2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅವರ ಪ್ರದರ್ಶನವನ್ನು 2022ರ ಅಸಾಧಾರಣ ಇನ್ನಿಂಗ್ಸ್ ಎಂದು ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದ್ದಾರೆ.
ಇದೇ ವೇಳೆ ರಿಷಭ್ ಪಂತ್ ಅವರನ್ನು 2022ರಲ್ಲಿ ಭಾರತದ ಅತ್ಯುತ್ತಮ ಟೆಸ್ಟ್ ಆಟಗಾರ ಎಂದು ದಿನೇಶ್ ಕಾರ್ತಿಕ್ ಹೆಸರಿಸಿದ್ದು, ಅವರ ಬ್ಯಾಟಿಂಗ್ ಪ್ರದರ್ಶನಗಳು ಅದ್ಭುತವಾಗಿದ್ದವು ಎಂದಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್
ಕ್ರಿಕ್ಬಜ್ನೊಂದಿಗೆ ಮಾತನಾಡಿದ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ಅವರು ಪಾಕಿಸ್ತಾನದ ವಿರುದ್ಧ ವರ್ಷದ ಅಸಾಧಾರಣ ಇನ್ನಿಂಗ್ಸ್ ಆಡಿದರು. ಇನ್ನು ಸೂರ್ಯಕುಮಾರ್ ಯಾದವ್ ಅವರನ್ನು ಅತ್ಯುತ್ತಮ ಟಿ20 ಬ್ಯಾಟರ್ ಎಂದು ಆಯ್ಕೆ ಮಾಡಿದ್ದಾರೆ.
"ಈ ವರ್ಷ ಕೆಲವು ಉತ್ತಮ ಪ್ರದರ್ಶನಗಳು ನಡೆದಿವೆ. ಆದರೆ ದೂರದ ಅಂತರದಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅವರ ಅಸಾಧಾರಣ ಇನ್ನಿಂಗ್ಸ್ಗೆ ತಲೆಬಾಗಲೇಬೇಕು. ನಾನು ಈ ವರ್ಷಕ್ಕೆ ಟಿ20 ಫಾರ್ಮ್ಯಾಟ್ಗೆ ಉತ್ತಮ ಬ್ಯಾಟರ್ನನ್ನು ಆಯ್ಕೆ ಮಾಡಬೇಕಾದರೆ ಅದು ಸೂರ್ಯಕುಮಾರ್ ಯಾದವ್ ಆಗಿರಬೇಕು. ಭಾರತದ ಅತ್ಯುತ್ತಮ ಮತ್ತು ವಾದಯೋಗ್ಯವಾಗಿ ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
ಈ ವರ್ಷ ಟೆಸ್ಟ್ನಲ್ಲಿ ಭಾರತದ ಪರ ರಿಷಭ್ ಪಂತ್ ಅದ್ಭುತವಾಗಿದ್ದಾರೆ ಎಂದ ದಿನೇಶ್ ಕಾರ್ತಿಕ್, ಭಾರತದ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಅತ್ಯಂತ ಸ್ಥಿರವಾದ ಏಕದಿನ ಸ್ವರೂಪದ ಬ್ಯಾಟರ್ ಎಂದು ಆಯ್ಕೆ ಮಾಡಿದ್ದಾರೆ.
2022 ಭಾರತದ ಈ ಸ್ಟಾರ್ ಬ್ಯಾಟ್ಸ್ಮನ್ಗೆ ಸೇರಿದ್ದು; ಆಕಾಶ್ ಚೋಪ್ರಾ
"ಟೆಸ್ಟ್ ಕ್ರಿಕೆಟ್ಗೆ ಬಂದಾಗ ರಿಷಭ್ ಪಂತ್ ಈ ವರ್ಷ ಅದ್ಭುತವಾಗಿ ಕಾಣಿಸಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿ ಸ್ಥಿರವಾಗಿ ಮತ್ತು ಉತ್ತಮವಾಗಿ ಆಡಿದ್ದಾರೆ. ಅವರನ್ನು ಶ್ರೇಯಸ್ ಅಯ್ಯರ್ ನಿಕಟವಾಗಿ ಅನುಸರಿಸುತ್ತಿದ್ದಾರೆ. ಏಕದಿನ ಸ್ವರೂಪದಲ್ಲಿಯೂ ಶ್ರೇಯಸ್ ಅಯ್ಯರ್ ಭಾರತಕ್ಕೆ ಅದ್ಭುತವಾದ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಖಚಿತ ಆಟಗಾರನಾಗಿ ಮರಳಿದ್ದಾರೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
ಏಕದಿನ ಕ್ರಿಕೆಟ್ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ , ಇದು ಭಾರತ ತಂಡಕ್ಕೆ ಸಾಮಾನ್ಯ ವರ್ಷ ಎಂದು ಹೇಳಿದರು.
"ಏಕದಿನ ಕ್ರಿಕೆಟ್ನಲ್ಲಿ ಭಾರತಕ್ಕೆ ಅತ್ಯುತ್ತಮವಾಗಿರಲು, ನಾವು ಇಲ್ಲಿಯವರೆಗೆ ಬಲಿಷ್ಠ ತಂಡವನ್ನು ಆಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಟಿ20 ಕ್ರಿಕೆಟ್ನತ್ತ ಗಮನ ಕೇಂದ್ರೀಕರಿಸಲಾಗಿತ್ತು. ಆದರೆ ಇದು ತುಂಬಾ ಸಾಮಾನ್ಯ ವರ್ಷವಾಗಿದೆ. ನಾವು ನ್ಯೂಜಿಲೆಂಡ್, ಬಾಂಗ್ಲಾದೇಶ, ಆಸ್ಟ್ರೇಲಿಯಾ ವಿರುದ್ಧ ಸೋತಿದ್ದೇವೆ ಮತ್ತು ನಾವು ಕೇವಲ ಇಂಗ್ಲೆಂಡ್ ತಂಡವನ್ನು ಮಾತ್ರ ಮಣಿಸಿದ್ದೇವೆ. ನಾನು ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ನಂತಹ ತಂಡಗಳನ್ನು ಲೆಕ್ಕಿಸುತ್ತಿಲ್ಲ," ಎಂದು ದಿನೇಶ್ ಕಾರ್ತಿಕ್ ಹೇಳಿದರು.