
10 ವಿಕೆಟ್ ಪಡೆಯುವ ವಿಶ್ವಾಸ
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದರು. ಭಾರತೀಯ ತಂಡ 10 ವಿಕೆಟ್ಗಳನ್ನು ತೆಗೆಯಬಹುದು ಎಂಬ ವಿಶ್ವಾಸವನ್ನು ಇಟ್ಟುಕೊಂಡಿತ್ತು. ಚೆಂಡು ರಿವರ್ಸ್ ಪಡೆಯಲು ಆರಂಭವಾಗುತ್ತಿದ್ದಂತೆಯೇ ಜಸ್ಪ್ರೀತ್ ಬೂಮ್ರಾ ಚೆಂಡನ್ನು ಕೇಳಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಎರಡು ವಿಕೆಟ್ಗಳನ್ನು ಒಂದರ ಹಿಂದೊಂದರಂತೆ ಪಡೆಯುವ ಮೂಲಕ ಪಂದ್ಯವನ್ನು ಭಾರತದತ್ತ ತಿರುಗಿಸಿದರು ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ನಾವು ಗೆಲ್ಲಲೆಂದೇ ಬಂದಿದ್ದೇವೆ
"ನನ್ನ ಪ್ರಕಾರ ಎರಡು ಇನ್ನಿಂಗ್ಸ್ಗಳಲ್ಲಿ ನಾವು ಪ್ರದರ್ಶಿಸಿದ ಆಟದ ಪ್ರವೃತ್ತಿ ಈ ಪಂದ್ಯದ ಅತ್ಯುತ್ತಮವಾದ ಅಂಶವಾಗಿದೆ. ನಾವು ಈ ಪಂದ್ಯವನ್ನು ರಕ್ಷಿಸಿಕೊಳ್ಳುವತ್ತ ಗಮನಹರಿಸಲೇ ಇಲ್ಲ. ನಾವಿಲ್ಲಿ ಗೆಲ್ಲಲೆಂದೇ ಬಂದಿದ್ದೇವೆ. ನಮ್ಮ ತಂಡ ತೋರಿದ ಪ್ರದರ್ಶನಕ್ಕೆ ನಾನು ಹೆಮ್ಮೆ ಪಡುತ್ತೇನೆ" ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ರಿವರ್ಸ್ಸ್ವಿಂಗ್ಅನ್ನು ಪರಿಣಾಮಕಾರಿಯಾಗು ಬಳಸಿಕೊಂಡಿರುವುದಕ್ಕೆ ನಾಯಕ ಕೊಹ್ಲಿ ಪ್ರಶಂಸಿದರು. "ಈ ಪಿಚ್ ಫ್ಯಾಟ್ ಆಗಿದ್ದು ಜೊತೆಗೆ ಇಲ್ಲಿ ವಾತಾವರಣವೂ ಸಾಕಷ್ಟು ಬಿಸಿಯಾಗಿತ್ತು. ಒಂದು ತುದಿಯಲ್ಲಿ ಜಡೇಜಾ ಬೌಲಿಂಗ್ ನಡೆಸುತ್ತಿದ್ದಾಗ ನಮಗೆ ಅವಕಾಶವಿದೆ ಎಂದು ತಿಳಿದಿತ್ತು. ಜೊತೆಗೆ ಬೌಲ್ಗಳು ರಿವರ್ಸ್ವಿಂಗ್ನಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡಿದರು" ಎಂದಿದ್ದಾರೆ ವಿರಾಟ್ ಕೊಹ್ಲಿ.

ರೋಹಿತ್ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದರು. "ರೋಹಿತ್ ಶರ್ಮಾ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು. ಶಾರ್ದೂಲ್ ಈ ಪಂದ್ಯದಲ್ಲಿ ನೀಡಿದ ಪ್ರದರ್ಶನ ವಿಶೇಷವಾಗಿ ನಿಲ್ಲುತ್ತದೆ. ಅವರ ಎರಡು ಅರ್ಧ ಶತಕಗಳು ಎದುರಾಳಿಯನ್ನು ಕುಸಿಯುವಂತೆ ಮಾಡಿತ್ತು. ನನ್ನ ಪ್ರಕಾರ ಅವರು ಎರಡು ಇನ್ನಿಂಗ್ಸ್ನಲ್ಲಿಯೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು" ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಈ ಪಂದ್ಯದಲ್ಲಿನ ಗೆಲುವು ಭಾರತೀಯ ತಂಡಕ್ಕೆ ಮುಂದಿನ ಪಂದ್ಯವನ್ನು ಕೂಡ ಗೆಲ್ಲಲು ಸ್ಪೂರ್ತಿ ನೀಡಿದೆ ಎಂದಿದ್ದಾರೆ ವಿರಾಟ್ ಕೊಹ್ಲಿ. "ಇದು ನಮಗೆ ಮುಂದಿನ ಪಂದ್ಯವನನ್ಉ ಕೂಡ ಗೆಲ್ಲಲು ಹೆಚ್ಚಿನ ಸ್ಪೂರ್ತಿಯನ್ನು ನೀಡಿದೆ. ನಮಗೆ ನಂಬಿಕೆಯಿದೆ, ಹೀಗಾಗಿ ನಾವು ಮುಂದಿನ ಪಂದ್ಯದಲ್ಲಿ ದೊರೆಯುವ ಅವಕಾಶಗಳಿಗಾಗಿ ಕಾಯುತ್ತಿರುತ್ತೇವೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.


Click it and Unblock the Notifications












