ಟಿ20 ವಿಶ್ವಕಪ್ ಅನ್ನು ನಾವು ಬಹಿಷ್ಕರಿಸುತ್ತೇವೆ
ಭಾರತ, ಏಷ್ಯಾ ಕಪ್ ನಲ್ಲಿ ಭಾಗವಹಿಸದೇ ಇದ್ದರೆ, ನಾವೇನೂ ಪ್ರತಿರೋಧ ತೋರದೇ ಇರುವುದಿಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಟೂರ್ನಮೆಂಟ್ ಅನ್ನು ನಾವು ಬಹಿಷ್ಕರಿಸುತ್ತೇವೆ" ಎಂದು ಪಿಸಿಬಿ ಸಿಇಒ ವಾಸೀಂ ಖಾನ್ ಎಚ್ಚರಿಕೆಯನ್ನು ನೀಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ
ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ ಎಷ್ಟು ಪ್ರಭಾವಶಾಲಿಯಾದ ಸಂಸ್ಥೆ ಎನ್ನುವುದು ಗೊತ್ತಿರುವ ವಿಚಾರ. ಪಿಸಿಬಿ ಹಾಕಿದ ಬೆದರಿಕೆಯನ್ನು ಬಿಸಿಸಿಐ ಕ್ಯಾರ್ ಮಾಡುತ್ತಾ ಎನ್ನುವುದಿಲ್ಲಿ ಪ್ರಶ್ನೆ. ಮುಂದಿನ ವರ್ಷದ ಟೂರ್ನಮೆಂಟ್ ನಲ್ಲಿ ಭಾಗವಹಿಸದೇ ಇದ್ದರೆ ನಷ್ಟ ಯಾರಿಗೆ?
ನಮ್ಮ ತಂಡ ಪಾಕಿಸ್ತಾನದ ನೆಲದಲ್ಲಿ ಆಡುವುದಿಲ್ಲ
"ಪಾಕಿಸ್ತಾನ, ಏಷ್ಯಾ ಕಪ್ ಅನ್ನು ಆಯೋಜಿಸುವುದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ನಮ್ಮ ತಂಡ ಪಾಕಿಸ್ತಾನದ ನೆಲದಲ್ಲಿ ಆಡುವುದಿಲ್ಲ" ಎಂದು ಕಡ್ಡಿಮುರಿದಂತೆ ಹೇಳಿರುವ ಬಿಸಿಸಿಐ, "ತಟಸ್ಥ ಮೈದಾನದಲ್ಲಿ ಭಾರತ - ಪಾಕ್ ಪಂದ್ಯ ಆಡುವ ವಿಚಾರದಲ್ಲಿ ನಾವು ಮುಕ್ತರಾಗಿದ್ದೇವೆ" ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್
"ಭಾರತವಿಲ್ಲದೇ ಏಷ್ಯಾ ಕಪ್ ನಡೆಸಬಹುದು ಎನ್ನುವ ನಿರ್ಧಾರಕ್ಕೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಂದರೆ, ಆವಾಗ ಮುಂದಿನದ್ದನ್ನು ನೋಡಿಕೊಳ್ಳೋಣ. ನಾವಂತೂ ಅಲ್ಲಿ ಆಡುವುದಿಲ್ಲ" ಎಂದು ಬಿಸಿಸಿಐ ಖಡಕ್ ಆಗಿ ಹೇಳಿದೆ. ಕೆಲವು ಮೂಲಗಳ ಪ್ರಕಾರ, ಐಸಿಸಿ, ಏಷ್ಯಾ ಕಪ್ ಆಯೋಜಿಸಲು ಪಾಕಿಸ್ತಾನಕ್ಕೆ ನೀಡಿದ್ದ ಪ್ರಾಯೋಜತ್ವವನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಯಿಲ್ಲದಿಲ್ಲ.