
ಅಪರಾಜಿತ್ ಅರ್ಧಶತಕ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 25) ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ತಮಿಳುನಾಡು ತಂಡ, ಅಭಿನವ್ ಮುಕುಂದ್ 85, ಬಾಬಾ ಅಪರಾಜಿತ್ 66, ವಿಜಯ್ ಶಂಕರ್ 38, ಶಾರುಖ್ ಖಾನ್ 27 ರನ್ ನೆರವಿನೊಂದಿಗೆ 49.5 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದು 252 ರನ್ ಮಾಡಿತ್ತು.

ಮಿಥುನ್ಗೆ ಹ್ಯಾಟ್ರಿಕ್ ವಿಕೆಟ್
ತಮಿಳುನಾಡು ಇನ್ನಿಂಗ್ಸ್ನಲ್ಲಿ ಮಿಥುನ್, ಕ್ರಮವಾಗಿ ಮುರುಳಿ ವಿಜಯ್, ವಿಜಯ್ ಶಂಕರ್, ಶಾರುಖ್ ಖಾನ್, ಎಂ ಮೊಹಮ್ಮದ್ ಮತ್ತು ಮುರುಗನ್ ಅಶ್ವಿನ್ ವಿಕೆಟ್ಗಳನ್ನು ಮುರಿದರು. ಕೊನೇ ಓವರ್ ಅಂದರೆ 49.3, 49.4, 49.5ನೇ ಓವರ್ನಲ್ಲಿ ಮಿಥುನ್ಗೆ ಹ್ಯಾಟ್ರಿಕ್ ವಿಕೆಟ್ ಲಭಿಸಿತು. ವಿಜಯ್ ಹಜಾರೆ ಫೈನಲ್ನಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದ ಮೊದಲ ಕರ್ನಾಟಕ ಆಟಗಾರ ಅಭಿಮನ್ಯು.

ರಾಹುಲ್-ಮಯಾಂಕ್ ಬ್ಯಾಟಿಂಗ್
ಗುರಿ ಬೆಂಬತ್ತಿದ ಕರ್ನಾಟಕ, ಕೆಎಲ್ ರಾಹುಲ್ 52 (72 ಎಸೆತ), ಮಯಾಂಕ್ ಅಗರ್ವಾಲ್ 69 (55 ಎಸೆತ), ದೇವದತ್ ಪಡಿಕ್ಕಲ್ 11 ರನ್ನೊಂದಿಗೆ 23 ಓವರ್ಗೆ 1 ವಿಕೆಟ್ ನಷ್ಟದಲ್ಲಿ 146 ರನ್ ಮಾಡಿತು. ಅನಂತರ ಮಳೆ ಸುರಿದಿದ್ದರಿಂದ ವಿಜೆಡಿ (ವಿ ಜಯದೇವನ್) ನಿಯಮದ ಆಧಾರದಲ್ಲಿ ಕರ್ನಾಟಕ 60 ರನ್ ಗೆಲುವನ್ನಾಚರಿಸಿತು (ಈ ನಿಯಮದ ಪ್ರಕಾರ ಕರ್ನಾಟಕ 23 ಓವರ್ಗೆ 86 ರನ್ ಬಾರಿಸಬೇಕಿತ್ತು).

4ನೇ ಬಾರಿಗೆ ಚಾಂಪಿಯನ್
ತಮಿಳುನಾಡು ಇನ್ನಿಂಗ್ಸ್ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 5 (34 ರನ್), ವಿ ಕೌಶಿಕ್ 2, ಪ್ರತೀಕ್ ಜೈನ್ 1, ಕೃಷ್ಣಪ್ಪ ಗೌತಮ್ 1 ವಿಕೆಟ್ ಪಡೆದರು. ಕರ್ನಾಟಕ ತಂಡ 2013-14, 2014-15, 2017-18 ಮತ್ತು 2019-20 ಸೇರಿ ಒಟ್ಟಿಗೆ 4 ಬಾರಿ ಪ್ರಶಸ್ತಿ ಜಯಿಸಿದಂತಾಗಿದೆ.


Click it and Unblock the Notifications












