ಬೌಲರ್ಗಳನ್ನು ಬದಲಾಯಿಸಬಹುದಾದರೆ ಬ್ಯಾಟ್ಸ್ಮನ್ ಯಾಕಿಲ್ಲ
ನಾಲ್ಕನೇ ಟೆಸ್ಟ್ ಪಂದ್ಯದ ಅಂತ್ಯದ ಬಳಿಕ ಜಹೀರ್ ಖಾನ್ ಕ್ರಿಕ್ಬಜ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಬ್ಯಾಟಿಂಗ್ನಲ್ಲಿ ನಾನು ಒಂದೇ ಒಂದು ಬ್ಲಾವಣೆಯನ್ನು ಬಯಸುತ್ತಿದ್ದೇನೆ. ಆದರೆ ಬೌಲರ್ಗಳ ವಿಚಾರದಲ್ಲಿ ಬೌಲರ್ಗಳ ಮೇಲಿರುವ ಕೆಲಸದ ಒತ್ತಡವನ್ನು ಗಮನಿಸಬೇಕು. ತಂಡದ ಆಯ್ಕೆಯಲ್ಲಿ ನೀವು ಫಾರ್ಮ್ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದರ ಜೊತೆಗೆ ಪರಿಸ್ಥಿತಿಯನ್ನು ಕೂಡ ಗಮನಿಸಿಕೊಳ್ಳಬೇಕು. ಇಂತಾ ಹಂತದಲ್ಲಿ ನೀವು ಸರಣಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸರಣಿಯಲ್ಲಿ ಗೆಲ್ಲಲುಬೇಕಾದ ಅಗತ್ಯವೇನಿದೆ ಅದಕ್ಕೆ ತಕ್ಕನಾದ ಬದಲಾವನೆ ಮಾಡಿಕೊಳ್ಳಬೇಕು. ಬೌಲರ್ಗಳನ್ನು ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾದರೆ ಬ್ಯಾಟ್ಸ್ಮನ್ಗಳನ್ನು ಯಾಕೆ ಸಾಧ್ಯವಿಲ್ಲ" ಎಂದು ಜಹೀರ್ ಖಾನ್ ಪ್ರಶ್ನಿಸಿದ್ದಾರೆ.
ಸತತ ವೈಫಲ್ಯದ ಮಧ್ಯೆಯೂ ಬೆನ್ನಿಗೆ ನಿಂತ ಮ್ಯಾನೇಜ್ಮೆಂಟ್
ಅಜಿಂಕ್ಯಾ ರಹಾನೆ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಮಾತ್ರವಲ್ಲ ಸುದೀರ್ಘ ಕಾಲದಿಂದ ಬ್ಯಾಟಿಂಗ್ನಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸಲ್ಲಿ ಒಂದು ಶತಕ ಗಳಿಸಿದ್ದು ಹೊರತುಪಡಿಸಿದರೆ ಅಂತಾ ಹೇಳಿಕೊಳ್ಳುವ ಪ್ರದರ್ಶನ ರಹಾನೆ ಬ್ಯಾಟ್ನಿಂದ ಬಂದಿಲ್ಲ. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಕೇವಲ ಒಂದು ಅರ್ಧ ಶತಕದ ಮಾತ್ರವೇ ಸಿಡಿಸಲು ರಹಾನೆಗೆ ಸಾಧ್ಯವಾಗಿದೆ. ಇಂತಾ ಸಂದರ್ಭದಲ್ಲಿ ಕೆಲ ಪಂದ್ಯಗಳಲ್ಲಿ ವಿರಾಮ ನೀಡಿದರೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಬಹುದು ಎಂಬುದು ಕೆಲ ತಜ್ಞರ ಅಭಿಪ್ರಾಯ. ಹಾಗಿದ್ದರೂ ರಹಾನೆ ಸತತವಾಗಿ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸುತ್ತಿದ್ದಾರೆ.
ಬೆಂಚ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಹೀರ್
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೆಂಚ್ ಸಾಮರ್ಥ್ಯದ ಬಗ್ಗೆ ಜಹೀರ್ ಖಾನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ತಮಡದ ಆಟಗಾರರಲ್ಲಿ ಇರುವ ಆತ್ಮ ವಿಶ್ವಾಸ ಈ ತಂಡವನ್ನು ಅತ್ಯುತ್ತಮ ತಂಡವನ್ನಾಗಿಸಿದೆ ಎಂಬ ಅಭಿಪ್ರಾಯವನ್ನು ಜಹೀರ್ ವ್ಯಕ್ತಪಡಿಸಿದ್ದಾರೆ. "ಈ ತಂಡ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಣದಿಂದಾಗಿ ದಿನೇ ಅದ್ಭುತ ಪ್ರದರ್ಶನ ನೀಡುತ್ತಾ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗುತ್ತಿದೆ. ಬೆಂಚ್ ಸಾಮರ್ಥ್ಯವು ಕೂಡ ಅದ್ಭುತವಾಗಿದೆ. ಆಟಗಾರರು ತಮ್ಮ ಗುರಿ ಹಾಗೂ ಮಾಪನಗಳನ್ನು ಕೂಡ ಎತ್ತರಕ್ಕೆ ಏರಿಸಿಕೊಂಡಿದ್ದಾರೆ" ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.