ಆ ನಿರೀಕ್ಷೆಗೆ ಅರ್ಥವಿಲ್ಲ
'ಹಿರಿಯ ಆಟಗಾರನಿಂದ ನಾವು ಯುವಕನ ಆಟವನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ' ಎಂದು ಕಪಿಲ್ ವಿವರಿಸಿದರು. ತಂಡದಲ್ಲಿ ಹಿರಿಯ ಆಟಗಾರರ ಉಪಸ್ಥಿತಿ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಮಾಗರ್ದರ್ಶನ ನಿಟ್ಟಿನಲ್ಲಿ ನೆರವಾಗುತ್ತದೆ ಎಂಬರ್ಥದಲ್ಲಿ ಕಪಿಲ್ ಮಾತನಾಡಿದರು.
ಅನುಭವಿಗಳು ಬೇಕೇ ಬೇಕು!
ಎದುರಾಳಿ ತಂಡವನ್ನು ಮಾನಸಿಕವಾಗಿ ಹಿಮ್ಮೆಟ್ಟಿಸಲು ಅನುಭವಿ ಆಟಗಾರರ ಉಪಸ್ಥಿತಿ ತಂಡಕ್ಕೆ ಅಗತ್ಯವಿರುತ್ತದೆ. ಯಾಕೆಂದರೆ ಅನುಭವಿ ಆಟಗಾರರು ಯಾವ ಕ್ಷಣದಲ್ಲಾದರೂ ಸಿಡಿದು ನಿಲ್ಲುವ ಸಾಧ್ಯತೆಯಿರುತ್ತದೆ. ಹೀಗಾಗಿ ಎದುರಾಳಿ ತಂಡ ಸಣ್ಣ ಮಟ್ಟಿನ ಭಯ ಹೊಂದಿಯೇ ಹೊಂದಿರುತ್ತದೆ ಎಂದು ದೇವ್ ವಿವರಿಸಿದರು.
ವಿಶ್ವಕಪ್ ವಿಜೇತ ನಾಯಕ
1983ರಲ್ಲಿ ಐಸಿಸಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್, 2011ರ ವಿಶ್ವಕಪ್ ವಿಜೇತ ತಂಡದ ನಾಯಕ, 37ರ ಹರೆಯದ ಧೋನಿಯನ್ನು ಸಮರ್ಥಿ, 'ಧೋನಿಯ ಅನುಭವ ಅನೇಕ ರೀತಿಯಲ್ಲಿ ತಂಡಕ್ಕೆ, ಯುವ ಆಟಗಾರರಿಗೆ ನೆರವಾಗುವುದನ್ನು ನಾವು ನೋಡಿದ್ದೇವೆ. ಇದಕ್ಕೇ ಧೋನಿ ಈಗಲೂ ತಂಡದ ಆಸ್ತಿಯಾಗಿ ಗೋಚರಿಸುತ್ತಾರೆ' ಎಂದರು.