ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿಯಲಿದ್ದಾರೆ ಸಚಿನ್, ಸೆಹ್ವಾಗ್; ಎಲ್ಲಿ? ಯಾವಾಗ?

ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನ (RSWS) ಎರಡನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಯೋಜಕರು ಗುರುವಾರ (ಸೆಪ್ಟೆಂಬರ್ 1) ಘೋಷಿಸಿದ್ದಾರೆ. ಸೆಪ್ಟೆಂಬರ್ 10ರಂದು ಪ್ರಾರಂಭವಾಗುವ 22 ದಿನಗಳ ಪಂದ್ಯಾವಳಿಯನ್ನು ವಿವಿಧ ಸ್ಥಳಗಳಲ್ಲಿ ಆಡಲಾಗುತ್ತದೆ.
ಪಂದ್ಯಾವಳಿಯ ಆರಂಭಿಕ ಪಂದ್ಯವು ಕಾನ್ಪುರದಲ್ಲಿ ನಡೆಯಲಿದ್ದು, ರಾಯ್ಪುರವು ಎರಡು ಸೆಮಿಫೈನಲ್ಗಳು ಮತ್ತು ಫೈನಲ್ಗೆ ಆತಿಥ್ಯ ವಹಿಸಲಿದೆ. ಫೈನಲ್ ಅಕ್ಟೋಬರ್ 1ರಂದು ನಡೆಯಲಿದೆ. ಇತರ ಸ್ಥಳಗಳಲ್ಲಿ ಇಂದೋರ್ ಮತ್ತು ಡೆಹ್ರಾಡೂನ್ ಸೇರಿವೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.
ನ್ಯೂಜಿಲೆಂಡ್ ಲೆಜೆಂಡ್ಸ್ ಈ ಆವೃತ್ತಿಯಲ್ಲಿ ಹೊಸದಾಗಿ ಪ್ರವೇಶಿಸಿಸಲಿದ್ದಾರೆ ಮತ್ತು ಅವರು ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ನ ಲೆಜೆಂಡ್ಸ್ಗಳನ್ನು ಸೇರಿಕೊಳ್ಳುತ್ತಾರೆ. ಮುಖ್ಯವಾಗಿ ದೇಶ ಮತ್ತು ಜಗತ್ತಿನಾದ್ಯಂತ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಟೂರ್ನಿಯಲ್ಲಿ ಆಡಲಾಗುತ್ತದೆ.

ನವೆಂಬರ್ 16, 2013 ರಂದು ಕ್ರಿಕೆಟ್ನಿಂದ ನಿವೃತ್ತರಾದ ಸಚಿನ್
RSWS ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಭಾರತ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ಸಚಿವಾಲಯವು ಬೆಂಬಲಿಸುತ್ತದೆ. ಸಚಿನ್ ತೆಂಡೂಲ್ಕರ್ 8 ವರ್ಷಗಳ ಹಿಂದೆ ನವೆಂಬರ್ 16, 2013 ರಂದು ಕ್ರಿಕೆಟ್ನಿಂದ ನಿವೃತ್ತರಾದರು.
ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿ ಒಟ್ಟು 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.

ಲೆಜೆಂಡ್ ಕ್ರಿಕೆಟಿಗರನ್ನು ಅನೇಕರು ಆರಾಧ್ಯ ದೈವವಾಗಿ ನೋಡುತ್ತಾರೆ
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, "ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಸಾಮಾಜಿಕ ಬದಲಾವಣೆಗೆ ಚಾಲನೆ ನೀಡುತ್ತದೆ ಮತ್ತು ರಸ್ತೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜನರ ಮನಸ್ಥಿತಿಯನ್ನು ಪ್ರಭಾವಿಸಲು ಆದರ್ಶ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ," ಎಂದು ಹೇಳಿದರು.
ದೇಶದಲ್ಲಿ ಸಾಮಾಜಿಕ ಬದಲಾವಣೆಯನ್ನು ತರುವುದು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸುವುದು ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನ (RSWS) ಗುರಿಯಾಗಿದೆ. ದೇಶದಲ್ಲಿ ಕ್ರಿಕೆಟ್ ಅನ್ನು ಹೆಚ್ಚು ಅನುಸರಿಸುವ ಕ್ರೀಡೆಯಾಗಿರುವುದರಿಂದ ಮತ್ತು ಲೆಜೆಂಡ್ ಕ್ರಿಕೆಟಿಗರನ್ನು ಅನೇಕರು ಆರಾಧ್ಯ ದೈವವಾಗಿ ನೋಡುತ್ತಾರೆ. ರಸ್ತೆಗಳಲ್ಲಿ ಅವರ ನಡವಳಿಕೆಯ ಬಗ್ಗೆ ಜನರ ಮನಸ್ಸನ್ನು ಪ್ರಭಾವಿಸಲು ಮತ್ತು ಬದಲಾಯಿಸಲು ಲೀಗ್ ಆದರ್ಶ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಕ್ರಿಕೆಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಾತನಾಡಿ, "ರಸ್ತೆ ಸುರಕ್ಷತೆ ವಿಶ್ವ ಸರಣಿಯು ಕ್ರಿಕೆಟ್ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಉತ್ತಮ ಉಪಕ್ರಮವಾಗಿದೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಜಾಗೃತರಾಗಿರಬೇಕು ಮತ್ತು ರಸ್ತೆಯಲ್ಲಿರುವಾಗ ಪ್ರತಿಯೊಂದು ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕೆಂದು ನಾವು ಬಯಸುತ್ತೇವೆ. ಅದು ಸಂಭವಿಸಬೇಕಾದರೆ, ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು, ಈ ಸರಣಿಯು ಭಾರತೀಯ ರಸ್ತೆಗಳಲ್ಲಿ ಜೀವ ಉಳಿಸುವ ಬಗೆಗಿನ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ," ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications