ಎನ್ಸಿಯ ನಿಯಮಗಳಂತೆ ಕೆಲಸದ ಹೊರೆ
ರವೀಂದ್ರ ಜಡೇಜಾ ರಣಜಿಯಲ್ಲಿ ಆಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕೋಚ್ ನೀರಜ್ ಒಡೆದ್ರಾ, "ತರಬೇತಿ ಮತ್ತು ಕೆಲಸದ ಹೊರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಪ್ರೋಟೋಕಾಲ್ಗಳ ಪ್ರಕಾರ ಇರುತ್ತದೆ" ಎಂದು ಹೇಳಿದರು.
"ರವೀಂದ್ರ ಜಡೇಜಾ ತಂಡಕ್ಕೆ ಮರಳುತ್ತಿರುವುದು ತಂಡದ ಆಟಗಾರರ ಉತ್ಸಾಹ ಹೆಚ್ಚಿಸಿದೆ. ಈ ಬಗ್ಗೆ ನಾನು ರವೀಂದ್ರ ಜಡೇಜಾಗೆ ವಾಟ್ಸಾಪ್ ಮಾಡಿದೆ, ಅವರು ಕೂಡ ತಂಡವನ್ನು ಸೇರಿಕೊಳ್ಳಲು ಕಾತರನಾಗಿದ್ದೇನೆ" ಎಂದು ಪ್ರತ್ಯುತ್ತರ ನೀಡಿದರು ಎಂದು ಹೇಳಿದರು.
ಏಷ್ಯಾಕಪ್ ವೇಳೆ ಮೊಣಕಾಲಿಗೆ ಗಾಯ
ಯುಎಇಯಲ್ಲಿ ನಡೆದ ಏಷ್ಯಾ ಕಪ್ 2022 ರ ಸಂದರ್ಭದಲ್ಲಿ ರವೀಂದ್ರ ಜಡೇಜಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ದೀರ್ಘ ವಿಶ್ರಾಂತಿ ಪಡೆದುಕೊಂಡಿದ್ದಾರೆ. 2022ರ ಟಿ20 ವಿಶ್ವಕಪ್ ಕೂಡ ತಪ್ಪಿಸಿಕೊಂಡ ಅವರು 2022ರ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ನಡೆದ ಏಕದಿನ ಮತ್ತು ಟೆಸ್ಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಸಂಪೂರ್ಣವಾಗಿ ಫಿಟ್ ಆಗದ ಕಾರಣ ತಂಡದಿಂದ ಹೊರಗುಳಿದರು.
ಫೆಬ್ರವರಿ 9 ರಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಜಡೇಜಾ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಜಡೇಜಾ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.
60 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ 34.71 ಸರಾಸರಿಯಲ್ಲಿ 242 ವಿಕೆಟ್ಗಳನ್ನು ಪಡೆದಿದ್ದಾರೆ. ಮೂರು ಶತಕ ಸೇರಿದಂತೆ 36.57 ಸರಾಸರಿಯಲ್ಲಿ 2523 ರನ್ ಗಳಿಸಿದ್ದಾರೆ.
4 ಟೆಸ್ಟ್ ಪಂದ್ಯದಲ್ಲಿ 25 ವಿಕೆಟ್
ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದಾರೆ. 2016-17ರಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಕೈಗೊಂಡಾಗ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಭಾರತ ಸರಣಿ ಗೆಲ್ಲುವಲ್ಲಿ ಜಡೇಜಾ ಮಹತ್ವದ ಪಾತ್ರ ವಹಿಸಿದ್ದರು.
4 ಪಂದ್ಯಗಳ ಸರಣಿಯಲ್ಲಿ 18.56 ಸರಾಸರಿಯಲ್ಲಿ 25 ವಿಕೆಟ್ ಪಡೆದು ಮಿಂಚಿದ್ದರು. ಆರು ಇನ್ನಿಂಗ್ಸ್ಗಳಲ್ಲಿ 25.40 ಸರಾಸರಿಯಲ್ಲಿ ಎರಡು ಅರ್ಧಶತಕ ಸೇರಿದಂತೆ 127 ರನ್ ಗಳಿಸಿದ್ದರು. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಸರಣಿ ಆಟಗಾರ ಪ್ರಶಸ್ತಿ ಪಡೆದಿದ್ದರು.
2044ರ ನಂತರ ಭಾರತದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆದ್ದಿಲ್ಲ. ಸರಣಿ ಗೆಲ್ಲುವ ಉದ್ದೇಶದೊಂದಿಗೆ ಈ ಬಾರಿ ಬಲಿಷ್ಟ ತಂಡದೊಂದಿಗೆ ಭಾರತಕ್ಕೆ ಬರುತ್ತಿದೆ. ಜನವರಿ 31ರಂದು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ.