
ವೈಟ್ ಬಾಲ್ ಕ್ರಿಕೆಟ್ನಲ್ಲಿ ಅತ್ಯಂತ ಭರವಸೆಯ ಬ್ಯಾಟರ್ಗಳಲ್ಲಿ ಒಬ್ಬರಾದ ಸಂಜು ಸ್ಯಾಮ್ಸನ್ ಯಾವುದೇ ಸ್ವರೂಪದಲ್ಲಿಯೂ ಭಾರತ ತಂಡದ ಪರ ಸತತವಾಗಿ ಆಡಲು ಸಾಧ್ಯವಾಗಿಲ್ಲ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಸಂಜು ಸ್ಯಾಮ್ಸನ್ ಭಾರತ ತಂಡದ ಭಾಗವಾಗಿದ್ದರು. ಆದರೆ ಗಾಯದಿಂದಾಗಿ ಅವರನ್ನು ಹೊರಗಿಡಲಾಯಿತು.
ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯ ಕೇರಳದ ತಿರುವನಂತಪುರಂನಲ್ಲಿ ನಡೆಯುತ್ತಿರುವಾಗ ಸಂಜು ಸ್ಯಾಮ್ಸನ್ ಅವರ ತವರು ಅಭಿಮಾನಿಗಳು ಭಾರತದ ಇನ್ನೊಬ್ಬ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಸಂವಾದ ನಡೆಸಿದರು.
ಮೂರನೇ ಪಂದ್ಯದ ವೇಳೆ ಅಭಿಮಾಗಳು 'ನಮ್ಮ ಸಂಜು ಸ್ಯಾಮ್ಸನ್ ಎಲ್ಲಿ?' ಎಂದು ಕೇಳಿದರು. ಆಗ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಂದ ಬಂದ ಪ್ರತಿಕ್ರಿಯೆ ಖಂಡಿತವಾಗಿಯೂ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
ಸೂರ್ಯಕುಮಾರ್ ಯಾದವ್ ಅವರು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ, ಅವರೊಂದಿಗೆ ಸಂವಹನ ನಡೆಸಲು ಅಭಿಮಾನಿಗಳು ಅವಕಾಶ ಪಡೆದರು.
'ಹಮಾರಾ ಸಂಜು ಕಿದರ್ ಹೈ (ನಮ್ಮ ಸಂಜು ಎಲ್ಲಿದ್ದಾನೆ)?' ಎಂದು ಅಭಿಮಾನಿಯೊಬ್ಬರು ಕೇಳುವುದು ಕೇಳಿಸಿತು. ಆ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ತನ್ನ ಹೃದಯದ ಕಡೆಗೆ ಬೊಟ್ಟು ಮಾಡಿ, ಹೃದಯದಲ್ಲಿದ್ದಾನೆ ಎನ್ನುವ ಸಂದೇಶ ನೀಡಿದರು. ಅದು ಅಭಿಮಾನಿಗಳ ಮನ ಗೆಲ್ಲುವಂತೆ ಇತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ, ಆಕ್ರಮಣಕಾರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ 4 ಎಸೆತಗಳಲ್ಲಿ 4 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ನಂತರ ಭಾರತ ತಂಡವು ವಿರಾಟ್ ಕೊಹ್ಲಿ ಅಜೇಯ 166 ರನ್ ನೆರವಿನಿಂದ ಸ್ಕೋರ್ ಬೋರ್ಡ್ನಲ್ಲಿ 5 ವಿಕೆಟ್ಗೆ 390 ರನ್ ಕಲೆಹಾಕಿತು. 46ನೇ ಏಕದಿನ ಶತಕ ಮತ್ತು ಅಂತಾರಾಷ್ಟ್ರೀಯ ಎಲ್ಲಾ ಸ್ವರೂಪಗಳಲ್ಲಿ 74ನೇ ಶತಕವಾಗಿದೆ.
ವಿರಾಟ್ ಕೊಹ್ಲಿ ತಮ್ಮ 46ನೇ ಏಕದಿನ ಶತಕ ಮತ್ತು ಅಂತಾರಾಷ್ಟ್ರೀಯ ಎಲ್ಲಾ ಸ್ವರೂಪಗಳಲ್ಲಿ 74ನೇ ಶತಕವಾಗಿದೆ. ನಂತರ ಬಿಗಿ ಬೌಲಿಂಗ್ ನಡೆಸಿದ ಭಾರತ ತಂಡ ಶ್ರೀಲಂಕಾ ವಿರುದ್ಧ 317 ರನ್ಗಳಿಂದ ವಿಶ್ವದಾಖಲೆಯ ಏಕದಿನ ಗೆಲುವು ಸಾಧಿಸಿತು.