ರಿಜ್ವಾನ್ ವೇಗವಾಗಿ ರನ್ ಗಳಿಸಬೇಕಿತ್ತು
ಒಂದು ವೇಳೆ ರಿಜ್ವಾನ್ ವೇಗವಾಗಿ ರನ್ ಗಳಿಸಿದ್ದರೆ, ಇತರೆ ಬ್ಯಾಟರ್ ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಅವರು ಬೇಗನೆ ವಿಕೆಟ್ ಕಳೆದುಕೊಂಡರು. ಏಷ್ಯಾಕಪ್ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಫಾರ್ಮ್ನಲ್ಲಿದ್ದ ಮೊಹಮ್ಮದ್ ರಿಜ್ವಾನ್ ಫೈನಲ್ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದರು.
ಆರಂಭಿಕ ಆಟಗಾರರ ಮೇಲೆ ಪಾಕಿಸ್ತಾನ ತಂಡ ಅತಿಯಾಗಿ ಅವಲಂಬಿಸಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಫಖರ್ ಜಮಾನ್ ಗೋಲ್ಡನ್ ಡಕ್ಗೆ ಔಟಾದರು, ಆದರೆ ಅಹ್ಮದ್ ಕೇವಲ 32 ರನ್ ಗಳಿಸಲು 31 ಎಸೆತಗಳನ್ನು ತೆಗೆದುಕೊಂಡರು.
ಶ್ರೀಲಂಕಾ ಏಷ್ಯಾ ಕಪ್ ಚಾಂಪಿಯನ್: ಫೈನಲ್ನಲ್ಲಿ ಲಂಕಾ ಕ್ರಿಕೆಟ್ಗೆ ಹೊಸ ರಂಗು ತುಂಬಿದ ಹಸರಂಗ!
ಪಾಕಿಸ್ತಾನ ಅತ್ಯಂತ ಕೆಟ್ಟ ಆಟವಾಡಿತು
ಆಸಿಫ್ ಅಲಿ (0) ಮತ್ತು ಶಾದಾಬ್ ಖಾನ್ (8) ಕೂಡ ರನ್ ಗಳಿಸಲು ವಿಫಲರಾದರು. ಪಾಕಿಸ್ತಾನ ಕೇವಲ 54 ರನ್ ಗಳಿಸುವಷ್ಟರಲ್ಲಿ ಕೊನೆಯ 8 ವಿಕೆಟ್ ಕಳೆದುಕೊಂಡಿತು. ತನ್ನ ಯೂಟ್ಯೂಬ್ ಚಾನೆಲ್ನಲ್ಲಿನ ವೀಡಿಯೊದಲ್ಲಿ, ಪಾಕಿಸ್ತಾನದ ಅಸ್ಥಿರ ಮಧ್ಯಮ ಕ್ರಮಾಂಕದ ಬಗ್ಗೆ ಶೋಯೆಬ್ ಅಖ್ತರ್ ಭಾರಿ ಟೀಕೆ ಮಾಡಿದ್ದಾರೆ.
"ಪಾಕಿಸ್ತಾನ ತಂಡ ನಿಜವಾಗಿಯೂ ಕೆಟ್ಟ ಕ್ರಿಕೆಟ್ ಅನ್ನು ಆಡಿದೆ, ಸಂಪೂರ್ಣವಾಗಿ ಭಯಾನಕವಾಗಿದೆ. ಅವರು ಫಖರ್, ಇಫ್ತಿಕರ್ ಮತ್ತು ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಉಳಿದ ಆಟಗಾರರನ್ನು ನೋಡಬೇಕಾಗಿದೆ. ರಿಜ್ವಾನ್ ತ್ವರಿತ ಗತಿಯಲ್ಲಿ ರನ್ ಗಳಿಸಲಿಲ್ಲ. ಫೈನಲ್ನಂತಹ ಮುಖ್ಯವಾದ ಪಂದ್ಯದಲ್ಲಿ ಟಿ20 ಮಾದರಿಯಲ್ಲಿ ಬಾಲಿಗೆ ಒಂದರಂತೆ ಯಾರು ರನ್ ಗಳಿಸುತ್ತಾರೆ? ಈ ರೀತಿಯ ಆಟದಿಂದ ನೀವು ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ"
ಪಾಕಿಸ್ತಾನದ ಫೀಲ್ಡಿಂಗ್ ಬಗ್ಗೆಯೂ ಟೀಕೆ
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಬಗ್ಗೆ ಶೋಯೆಬ್ ಅಖ್ತರ್ ಟೀಕೆ ಮಾಡಿದ್ದಾರೆ. ಎರಡೂ ತಂಡಗಳ ನಡುವಿನ ಮುಖ್ಯ ವ್ಯತ್ಯಾಸಗಳಲ್ಲಿ ಫೀಲ್ಡಿಂಗ್ ಕೂಡ ಒಂದು ಎಂದು ಹೇಳಿದ್ದಾರೆ. ಶ್ರೀಲಂಕಾ ಮೈದಾನದಲ್ಲಿ ಸಂಪೂರ್ಣವಾಗಿ ಸಂವೇದನಾಶೀಲವಾಗಿದ್ದರೂ, ಪಾಕಿಸ್ತಾನವು ಹಲವಾರು ಪ್ರಮುಖ ಕ್ಯಾಚ್ಗಳನ್ನು ಕೈಬಿಟ್ಟಿತು. ಟಿ20 ಮಾದರಿಯಲ್ಲಿ ಫೀಲ್ಡಿಂಗ್ ಕೂಡ ಅತಿ ಮುಖ್ಯ ಎಂದು ಹೇಳಿದ್ದಾರೆ.
ಭಾನುಕಾ ರಾಜಪಕ್ಸೆ ನೀಡಿದ ಎರಡು ಕ್ಯಾಚ್ಗಳನ್ನು ಕೈಬಿಟ್ಟದ್ದು ಅತ್ಯಂತ ದುಬಾರಿಯಾಯಿತು ಎಂದು ಹೇಳಿದ್ದಾರೆ. 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದ ರಾಜಪಕ್ಸೆ ಶ್ರೀಲಂಕಾ 170 ರನ್ ಕಲೆಹಾಕಲು ಕಾರಣವಾದರು.
ಇನ್ನೂ ಎಷ್ಟು ಡಿಕ್ಕಿಗಳು ಬಾಕಿ ಇವೆ ಗೊತ್ತಿಲ್ಲ
ಪಾಕಿಸ್ತಾನ ಫಿಲ್ಡಿಂಗ್ ಬಗ್ಗೆ ಭಾರಿ ಕೋಪಗೊಂಡಿರುವ ಶೋಯೆಬ್ ಅಖ್ತರ್, "ಶ್ರೀಲಂಕಾದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಹೆಚ್ಚಿನ ಕ್ಯಾಚ್ಗಳನ್ನು ಹಿಡಿಯುವಾಗ ಅವರು ತಪ್ಪು ಮಾಡಲಿಲ್ಲ. ಆದರೆ ಪಾಕಿಸ್ತಾನ ಫೀಲ್ಡಿಂಗ್ ಮಾತ್ರ ಕಳಪೆಯಾಗಿದೆ. ಇನ್ನೂ ಎಷ್ಟು ಡಿಕ್ಕಿಗಳು ಬಾಕಿ ಉಳಿದಿವೆ ಎಂದು ತಿಳಿದಿಲ್ಲ. ಫಖರ್ ಜಮಾನ್ ಡಿಕ್ಕಿಹೊಡೆಯುತ್ತಿದ್ದಾರೆ, ಶಾದಾಬ್ ಖಾನ್ ಆಸಿಫ್ ಅಲಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ. ಪಾಕಿಸ್ತಾನ ತಮ್ಮನ್ನು ತಾವು ಅತಿಯಾಗಿ ಪ್ರಚಾರ ಮಾಡಿಕೊಂಡಿದ್ದಾರೆ." ಎಂದು ಅಸಮಾಧಾನ ವ್ಯಕ್ತಪಡಿಸಿಕೊಂಡಿದ್ದಾರೆ.
ಏಷ್ಯಾಕಪ್ ಫೈನಲ್ನಲ್ಲಿ ಸೋಲನುಭವಿಸಿದ ನಂತರ ಪಾಕಿಸ್ತಾನ ಪಾಳಯದಲ್ಲಿ ಇದ್ದಕ್ಕಿದ್ದಂತೆ ಹಲವಾರು ಪ್ರಶ್ನಾರ್ಥಕ ಚಿಹ್ನೆಗಳು ಕಾಣಿಸಿಕೊಂಡಿವೆ. ಮುಂಬರುವ ಟಿ20 ವಿಶ್ವಕಪ್ಗೆ ಮುಂಚಿತವಾಗಿ ತಂಡದ ಫೀಲ್ಡಿಂಗ್ ಸುಧಾರಣೆಯಾಗಬೇಕು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಿಷ್ಠವಾಗಬೇಕು ಎಂದು ಹೇಳಿದ್ದಾರೆ.