ಬಾಲ್ಯ ಜೀವನ ಮತ್ತು ಪರಿಚಯ
ಜನವರಿ 3, 1996ರಲ್ಲಿ ನಾಗೇಂದ್ರ ಮತ್ತು ಶಿವಮ್ಮ ದಂಪತಿಗೆ ಜನಿಸಿದ್ರು. ಹಾಸನ ಜಿಲ್ಲೆಯ ಕೊಂಡಚ್ಚಿಯಲ್ಲಿ ಜನಿನಿದ್ರು. ಬಿಕಾಂ ಪದವೀಧರೆಯಾಗಿರುವ ಇವರು ಕುಸ್ತಿ, ಪಂಜ ಕುಸ್ತಿ, ಹ್ಯಾಂಡ್ಬಾಲ್, ಜೂಡೋ, ಅಥ್ಲೆಟಿಕ್ಸ್ ಶಾಟ್ಪುಟ್, ಹಲವಾರು ಕ್ರೀಡೆಗಳಲ್ಲಿ ರಾಜ್ಯ , ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ನಮ್ಮೂರ ಪ್ರತಿಭೆ: ಬೆಂಗಳೂರಿನ ಯುವ ಫಾರ್ಮುಲಾ 2, DTM ರೇಸರ್ ಅರ್ಜುನ್ ಮೈನಿ
ಮಧುರಾ ಪ್ರಮುಖ ಸಾಧನೆಗಳು
2011-12 ಅಂಡಮಾನ್ ನಡೆದ ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ
2012-13ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯಸ್ಥಾನ
2015-16ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ
2018-19ರಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ರಾಷ್ಟ್ರಮಟ್ಟದ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ
2019-20ರಲ್ಲಿ ಛತ್ತೀಗಡದಲ್ಲಿ ನಡೆದ ಪಂಜಕುಸ್ತಿ ಪಂದ್ಯಾವಳಿಯಲ್ಲಿ ಎರಡು ಚಿನ್ನದ ಪದಕ
ರೊಮೆನಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಪಂಜ ಕುಸ್ತಿಯಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಧುರ ಭಾಗಿಯಾಗಿದ್ದಾರೆ.
ನಮ್ಮೂರ ಪ್ರತಿಭೆ: ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್
ಪ್ರಮುಖ ಪ್ರಶಸ್ತಿಗಳು
ಮಧುರಾ ಕೆ.ಎನ್ ಹಲವಾರು ಕ್ರೀಡೆಗಳಲ್ಲಿ ಭಾಗಿಯಾಗುವ ಮೂಲಕ ಮಲ್ಟಿ ಸ್ಪೋರ್ಟ್ ಸ್ಟಾರ್ ಆಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಹೀಗಾಗಿ ಇವರ ಸಾಧನೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
2018ರಲ್ಲಿ ಶ್ರೀ ಹಾಸನಾಂಭ ಪ್ರಶಸ್ತಿ
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
ಕರ್ನಾಟಕ ಕುಮಾರಿ ಪ್ರಶಸ್ತಿ
2019ರಲ್ಲಿ ಮಿಸ್ ಕರ್ನಾಟಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.