T20 World Cup: ಎಲ್ಲಾ ತಂಡಗಳಿಗೂ ಗಾಯದ ಸಮಸ್ಯೆ ಕಾಡುತ್ತಿದೆ ಎಂದ ಕೋಚ್ ರಾಹುಲ್ ದ್ರಾವಿಡ್

ಭಾನುವಾರ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಗಾಯದ ನಂತರ ತಂಡಕ್ಕೆ ಮರಳಿದ ನಂತರ ಹರ್ಷಲ್ ಸರಣಿಯಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ದುಬಾರಿ ಆಟಗಾರನಾಗಿದ್ದರೂ ವೇಗಿ ಕೆಲವು ಉತ್ತಮ ಸ್ಪೆಲ್ಗಳನ್ನು ಬೌಲ್ ಮಾಡಿದ್ದಾರೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
"ಹರ್ಷಲ್ ನಿಜವಾಗಿಯೂ ಮಾನಸಿಕವಾಗಿ ಪ್ರಬಲ ಕ್ರಿಕೆಟಿಗ ಮತ್ತು ಆತ ಅದ್ಭುತ ಕ್ರಿಕೆಟಿಗ ಕೂಡ. ಕಳೆದ ಎರಡು ವರ್ಷಗಳಲ್ಲಿ ಆತನ ಸಾಧನೆಯನ್ನು ನೋಡಿ. ಹರ್ಷಲ್ ಸಂಪೂರ್ಣವಾಗಿ ಅಸಾಧಾರಣ ಆಟಗಾರರಾಗಿದ್ದಾರೆ. ಅವರು ಆಡುವ ಫ್ರಾಂಚೈಸಿಗಾಗಿ ಮತ್ತು ಭಾರತೀಯ ತಂಡಕ್ಕಾಗಿ ಅವರು ಕೆಲವು ಉತ್ತಮ ಎಸೆತಗಳನ್ನು ಬೌಲ್ ಮಾಡಿದ್ದಾರೆ. ಅವರು ಚೆನ್ನಾಗಿ ತಯಾರಿ ನಡೆಸುತ್ತಿದ್ದಾರೆ ಮತ್ತು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ" ಎಂದು ರಾಹುಲ್ ದ್ರಾವಿಡ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗಾಯದಿಂದ ಮರಳಿದ ನಂತರ ಹರ್ಷಲ್ ತನ್ನ ಲಯವನ್ನು ಕಂಡುಕೊಳ್ಳಲು ಸಮಯ ತೆಗೆದುಕೊಳ್ಳಬಹುದು ಎಂದು ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ ಮತ್ತು ಹರ್ಷಲ್ ಪಟೇಲ್ ತಮ್ಮ ಫಾರ್ಮ್ ಕಂಡುಕೊಳ್ಳುತ್ತಿರುವುದರಿಂದ ಸಂತೋಷವಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಹೊಂದಿಕೊಳ್ಳಲು ಅವರಿಗೆ ಸಮಯ ಬೇಕು
ಅವರು ಗಾಯದ ನಂತರ ತಂಡಕ್ಕೆ ಮರಳಿದ್ದಾರೆ ಅವರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹೈದರಾಬಾದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಓವರ್ ಬೌಲ್ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧವೂ ಸಹ, ಅವರು ಕೊನೆಯ ಓವರ್ ಅನ್ನು ಅದ್ಭುತವಾಗಿ ಬೌಲ್ ಮಾಡಿದರು ಎಂದು ದ್ರಾವಿಡ್ ಹೇಳಿದರು.
ದೊಡ್ಡ ವ್ಯತ್ಯಾಸವನ್ನು ಉಂಟುಮಾಡುವ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಟಿಮ್ ಡೇವಿಡ್ ವಿಕೆಟ್ ಪಡೆದರು. ಅವರು ಮುನ್ನಡೆಯುತ್ತಿರುವ ರೀತಿಯಲ್ಲಿ ನಮಗೆ ನಿಜವಾಗಿಯೂ ಸಂತೋಷವಾಗಿದೆ, ಅವರು ನಿಜವಾಗಿಯೂ ಚೆನ್ನಾಗಿದ್ದಾರೆ. ಇನ್ನು ಒಂದೆರಡು ಪಂದ್ಯಗಳಲ್ಲಿ ಆಡಿದರೆ ಅವನ ಪ್ರದರ್ಶನ ಸುಧಾರಣೆಯಾಗುತ್ತದೆ ಎಂದು ಅವರು ಹೇಳಿದರು.
IND vs SA 2nd T20: ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಇತಿಹಾಸ ಮತ್ತು ಟಿ20 ದಾಖಲೆಗಳು

ಸರಣಿಯಿಂದ ಹೊರಗುಳಿದ ಬುಮ್ರಾ
ಗಾಯಗಳಿಂದಾಗಿ ಪ್ರಮುಖ ಪಂದ್ಯಾವಳಿಗಳಿಂದ ಹೊರಗುಳಿಯುವ ಪ್ರಧಾನ ಆಟಗಾರ ಬುಮ್ರಾ ಬಗ್ಗೆ ಮಾತನಾಡುತ್ತಾ, ಅನೇಕ ತಂಡಗಳಿಗೆ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ ಎಂದು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ಜಸ್ಪ್ರೀತ್ ಬುಮ್ರಾ ಅವರು ಬೆನ್ನುನೋವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮುಂಬರುವ T20 ವಿಶ್ವಕಪ್ನಲ್ಲಿ ಅವರು ಆಡುವುದರ ಬಗ್ಗೆ ಅನುಮಾನ ಮೂಡಿಸಿದೆ. ಗಾಯದ ಕಾರಣ ಬುಮ್ರಾ ಏಷ್ಯಾಕಪ್ನಲ್ಲಿ ಆಡಲಿಲ್ಲ, ಆದರೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮರಳಿದರು.

ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ
ಆಟಗಾರರು ಗಾಯಗೊಳ್ಳುವುದು ಸಾಮಾನ್ಯ, ಇದು ಆಟದ ಭಾಗವಾಗಿದೆ. ಗಾಯಗಳಿಂದ ಬಳಲುತ್ತಿರುವ ಏಕೈಕ ತಂಡ ನಮ್ಮದಲ್ಲ.
"ಇದು ಸಂಭವಿಸುತ್ತದೆ, ಇದು ಆಟದ ಭಾಗವಾಗಿದೆ. ದುರದೃಷ್ಟವಶಾತ್ ಗಾಯಗಳಿಂದ ಬಳಲುತ್ತಿರುವ ಏಕೈಕ ತಂಡ ನಮ್ಮದಲ್ಲ. ನಿಸ್ಸಂಶಯವಾಗಿ, ಟಿ20 ವಿಶ್ವಕಪ್ ಟೂರ್ನಿ ಹತ್ತಿರ ಬಂದಾಗಲೇ ಈ ರೀತಿ ಸಂಭವಿಸಿದಾಗ ಯೋಜನೆಗಳನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಬೇಕಾಗಬಹುದು.
ಗಾಯಗಳು ಆಟದ ಭಾಗವೆಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಗಾಯಗಳನ್ನು ಕಡಿಮೆ ಮಾಡಲು ನಿಜವಾಗಿಯೂ ಉತ್ತಮವಾಗಿ ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಮತ್ತು ಎನ್ಸಿಎಯಲ್ಲಿ ನಮ್ಮ ಕ್ರೀಡಾ ವಿಜ್ಞಾನ ತಂಡದೊಂದಿಗೆ ನಾವು ಶ್ರಮಿಸುತ್ತಿದ್ದೇವೆ ಎಂದು ಭಾರತದ ಮುಖ್ಯ ಕೋಚ್ ದ್ರಾವಿಡ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications