ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2022 ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆಯಲ್ಲಿ ಟೀಂ ಇಂಡಿಯಾ ಆಟಗಾರರ ಗೌರವಪೂರ್ವ ನಡವಳಿಕೆ ಕುರಿತು ಪಾಕ್ ನಾಯಕ ಬಾಬರ್ ಅಜಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಪರ ಪ್ರೈಮ್ ಬೌಲರ್ ಜಸ್ಪ್ರೀತ್ ಬುಮ್ರಾ ಇಂಜ್ಯುರಿಯಿಂದಾಗಿ ತಂಡದಿಂದ ಹೊರಬಿದ್ರೆ, ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಅವಕಾಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಶಾಹೀನ್ ಅಫ್ರಿದಿ ಪಾಕ್ ತಂಡದೊಂದಿಗೆ ದುಬೈಗೆ ತೆರಳಿರುವುದು ಅನೇಕ ಚರ್ಚೆಗೆ ಕಾರಣವಾಗಿತ್ತು. ಇದ್ರ ಬೆನ್ನಲ್ಲೇ ಶಾಹೀನ್ ಅಫ್ರಿದಿ ಅಭ್ಯಾಸದ ವೇಳೆಯಲ್ಲಿ ಮೈದಾನದಲ್ಲಿ ಕಾಣಿಸಿಕೊಂಡ ಬಳಿಕ ಟೀಂ ಇಂಡಿಯಾ ಆಟಗಾರರು ಯುವ ಸ್ಟಾರ್ ಬೌಲರ್ ಅನ್ನು ಮಾತನಾಡಿಸಿದ್ದು ಯೋಗಕ್ಷೇಮ ವಿಚಾರಿಸಿದ್ದಾರೆ.
100ನೇ T20I ಪಂದ್ಯವನ್ನಾಡಿದ ಕೊಹ್ಲಿ: ರೋಹಿತ್, ರಾಹುಲ್, ಪಾಂಡ್ಯ, ಪಂತ್ ಪ್ರತಿಕ್ರಿಯೆ
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಯುಜ್ವೇಂದ್ರ ಚಹಾಲ್ ಮತ್ತು ರಿಷಬ್ ಪಂತ್ ಅವರು ಶಾಹೀನ್ ಗಾಯದ ಬಗ್ಗೆ ಪರಿಶೀಲಿಸಲು ಭೇಟಿಯಾದಾಗ ಒಂದು ಹೃದಯಸ್ಪರ್ಶಿ ಘಟನೆ ಗುರುವಾರ ನಡೆಯಿತು. ಶಾಹೀನ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೂ ಟೀಂ ಇಂಡಿಯಾ ಆಟಗಾರರು ಕಾಳಜಿ ತೋರಿಸಿ ಮಾತನಾಡಿಸಿರುವುದು ಹೃದಯ ತಟ್ಟಿದೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೊಗಳಿದ್ದಾರೆ.
"ಗುರುವಾರದ ತರಬೇತಿ ಅವಧಿಯಲ್ಲಿ ಅವರು(ಟೀಂ ಇಂಡಿಯಾ ಆಟಗಾರರು) ಶಾಹೀನ್ ಶಾ ಆಫ್ರಿದಿಯನ್ನು ಭೇಟಿಯಾದ ರೀತಿ ಮತ್ತು ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ರೀತಿಯಿಂದ ನಾನು ನಿಜವಾಗಿಯೂ ಸ್ಪರ್ಶಿಸಿದ್ದೇನೆ. ಆಟಗಾರರು ಪರಸ್ಪರ ಸಂವಹನ ನಡೆಸುವ ದೃಶ್ಯಗಳು ಸಹ ಹೃದಯಸ್ಪರ್ಶಿಯಾಗಿದ್ದವು ಮತ್ತು ಅವರು ನೀಡುವ ಗೌರವ ಮತ್ತು ಸ್ನೇಹವನ್ನು ಪ್ರತಿಬಿಂಬಿಸುತ್ತವೆ. ಆದರೆ ಪಂದ್ಯದ ದಿನದಂದು, ಎಲ್ಲವನ್ನೂ ಪಕ್ಕಕ್ಕೆ ಇಡಲಾಗುತ್ತದೆ ಮತ್ತು ಎರಡೂ ಕಡೆಯ ಆಟಗಾರರು ಪರಸ್ಪರರನ್ನು ಸೋಲಿಸುವ ಪ್ರಯತ್ನದಲ್ಲಿ ಪರಸ್ಪರ ಕಠಿಣವಾಗಿ ಬರುತ್ತಾರೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಪ್ರಕಟಣೆಯಲ್ಲಿ ಬಾಬರ್ ಹೇಳಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 8-5 ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ. 2010 ರಿಂದ, ಉಭಯ ತಂಡಗಳ ನಡುವಿನ ಆರು ಏಷ್ಯಾ ಕಪ್ ಮುಖಾಮುಖಿಯಲ್ಲಿ ಭಾರತವು ಐದರಲ್ಲಿ ಗೆದ್ದಿದೆ. ಆದರೆ, ಕಳೆದ 12 ತಿಂಗಳ ಅವಧಿಯಲ್ಲಿ ಭಾರತ 29 ಪಂದ್ಯಗಳನ್ನು ಆಡಿದ್ದು 22ರಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 13 ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಸೋತಿದೆ.
ಆಗಸ್ಟ್ 20ರಂದು ಶನಿವಾರ ಪಿಸಿಬಿ ಪ್ರಕಟಣೆ ಹೊರಡಿಸಿದ್ದು, ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊಣಕಾಲಿನ ಗಾಯದಿಂದಾಗಿ ಶಾಹೀನ್ ಅಫ್ರಿದಿ ಮುಂಬರುವ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ತಿಳಿಸಲಾಗಿತ್ತು. ಜೊತೆಗೆ 4-6 ವಾರಗಳ ಕಾಲ ವಿಶ್ರಾಂತಿ ಬೇಕಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ಪಿಸಿಬಿ ತಿಳಿಸಿತು.