯಾಚಿಸಬೇಕು' ಎಂದು ಅನಿಲ್​ ವಿಜ್ ಆಗ್ರಹಿಸಿದ್ದಾರೆ.

ಹರ್ಯಾಣದ ಮುಖ್ಯಮಂತ್ರಿ ಮನೋಹರ್​ಲಾಲ್​ ಕಟ್ಟರ್​ ಸಹ ಈ ವಿವಾದಲ್ಲಿ ಮಧ್ಯೆಪ್ರವೇಶಿಸಿ ಭಾಕರ್​ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲಾಖೆ ನೀತಿಯಂತೆ ಭಾಕರ್ ನಗದು ಪುರಸ್ಕಾರ ಪಡೆಯಲಿದ್ದಾರೆ. ಆದರೆ ಈ ರೀತಿ ಟ್ವೀಟ್​ ಮಾಡುವುದು ಸರಿಯಲ್ಲ ಎಂದಿದ್ದಾರೆ.

Story first published: Sunday, January 6, 2019, 14:40 [IST]
Other articles published on Jan 6, 2019
Read in English: IOA chief back Manu Bhaker
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+