
ಚಹಾಲ್ ಬೌಲಿಂಗ್ನಲ್ಲೇ ಔಟ್ ಆಗಿದ್ದ ಗ್ರೀನ್
ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20 ಪಂದ್ಯದಲ್ಲಿ 209 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆಯಿತು. ಕ್ಯಾಮರೂನ್ ಗ್ರೀನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರೆ, ಫಿಂಚ್ ಕೂಡ ಉತ್ತಮ ಸಾಥ್ ನೀಡಿದರು.
ವಿಕೆಟ್ ಪಡೆಯುವ ದೃಷ್ಟಿಯಿಂದ ನಾಯಕ ರೋಹಿತ್ ಶರ್ಮಾ 5ನೇ ಓವರ್ ಅನ್ನು ಯುಜ್ವೇಂದ್ರ ಚಹಾಲ್ಗೆ ನೀಡಿದರು. ಚಹಾಲ್ ಎಸೆತವು ಕ್ಯಾಮರೂನ್ ಗ್ರೀನ್ ಪ್ಯಾಟ್ಗೆ ಹೊಡೆದಿತ್ತು, ಆದರೆ ಟೀಂ ಇಂಡಿಯಾ ಆಟಗಾರರು ಎಲ್ಬಿಡಬ್ಲ್ಯೂ ಔಟ್ಗಾಗಿ ಮನವಿ ಮಾಡಲಿಲ್ಲ. ಒಂದು ವೇಳೆ ಟೀಂ ಇಂಡಿಯಾ ಆಟಗಾರರು ಮನವಿ ಸಲ್ಲಿಸಿದ್ದರೆ ಗ್ರೀನ್ 5ನೇ ಓವರ್ ನಲ್ಲೇ ಔಟ್ ಆಗಿರುತ್ತಿದ್ದರು, ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು.
ಈ ಭಾರತೀಯ ಕ್ರಿಕೆಟಿಗನ ಬೆಳವಣಿಗೆ ಅಮೋಘ: ಆಸಿಸ್ ದಿಗ್ಗಜ ಹೊಗಳಿದ್ದು ಯಾರನ್ನು ಗೊತ್ತಾ?

ರಿವ್ಯೂ ತೆಗೆದುಕೊಳ್ಳದ ಟೀಂ ಇಂಡಿಯಾ
ಚಹಾಲ್ ಬೌಲಿಂಗ್ನಲ್ಲಿ ಕ್ಯಾಮರೂನ್ ಗ್ರೀನ್ ಸ್ವೀಪ್ ಮಾಡಲು ಬಯಸಿದ್ದರು, ಆದರೆ ಬ್ಯಾಟ್ನಿಂದ ತಪ್ಪಿಸಕೊಂಡ ಚೆಂಡು ನೇರವಾಗಿ ಪ್ಯಾಡ್ಗೆ ಬಡಿಯಿತು. ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಬೌಲರ್ ಯುಜ್ವೇಂದ್ರ ಚಹಾಲ್ ಬಲವಾಗಿ ಅಂಪೈರ್ ಬಳಿ ಮನವಿ ಮಾಡಲಿಲ್ಲ.
ಆದರೆ, ಬಾಲ್ ಟ್ಯ್ರಾಕಿಂಗ್ನಲ್ಲಿ ಗ್ರೀನ್ ಎಲ್ಬಿಡಬ್ಲ್ಯೂ ಔಟಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಆಡುವಾಗ ಈ ರೀತಿಯ ಅವಕಾಶಗಳನ್ನು ಕಳೆದುಕೊಳ್ಳುವುದು ಪಂದ್ಯವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ರಿವ್ಯೂ ತೆಗೆದುಕೊಂಡಿದ್ದರೆ ಭಾರತಕ್ಕೆ ಗೆಲುವು ಸಾಧಿಸುವ ಅವಕಾಶ ಹೆಚ್ಚಿತ್ತು. ಜೀವದಾನ ಪಡೆದ ಗ್ರೀನ್ 30 ಎಸೆತಗಳಲ್ಲಿ 61 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

ಅಚ್ಚರಿ ವ್ಯಕ್ತಪಡಿಸಿದ ರವಿಶಾಸ್ತ್ರಿ, ಗವಾಸ್ಕರ್
ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ, ಗವಾಸ್ಕರ್ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. "ಹಿಂದಿನ ಓವರ್, ನೇರ ಎಸೆತದಲ್ಲಿ ನಡೆದದ್ದು ಇದೇ, ಗ್ರೀನ್ ಸ್ವೀಪ್ ಮಾಡಲು ಹೋದರು. ಭಾರತ ರಿವ್ಯೂ ಮಾಡಲಿಲ್ಲ. ಚೆಂಡು ಸ್ಟಂಪ್ಗೆ ಹೊಡೆಯುತ್ತಿತ್ತು," ಸುನಿಲ್ ಗವಾಸ್ಕರ್ ಹೇಳಿದರು.
ನಂತರ, ರವಿಶಾಸ್ತ್ರಿ ಉತ್ತರಿಸಿ, "ಮತ್ತು ಹಿಟ್ ಮಾಡುವುದು ಚೆನ್ನಾಗಿ ಮತ್ತು ಕ್ಲೀನ್ ಆಗಿದೆ. ಅಡ್ಡಲಾಗಿ ಹೊಡೆದಿರುವುದು ಆಶ್ಚರ್ಯಕರವಾಗಿದೆ. ಇದು ಎತ್ತರವಾಗಿದೆಯೇ ಅಥವಾ ರೇಖೆಯ ಹೊರಗೆ ಹೊಡೆದಿದೆಯೇ ಎಂದು ಆಶ್ಚರ್ಯ ಪಡುತ್ತೇನೆ."
ನಂತರ ಮತ್ತೊಬ್ಬ ಮಾಜಿ ಆಟಗಾರ ಮುರಳಿ ಕಾರ್ತಿಕ್ ಕೂಡ ಈ ಬಗ್ಗೆ ಕಮೆಂಟ್ ಮಾಡಿದರು. "ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್, ಚಹಾಲ್ ಮತ್ತು ರೋಹಿತ್ ಶರ್ಮಾ ಎಲ್ಲರೂ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಆದರೆ ಒಬ್ಬರೂ ಕೂಡ ಮೇಲ್ಮನವಿ ಸಲ್ಲಿಸಲಿಲ್ಲ" ಎಂದು ಅವರು ಹೇಳಿದರು. ನಾವು ತಕ್ಷಣ ಮಾಡಬಹುದೆಂದು ನಾನು ಬಯಸುತ್ತೇನೆ," ಅವರು ಹೇಳಿದರು.

ಈ ಸಮಯದಲ್ಲಿ ಧೋನಿ ಇರಬೇಕಿತ್ತು
ನಂತರ ಮಾತು ಮುಂದುವರೆಸಿದ ರವಿಶಾಸ್ತ್ರಿ ಈ ರೀತಿಯ ಸಂದರ್ಭಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಇಂತಹ ಸಂದರ್ಭಗಳಲ್ಲಿ ವಿಕೆಟ್ ಕೀಪರ್ ಪಾತ್ರ ತುಂಬಾ ಮುಖ್ಯವಾಗುತ್ತದೆ, ಈ ಪರಿಸ್ಥಿತಿಯಲ್ಲಿ ಆತ ಅತ್ಯುತ್ತಮ ಕೀಪರ್ ಆಗಿದ್ದ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಈ ಪರಿಸ್ಥಿತಿಯಲ್ಲಿ ಧೋನಿ ಇದ್ದಿದ್ದರೆ ಖಂಡಿತವಾಗಿಯೂ ರಿವ್ಯೂ ತೆಗೆದುಕೊಳ್ಳುತ್ತಿದ್ದರು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ-ಭಾರತ ನಡುವಣ ಸರಣಿಯ ಎರಡನೇ ಟಿ20 ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.


Click it and Unblock the Notifications