For Quick Alerts
ALLOW NOTIFICATIONS  
For Daily Alerts

ಶೂಟರ್ ಮನು ಭಾಕರ್ ನಗದು ಪುರಸ್ಕಾರ ಟ್ವೀಟ್ ವಿವಾದ ತಾರಕಕ್ಕೆ

Manu Bhaker finds support from IOA chief Narinder Batra as Haryana sports minister slams shooter

ಬೆಂಗಳೂರು, ಜನವರಿ 06: ಹರ್ಯಾಣದ ಸರ್ಕಾರದಿಂದ ಸಿಗಬೇಕಿದ್ದ ನಗದು ಪುರಸ್ಕಾರದ ಬಗ್ಗೆ ಶೂಟರ್ ಮನು ಭಾಕರ್ ಅವರು ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ನಗದು ಪುರಸ್ಕಾರಕ್ಕೆ ಸಂಬಂಧಿಸಿದಂತೆ ಹರ್ಯಾಣದ ಕ್ರೀಡಾ ಸಚಿವ ಅನಿಲ್​ವಿಜ್​ಅವರು ಮನು ಅವರಿಂದ ಕ್ಷಮೆಯಾಚಿಸಿದ್ದಾರೆ.

ಬೊನಸ್ ಐರೀಸ್ ನಲ್ಲಿ ನಡೆದ ಯೂತ್​ ಒಲಂಪಿಕ್​ ಗೇಮ್ಸ್​-2018ನ ಶೂಟಿಂಗ್​ನಲ್ಲಿ ಜಯ ಗಳಿಸಿದ್ದ 16 ವರ್ಷದ ಭಾಕರ್​ಗೆ 2 ಕೋಟಿ ನಗದು ಪುರಸ್ಕಾರ ನೀಡುವುದಾಗಿ ಕ್ರೀಡಾ ಸಚಿವರು ಭರವಸೆ ನೀಡಿದ್ದರು. ಈ ಬಗ್ಗೆ ಟ್ವೀಟ್​ ಮಾಡಿದ್ದ ಭಾಕರ್​, ಈ ಭರವಸೆ ಸತ್ಯವೇ? ಅಥವಾ ಸುಳ್ಳೇ ಎಂದು ದಯಮಾಡಿ ತಿಳಿಸಿ ಎಂದು ಟ್ವೀಟ್ ಮಾಡಿದ್ದರು.

ಈ ಹಿಂದಿನ ಸರ್ಕಾರ ಭಾಕರ್​ಗೆ ನೀಡಿದ್ದ 10 ಲಕ್ಷಕ್ಕೆ ಹೆಚ್ಚುವರಿಯಾಗಿ ನಾವು 2 ಕೋಟಿ ನಗದು ಪುರಸ್ಕಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದರು.

ಈ ಟ್ವೀಟ್ ಬಗ್ಗೆ ಕ್ರೀಡಾ ಸಚಿವ ವಿಜ್​ಪ್ರತಿ ಟ್ವೀಟ್ ಮಾಡಿ, ಸಾರ್ವಜನಿಕವಾಗಿ ಹೀಗೆ ಪೋಸ್ಟ್​ ಮಾಡುವ ಮುನ್ನ ಕ್ರೀಡಾ ಇಲಾಖೆಯಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಿತ್ತು. ದೇಶದಲ್ಲಿಯೇ ಅತಿದೊಡ್ಡ ಪುರಸ್ಕಾರ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೀಗೆ ಛೇಡಿಸುವುದು ಸರಿಯಲ್ಲ. ಆಗಿನ ಅಧಿಸೂಚನೆ ಹಾಗೂ ನಾನೇ ಮಾಡಿದ್ದ ಟ್ವೀಟ್​ನಂತೆ ಭಾಕರ್ 2 ಕೋಟಿ ಪಡೆಯಲಿದ್ದಾರೆ ಎಂದಿದ್ದಾರೆ.

'ಆಟಗಾರರಿಗೆ ಶಿಸ್ತು ಇರಬೇಕು. ಭಾಕರ್​ ಇನ್ನೂ ತುಂಬಾ ಸಾಧನೆ ಮಾಡುವುದಿದೆ. ಆಟದತ್ತ ಹೆಚ್ಚು ಗಮನ ಕೊಡಲಿ. ಈಗ ಉಂಟುಮಾಡಿರುವ ವಿವಾದಕ್ಕೆ ಆಕೆ ಕ್ಷಮೆಯಾಚಿಸಬೇಕು' ಎಂದು ಅನಿಲ್​ ವಿಜ್ ಆಗ್ರಹಿಸಿದ್ದಾರೆ.

ಹರ್ಯಾಣದ ಮುಖ್ಯಮಂತ್ರಿ ಮನೋಹರ್​ಲಾಲ್​ ಕಟ್ಟರ್​ ಸಹ ಈ ವಿವಾದಲ್ಲಿ ಮಧ್ಯೆಪ್ರವೇಶಿಸಿ ಭಾಕರ್​ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲಾಖೆ ನೀತಿಯಂತೆ ಭಾಕರ್ ನಗದು ಪುರಸ್ಕಾರ ಪಡೆಯಲಿದ್ದಾರೆ. ಆದರೆ ಈ ರೀತಿ ಟ್ವೀಟ್​ ಮಾಡುವುದು ಸರಿಯಲ್ಲ ಎಂದಿದ್ದಾರೆ.

Story first published: Sunday, January 6, 2019, 14:40 [IST]
Other articles published on Jan 6, 2019
Read in English: IOA chief back Manu Bhaker
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+