ಸರಣಿ ಜೀವಂತವಾಗಿಡಲು ಲಂಕಾಗಿತ್ತು ಅವಕಾಶ!
ಭಾರತಕ್ಕೆ ಪಂದ್ಯ ಗೆಲ್ಲಲು ಇನ್ನು 8 ರನ್ ಬಾಕಿಯಿದ್ದಾಗ ಕ್ರೀಡಾಂಗಣದಲ್ಲಿದ್ದ ಶ್ರೀಲಂಕಾ ತಂಡದ ಬೆಂಬಲಿಗರು ಹತಾಶೆಗೊಂಡರು. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಲಂಕಾಕ್ಕೆ ಸರಣಿಯನ್ನು ಜೀವಂತವಾಗಿಡಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು.
ಬಾಟಲಿ ಎಸೆದು ದಾಂಧಲೆ
ಆದರೆ, ಅದು ಸೋಲುವುದು ಪಕ್ಕಾ ಆದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪ್ರೇಕ್ಷಕರು ತಮ್ಮಲ್ಲಿದ್ದ ನೀರಿನ ಬಾಟಲ್ ಗಳನ್ನು ಮೈದಾನದೊಳಕ್ಕೆ ಎಸೆದು ದಾಂಧಲೆ ನಡೆಸಿದರು. ಆ ಹೊತ್ತಿಗೆ, ಭಾರತದ ಪರವಾಗಿ 122 ರನ್ ಗಳಿಸಿದ್ದ ರೋಹಿತ್ ಶರ್ಮಾ, 61 ರನ್ ಗಳಿಸಿದ್ದ ಧೋನಿ ಇದ್ದರು.
ಅಂಪೈರ್ ಗಳ ಬಳಿ ಚರ್ಚೆ
ಪ್ರೇಕ್ಷಕರ ಗಲಭೆಯಿಂದಾಗಿ, ಪಂದ್ಯವನ್ನು 35 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಮೊದಲಿಗೆ ಗಲಾಟೆ ನಿಯಂತ್ರಿಸಲು ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ನಿರತರಾಗಿದ್ದಾಗಲೇ ಪಂದ್ಯವನ್ನು ನಿಲ್ಲಿಸಲಾಗಿತ್ತು. ಫೀಲ್ಡಿಂಗ್ ಮಾಡುತ್ತಿದ್ದ ಲಂಕಾ ಆಟಗಾರರು , ಬ್ಯಾಟ್ಸ್ ಮನ್ ಗಳು ಕ್ರೀಸ್ ನತ್ತ ಬಂದು ಅಂಪೈರ್ ಗಳ ಬಳಿ ಚರ್ಚೆ ನಡೆಸುತ್ತಿದ್ದರು.
ಪುನಃ ಶುರುವಾದ ಆಟ, ಭಾರತದ ಗೆಲುವು
ಇತ್ತ ಧೋನಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಮೈದಾನದಲ್ಲೇ ಬೋರಲಾಗಿ ಮಲಗಿ ಕೊಂಚ ವಿಶ್ರಾಂತಿ ಪಡೆದುಕೊಂಡರು. ಕೆಲ ನಿಮಿಷಗಳ ಬಿಡುವಿನ ನಂತರ, ಗಲಾಟೆ ತಣ್ಣಗಾದ ಮೇಲೆ ಪುನಃ ಆಟ ಶುರುವಾಗಿ ಭಾರತ ಗೆಲುವು ಸಾಧಿಸಿತು. (ಚಿತ್ರ: ಸಮೀರ್ ಅಲ್ಲಾನಾ ಟ್ವಿಟ್ಟರ್ ಖಾತೆ)
|
ಕೇಜ್ರಿವಾಲ್ ಫೋಟೋ ಹಾಕಿ ಕಿಂಡಲ್
ಅದೆಲ್ಲಾ ಒಂದೆಡೆ ಇರಲಿ. ಧೋನಿ ಮಲಗಿದ್ದನ್ನು ಕೆಲವು ಶ್ಲಾಘಿಸಿದ್ದರೆ, ಧೋನಿಯವರ ಈ ಫೋಟೋವನ್ನು ಯೋಗ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಲಗಿದ್ದಕ್ಕೆ ಹೋಲಿಸಿದ್ದಾರೆ. ಇನ್ನೂ ಕೆಲವರು, ಧೋನಿ ಪಕ್ಕ ಪೂರ್ತಿ ಬ್ಲಾಂಕೆಟ್ ಹೊದ್ದುಕೊಂಡಿರುವ ಅರವಿಂದ್ ಕೇಜ್ರಿವಾಲ್ ಫೋಟೋ ಹಾಕಿ ಕಿಂಡಲ್ ಮಾಡಿದ್ದಾರೆ.