ತಮಗಾದ ಅನುಭವ ಬಿಚ್ಚಿಟ್ಟ ಸುಧೀರ್
ಪಂದ್ಯ ಮುಗಿದ ಮೇಲೆ ಸ್ಟೇಡಿಯಂನಿಂದ ಹೊರಕ್ಕೆ ಬಂದ ಸುಧೀರ್ ಅವರು ಅಟೋರಿಕ್ಷಾ ಹತ್ತುವಾಗ ಬಾಂಗ್ಲಾ ಅಭಿಮಾನಿಗಳು ಸುಧೀರ್ ರನ್ನು ತಡೆದು ನಿಲ್ಲಿಸಿದ್ದಾರೆ. ಕೆಲವರು ಸುಧೀರ್ ಮೇಲೆ ಕಲ್ಲು ಎಸೆದಿದ್ದಾರೆ. ವಿಶ್ವಕಪ್ 2015 ಟೂರ್ನಿಯಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಸೇಡು ತೀರಿಸಿಕೊಂಡಿದ್ದೇವೆ ಎಂದು ಕೂಗುತ್ತಿದ್ದರು.
ಪೊಲೀಸರಿಂದ ರಕ್ಷಣೆ
ನಾನು ಎಲ್ಲೂ ಈ ರೀತಿ ಪ್ರತಿಭಟನೆ, ಹಲ್ಲೆ ಎದುರಿಸಿಲ್ಲ ಎಂದು 34 ವರ್ಷ ವಯಸ್ಸಿನ ಸುಧೀರ್ ನೊಂದು ಎಬಿಪಿ ನ್ಯೂಸ್ ಜೊತೆ ಅನುಭವ ಹಂಚಿಕೊಂಡಿದ್ದಾರೆ. ಹುಚ್ಚು ಅಭಿಮಾನಿಗಳ ಗುಂಪಿನಿಂದ ಸುಧೀರ್ ರನ್ನು ಇಬ್ಬರು ಪೊಲೀಸರು ರಕ್ಷಿಸಿ ಬೇರೆಡೆಗೆ ಕರೆದೊಯ್ದಿದ್ದಾರೆ.
|
ಭಾರತೀಯ ಕ್ರೀಡಾಭಿಮಾನಿಗಳು ವ್ಯಥೆ
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ 2015 ಟೂರ್ನಿ ಸೇರಿದಂತೆ ಎಲ್ಲಾ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಜರ್ಸಿ ನಂಬರ್ 10 ಧರಿಸಿಕೊಂಡು ತ್ರಿವರ್ಣ ಧ್ವಜ ಹಿಡಿದುಕೊಂಡು ತಂಡವನ್ನು ಹುರಿದುಂಬಿಸುವ ಸುಧೀರ್ ಗೆ ಈ ರೀತಿ ಕೆಟ್ಟ ಅನುಭವವಾಗಿರುವುದಕ್ಕೆ ಭಾರತೀಯ ಕ್ರೀಡಾಭಿಮಾನಿಗಳು ವ್ಯಥೆ ವ್ಯಕ್ತಪಡಿಸಿದ್ದಾರೆ
|
ಮಕ್ಕಳಂತೆ ಹುಚ್ಚಾಟವಾಡುವ ಬಾಂಗ್ಲಾದೇಶಿಗಳು
ಮಕ್ಕಳಂತೆ ಹುಚ್ಚಾಟವಾಡುವ ಬಾಂಗ್ಲಾದೇಶಿಗಳು ಇನ್ನಾದರೂ ಪ್ರಬುದ್ಧರಾಗಿ ವರ್ತಿಸಲಿ.